Home / ಕವನ / ಕವಿತೆ / ಜೇನು ನಾವು – ನೋವು ನಾವು…

ಜೇನು ನಾವು – ನೋವು ನಾವು…

ಜೇನು ನಾವು
ನೋವು ನಾವು
ಕೈಗೆ ಸಿಕ್ಕರೆ
ಒಸಗಿ ಹಾಕುವಿರೆಂಬಾ ಶಂಕೆ!
ಊದಿದಾ ಶಂಕು ಊದೂತ್ತಾ
ಗಿಳಿ ಪಾಠ ಒಪ್ಪಿಸುತ್ತಾ
ನಿತ್ಯ ಜಿಗಿ, ಜಿಗಿದು, ಕುಣಿ, ಕುಣಿದು, ಹಾರುತ್ತಾ
ಏಳು ಕೆರೆ, ನೀರು ಕುಡಿದು
ಹೂವಿಂದಾ ಹೂವಿಗೇ ಹಾರಿ,
ನಿಮ್ಮ ಕಾಲ ಬಳಿ ಸಾರಿ,
ಮಕರಂದಾ ಹೀರಿ
ಜೇಡರದೀ…
ಪರಿಶ್ರಮದಿ…
ನಮ್ಮೀ ಜೀವನ!


ನಿತ್ಯ ದುಡಿಮೆ ಸದಾ ನೆಮ್ಮದಿ!
ದುರಾಸೆ ದುರುಳರೆ,
ನಮ್ಮ ಹುಟ್ಟಿಗೆ
ಕಲ್ಲು ಹೊಡೆವ ತುಡುಗರೆ,
ಶತ ಶತಮಾನದ ಸಿಹಿ ಸವಿ,
ಬಯಸಿ, ಬೊಗಸೆಗಟ್ಟಲೆ
ಜೇನು ಹೀರಿ ಹೀರಿ…
ರುಚಿ ಹತ್ತಿಸಿಕೊಂಡು,
ತೆವಲು ಹತ್ತಿಸಿಕೊಂಡು,
ಬೆನ್ನು ಅಟ್ಟಿಸಿಕೊಂಡು,
ಎಲ್ಲಿ ಅಡಗಿ ಕುಳಿತರೂ ಬಿಡದೆ,
ಹೊಡೆದಿರಿ
ಬಡೆದಿರಿ
ಭೋಗಿಸಿದಿರಿ
ಬಿಲ್ಲಿನಂತೆ ಬಗ್ಗಿಸಿದಿರಿ.


ನಿಮ್ಮೀತಾತ ಮುತ್ತಾತರು
ತುಪ್ಪಕ್ಕಾಗಿ ನಮ್ಮ ತೊತ್ತಾಗಿಸಿ,
ಹಗಲಿರುಳು ಗೇಯಿಸಿಕೊಂಡು
ಕದ್ದು ಕದ್ದು ಕೇಯಿಸಿಕೊಂಡು,
ಕೊಬ್ಬಿದಾ ಕುಣಿಗಲ್ ಕುದುರೆಗಳು ಕೆನೆಯುತ್ತೀರಿ,
ಕತ್ತಿ ಮಸೆಯುತ್ತೀರಿ,
ಅಟ್ಟಹಾಸದಿ ಕಿಸೆಯುತ್ತೀರಿ!
ಹಸಿ ಹಸಿ ರಕ್ತ ಹೀರುತ್ತೀರಿ
ಹದದ ಚರ್‍ಮಾ ಸುಖಕ್ಕಾಗಿ
ಜೊಲ್ಲು ಸುರಿಸುತ್ತೀರಿ!
ನಮ್ಮ ಹುಟ್ಟು ನಿಮಗೆ
ಶತ ಶತಮಾನದ ಪರಿತಾಪ
ಜನ್ಮ ಜನ್ಮಾದ ಶಾಪ!
ನಿತ್ಯ ದೀಪ ಉರಿ ಉರಿದು
ಬೆಳಕ ತಾ ಸುಟ್ಟು ನೀಡುವಂತೆ,
ನಮ್ಮೀ ಸಿಹಿ ಸಿಹಿ ಸವಿ ನಿಮಗೆ
ಎಂದೂ ತಪ್ಪದ ತುಪ್ಪ ನಿಮಗೆ!


ಅಯ್ಯೋ! ಹೆಪ್ಪಿಟ್ಟಿತು ರಕ್ತ
ತೃಪ್ತಿ ಪಡಿಸಲು ನಾವೇ ಶಕ್ತ
ಇಷ್ಟಾದರೂ ಬಹಿಷ್ಕಾರ, ಕೊಲ್ಲುವುದು, ಏಕೆ?!
ಬೆಂಕಿಯಿಟ್ಟು ನಮ್ಮನು
ಹೊಗೆಯೆಬ್ಬಿಸಿ
ಒಕ್ಕಲೆಬ್ಬಿಸಿ
ದಿಕ್ಕಾಪಾಲಾಗಿಸಿದ್ದು ಸುಮ್ಮನೆ!
ನಿಮ್ಮ ವಕ್ರ ಬುದ್ಧಿ ಬಿಮ್ಮನೆ!!
ನಮ್ಮ ಪಾಲಿಗೆ, ಬರೀ ನೋವು
ಕಣ್ಣು ಕೆಂಡ ಸಂಪಿಗೆ, ನಿಗಿ ನಿಗಿ
ಕಡು ತಲೆ ತಾಪ, ಕೋಪ…


ಸಾಕು! ಸಾಕು… ನಿಮ್ಮೀ ಹುಚ್ಚು ಹುಚ್ಚಾಟ!
ಕೆರಳಿ ಸಿಂಹಾಗಿದ್ದೇವೆ-
ಖಂಡಿತ ನಾವೀಗ ಕಚ್ಚುವೆವು…
ಹುಚ್ಚರಂತೆ ನಿಮ್ಮ ಓಡಿಸದೆ ಬಿಡೆವು!!
ಇನ್ನಿಮ್ಮ ಹುಟ್ಟಾಡಗಿಸದೆ ಬಿಡೆವು.
ಎಚ್ಚರ…
ಬಲು ಎಚ್ಚರ…
*****
(ಸ್ಫೂರ್ತಿ: ೧೯೯೮ರಲ್ಲಿ ನನ್ನ ಕವಿಮಿತ್ರ, ಮೈಸೂರು ಲೋಕೇಶ್‌ನೊಂದಿಗೆ, ಯಾಣಕ್ಕೆ ಭೇಟಿ ಮಾಡಿದ ರಾತ್ರಿ, ತಂಗುದಾಣದಲ್ಲಿ ರಚಿಸಿ, ವಾಚಿಸಿದ ಕವಿತೆಯಿದು…)

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...