Home / ಬಾಲ ಚಿಲುಮೆ / ಕವಿತೆ / ಪುಟ್ಟನ ಕಚೇರಿ

ಪುಟ್ಟನ ಕಚೇರಿ

ಪುಟ್ಟನ ಮನೆ ಮುಂದೆ ಇದೇನು ಕೂಟ
ಇಷ್ಟು ಬೆಳಿಗ್ಗೆಯೆ ಊರವರ ಕಾಟ
ಕೆಲವರು ಕುಂತು ಕೆಲವರು ನಿಂತು
ಹಲವರು ಹಣಿಕಿ ಉಳಿದವರಿಣುಕಿ
ಹಾಡುತ್ತಿರುವನು ಪುಟ್ಟನು ಎಂದು
ಜನ ಬಂದಿರುವರು ಕೇಳಲು ಇಂದು
ಪುಟ್ಟನ ಗಾಯನ ಒಂದೇ ಸವನೆ
ನಡೆದಿದೆ ಯಾರದೆ ಪರಿವಿಲ್ಲದೆನೆ
ಮಂದ್ರ ಮಧ್ಯಮ ತಾರಕ ಬಿಂದಿಗೆ
ಎಲ್ಲಾ ಶ್ರುತಿಗಳು ಕೃತಿಗಳು ಒಂದಿಗೆ
ತಲೆದೂಗುತಾರೆ ಕೇಳುವ ಜನಗಳು
ಅದೆಂಥ ಭಾವ ತುಂಬಿದೆ ಇವನೊಳು
ಹರಿದರಿದು ಬರುತಿದೆ ಕಣ್ಣೀರ ಧಾರೆ
ದನಿಯೆಂಥ ದನಿಯಿತು ವ್ಹಾರೆ ವ್ಹಾರೆ
ಬಾಲಪ್ರತಿಭೆಯಿವ ಚೆಂಬೈಗೂ ಸಮ
ಇವನೆದುರು ಇನ್ನೆಲ್ಲರು ಬರೀ ಸರಿಗಮ
ಚರ್ಚೆ ಸುರುವಾಗುವುದು ರಾಗದ ಕುರಿತು
ಒಬ್ಬೊಬ್ಬರು ತಮ್ಮ ಬುದ್ಧಿಯಂತರಿತು
ಒಬ್ಬನೆಂದರೆ ಇದು ಕೇದಾರ ಗೌಳ
ಇನ್ನೊಬ್ಬನ ಹಟ ರೀತಿ ಗೌಳ
ಆಗ ಶುರುವಾಗುವುದು ಭಾರೀ ಜಗಳ
ಯಾಕೆಂದರೆ ಇದು ಮಾಯಾಮಾಳವ ಗೌಳ
ಕೆಲವರಭೇರಿ ಕೆಲವರು ಬಿಲಹರಿ
ದೇವಗಾಂಧಾರಿ ಗೌರಿಮನೋಹರಿ
ಖರಹರಪ್ರಿಯ ನಾಟಿಕುರಂಜಿ
ಆನಂದ ಭೈರವಿ ಪೂರ್ವಕಲ್ಯಾಣಿ
ಮಲಯಮಾರುತ ಪಂತುವರಾಳಿ
ಸಿಂಹೇಂದ್ರಮಧ್ಯಮ ಸಿಂಧುಭೈರವಿ
ಒನ್ಸ್ ಮೋರೆಂದು ಕೂಗಲು ಕೆಲವರು
ಟ್ವೈಸ್ ಮೋರೆಂದು ಇನ್ನೂ ಹಲವರು
ಮೋರ್ ಮೋರೆಂಬ ಗುಂಪೂ ಇತ್ತು
ಈ ಮಧ್ಯೆ ಗಾಯನ ಜೋರಾಗ್ತ ಹೋಯ್ತು
ಆಗಲೆ ಬಂದಳು ಪುಟ್ಪನ ಅಮ್ಮ
ಕೈಯಲಿ ಎತ್ಕೊಂಡು ಅಂಗಡಿ ಸಾಮಾನ್ನ
ಅಯ್ಯೋ ಕಂದಾ ಹಸಿವಾಯ್ತೇನಪ
ಯಾಕಿಂಗಳ್ತೀ ನಂದೇ ತಪ್ಪ
ಕರಕೊಂಡು ಹೋದಳು ಪುಟ್ಟನ ಒಳಕ್ಕೆ
ಕಾಲು ಕಿತ್ತರು ಶ್ರಾವಕರು ಹೊರಕ್ಕೆ
ಇಂತು ಸಂಪನ್ನ ಪುಟ್ಪನ ಕಚೇರಿ
ಹೊಟ್ಟೆಗೆ ಸೇರಲು ಮೂರ್ನಾಲ್ಕು ಪೂರಿ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...