Home / ಬಾಲ ಚಿಲುಮೆ / ಕವಿತೆ / ಪುಟ್ಟನ ಕಚೇರಿ

ಪುಟ್ಟನ ಕಚೇರಿ

ಪುಟ್ಟನ ಮನೆ ಮುಂದೆ ಇದೇನು ಕೂಟ
ಇಷ್ಟು ಬೆಳಿಗ್ಗೆಯೆ ಊರವರ ಕಾಟ
ಕೆಲವರು ಕುಂತು ಕೆಲವರು ನಿಂತು
ಹಲವರು ಹಣಿಕಿ ಉಳಿದವರಿಣುಕಿ
ಹಾಡುತ್ತಿರುವನು ಪುಟ್ಟನು ಎಂದು
ಜನ ಬಂದಿರುವರು ಕೇಳಲು ಇಂದು
ಪುಟ್ಟನ ಗಾಯನ ಒಂದೇ ಸವನೆ
ನಡೆದಿದೆ ಯಾರದೆ ಪರಿವಿಲ್ಲದೆನೆ
ಮಂದ್ರ ಮಧ್ಯಮ ತಾರಕ ಬಿಂದಿಗೆ
ಎಲ್ಲಾ ಶ್ರುತಿಗಳು ಕೃತಿಗಳು ಒಂದಿಗೆ
ತಲೆದೂಗುತಾರೆ ಕೇಳುವ ಜನಗಳು
ಅದೆಂಥ ಭಾವ ತುಂಬಿದೆ ಇವನೊಳು
ಹರಿದರಿದು ಬರುತಿದೆ ಕಣ್ಣೀರ ಧಾರೆ
ದನಿಯೆಂಥ ದನಿಯಿತು ವ್ಹಾರೆ ವ್ಹಾರೆ
ಬಾಲಪ್ರತಿಭೆಯಿವ ಚೆಂಬೈಗೂ ಸಮ
ಇವನೆದುರು ಇನ್ನೆಲ್ಲರು ಬರೀ ಸರಿಗಮ
ಚರ್ಚೆ ಸುರುವಾಗುವುದು ರಾಗದ ಕುರಿತು
ಒಬ್ಬೊಬ್ಬರು ತಮ್ಮ ಬುದ್ಧಿಯಂತರಿತು
ಒಬ್ಬನೆಂದರೆ ಇದು ಕೇದಾರ ಗೌಳ
ಇನ್ನೊಬ್ಬನ ಹಟ ರೀತಿ ಗೌಳ
ಆಗ ಶುರುವಾಗುವುದು ಭಾರೀ ಜಗಳ
ಯಾಕೆಂದರೆ ಇದು ಮಾಯಾಮಾಳವ ಗೌಳ
ಕೆಲವರಭೇರಿ ಕೆಲವರು ಬಿಲಹರಿ
ದೇವಗಾಂಧಾರಿ ಗೌರಿಮನೋಹರಿ
ಖರಹರಪ್ರಿಯ ನಾಟಿಕುರಂಜಿ
ಆನಂದ ಭೈರವಿ ಪೂರ್ವಕಲ್ಯಾಣಿ
ಮಲಯಮಾರುತ ಪಂತುವರಾಳಿ
ಸಿಂಹೇಂದ್ರಮಧ್ಯಮ ಸಿಂಧುಭೈರವಿ
ಒನ್ಸ್ ಮೋರೆಂದು ಕೂಗಲು ಕೆಲವರು
ಟ್ವೈಸ್ ಮೋರೆಂದು ಇನ್ನೂ ಹಲವರು
ಮೋರ್ ಮೋರೆಂಬ ಗುಂಪೂ ಇತ್ತು
ಈ ಮಧ್ಯೆ ಗಾಯನ ಜೋರಾಗ್ತ ಹೋಯ್ತು
ಆಗಲೆ ಬಂದಳು ಪುಟ್ಪನ ಅಮ್ಮ
ಕೈಯಲಿ ಎತ್ಕೊಂಡು ಅಂಗಡಿ ಸಾಮಾನ್ನ
ಅಯ್ಯೋ ಕಂದಾ ಹಸಿವಾಯ್ತೇನಪ
ಯಾಕಿಂಗಳ್ತೀ ನಂದೇ ತಪ್ಪ
ಕರಕೊಂಡು ಹೋದಳು ಪುಟ್ಟನ ಒಳಕ್ಕೆ
ಕಾಲು ಕಿತ್ತರು ಶ್ರಾವಕರು ಹೊರಕ್ಕೆ
ಇಂತು ಸಂಪನ್ನ ಪುಟ್ಪನ ಕಚೇರಿ
ಹೊಟ್ಟೆಗೆ ಸೇರಲು ಮೂರ್ನಾಲ್ಕು ಪೂರಿ!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...