Home / ಕವನ / ಕವಿತೆ / ಜೇನು ನಾವು – ನೋವು ನಾವು…

ಜೇನು ನಾವು – ನೋವು ನಾವು…

ಜೇನು ನಾವು
ನೋವು ನಾವು
ಕೈಗೆ ಸಿಕ್ಕರೆ
ಒಸಗಿ ಹಾಕುವಿರೆಂಬಾ ಶಂಕೆ!
ಊದಿದಾ ಶಂಕು ಊದೂತ್ತಾ
ಗಿಳಿ ಪಾಠ ಒಪ್ಪಿಸುತ್ತಾ
ನಿತ್ಯ ಜಿಗಿ, ಜಿಗಿದು, ಕುಣಿ, ಕುಣಿದು, ಹಾರುತ್ತಾ
ಏಳು ಕೆರೆ, ನೀರು ಕುಡಿದು
ಹೂವಿಂದಾ ಹೂವಿಗೇ ಹಾರಿ,
ನಿಮ್ಮ ಕಾಲ ಬಳಿ ಸಾರಿ,
ಮಕರಂದಾ ಹೀರಿ
ಜೇಡರದೀ…
ಪರಿಶ್ರಮದಿ…
ನಮ್ಮೀ ಜೀವನ!


ನಿತ್ಯ ದುಡಿಮೆ ಸದಾ ನೆಮ್ಮದಿ!
ದುರಾಸೆ ದುರುಳರೆ,
ನಮ್ಮ ಹುಟ್ಟಿಗೆ
ಕಲ್ಲು ಹೊಡೆವ ತುಡುಗರೆ,
ಶತ ಶತಮಾನದ ಸಿಹಿ ಸವಿ,
ಬಯಸಿ, ಬೊಗಸೆಗಟ್ಟಲೆ
ಜೇನು ಹೀರಿ ಹೀರಿ…
ರುಚಿ ಹತ್ತಿಸಿಕೊಂಡು,
ತೆವಲು ಹತ್ತಿಸಿಕೊಂಡು,
ಬೆನ್ನು ಅಟ್ಟಿಸಿಕೊಂಡು,
ಎಲ್ಲಿ ಅಡಗಿ ಕುಳಿತರೂ ಬಿಡದೆ,
ಹೊಡೆದಿರಿ
ಬಡೆದಿರಿ
ಭೋಗಿಸಿದಿರಿ
ಬಿಲ್ಲಿನಂತೆ ಬಗ್ಗಿಸಿದಿರಿ.


ನಿಮ್ಮೀತಾತ ಮುತ್ತಾತರು
ತುಪ್ಪಕ್ಕಾಗಿ ನಮ್ಮ ತೊತ್ತಾಗಿಸಿ,
ಹಗಲಿರುಳು ಗೇಯಿಸಿಕೊಂಡು
ಕದ್ದು ಕದ್ದು ಕೇಯಿಸಿಕೊಂಡು,
ಕೊಬ್ಬಿದಾ ಕುಣಿಗಲ್ ಕುದುರೆಗಳು ಕೆನೆಯುತ್ತೀರಿ,
ಕತ್ತಿ ಮಸೆಯುತ್ತೀರಿ,
ಅಟ್ಟಹಾಸದಿ ಕಿಸೆಯುತ್ತೀರಿ!
ಹಸಿ ಹಸಿ ರಕ್ತ ಹೀರುತ್ತೀರಿ
ಹದದ ಚರ್‍ಮಾ ಸುಖಕ್ಕಾಗಿ
ಜೊಲ್ಲು ಸುರಿಸುತ್ತೀರಿ!
ನಮ್ಮ ಹುಟ್ಟು ನಿಮಗೆ
ಶತ ಶತಮಾನದ ಪರಿತಾಪ
ಜನ್ಮ ಜನ್ಮಾದ ಶಾಪ!
ನಿತ್ಯ ದೀಪ ಉರಿ ಉರಿದು
ಬೆಳಕ ತಾ ಸುಟ್ಟು ನೀಡುವಂತೆ,
ನಮ್ಮೀ ಸಿಹಿ ಸಿಹಿ ಸವಿ ನಿಮಗೆ
ಎಂದೂ ತಪ್ಪದ ತುಪ್ಪ ನಿಮಗೆ!


ಅಯ್ಯೋ! ಹೆಪ್ಪಿಟ್ಟಿತು ರಕ್ತ
ತೃಪ್ತಿ ಪಡಿಸಲು ನಾವೇ ಶಕ್ತ
ಇಷ್ಟಾದರೂ ಬಹಿಷ್ಕಾರ, ಕೊಲ್ಲುವುದು, ಏಕೆ?!
ಬೆಂಕಿಯಿಟ್ಟು ನಮ್ಮನು
ಹೊಗೆಯೆಬ್ಬಿಸಿ
ಒಕ್ಕಲೆಬ್ಬಿಸಿ
ದಿಕ್ಕಾಪಾಲಾಗಿಸಿದ್ದು ಸುಮ್ಮನೆ!
ನಿಮ್ಮ ವಕ್ರ ಬುದ್ಧಿ ಬಿಮ್ಮನೆ!!
ನಮ್ಮ ಪಾಲಿಗೆ, ಬರೀ ನೋವು
ಕಣ್ಣು ಕೆಂಡ ಸಂಪಿಗೆ, ನಿಗಿ ನಿಗಿ
ಕಡು ತಲೆ ತಾಪ, ಕೋಪ…


ಸಾಕು! ಸಾಕು… ನಿಮ್ಮೀ ಹುಚ್ಚು ಹುಚ್ಚಾಟ!
ಕೆರಳಿ ಸಿಂಹಾಗಿದ್ದೇವೆ-
ಖಂಡಿತ ನಾವೀಗ ಕಚ್ಚುವೆವು…
ಹುಚ್ಚರಂತೆ ನಿಮ್ಮ ಓಡಿಸದೆ ಬಿಡೆವು!!
ಇನ್ನಿಮ್ಮ ಹುಟ್ಟಾಡಗಿಸದೆ ಬಿಡೆವು.
ಎಚ್ಚರ…
ಬಲು ಎಚ್ಚರ…
*****
(ಸ್ಫೂರ್ತಿ: ೧೯೯೮ರಲ್ಲಿ ನನ್ನ ಕವಿಮಿತ್ರ, ಮೈಸೂರು ಲೋಕೇಶ್‌ನೊಂದಿಗೆ, ಯಾಣಕ್ಕೆ ಭೇಟಿ ಮಾಡಿದ ರಾತ್ರಿ, ತಂಗುದಾಣದಲ್ಲಿ ರಚಿಸಿ, ವಾಚಿಸಿದ ಕವಿತೆಯಿದು…)

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...