Home / ಬಾಲ ಚಿಲುಮೆ / ಕವಿತೆ / ಪುಟ್ಟನ ಕಚೇರಿ

ಪುಟ್ಟನ ಕಚೇರಿ

ಪುಟ್ಟನ ಮನೆ ಮುಂದೆ ಇದೇನು ಕೂಟ
ಇಷ್ಟು ಬೆಳಿಗ್ಗೆಯೆ ಊರವರ ಕಾಟ
ಕೆಲವರು ಕುಂತು ಕೆಲವರು ನಿಂತು
ಹಲವರು ಹಣಿಕಿ ಉಳಿದವರಿಣುಕಿ
ಹಾಡುತ್ತಿರುವನು ಪುಟ್ಟನು ಎಂದು
ಜನ ಬಂದಿರುವರು ಕೇಳಲು ಇಂದು
ಪುಟ್ಟನ ಗಾಯನ ಒಂದೇ ಸವನೆ
ನಡೆದಿದೆ ಯಾರದೆ ಪರಿವಿಲ್ಲದೆನೆ
ಮಂದ್ರ ಮಧ್ಯಮ ತಾರಕ ಬಿಂದಿಗೆ
ಎಲ್ಲಾ ಶ್ರುತಿಗಳು ಕೃತಿಗಳು ಒಂದಿಗೆ
ತಲೆದೂಗುತಾರೆ ಕೇಳುವ ಜನಗಳು
ಅದೆಂಥ ಭಾವ ತುಂಬಿದೆ ಇವನೊಳು
ಹರಿದರಿದು ಬರುತಿದೆ ಕಣ್ಣೀರ ಧಾರೆ
ದನಿಯೆಂಥ ದನಿಯಿತು ವ್ಹಾರೆ ವ್ಹಾರೆ
ಬಾಲಪ್ರತಿಭೆಯಿವ ಚೆಂಬೈಗೂ ಸಮ
ಇವನೆದುರು ಇನ್ನೆಲ್ಲರು ಬರೀ ಸರಿಗಮ
ಚರ್ಚೆ ಸುರುವಾಗುವುದು ರಾಗದ ಕುರಿತು
ಒಬ್ಬೊಬ್ಬರು ತಮ್ಮ ಬುದ್ಧಿಯಂತರಿತು
ಒಬ್ಬನೆಂದರೆ ಇದು ಕೇದಾರ ಗೌಳ
ಇನ್ನೊಬ್ಬನ ಹಟ ರೀತಿ ಗೌಳ
ಆಗ ಶುರುವಾಗುವುದು ಭಾರೀ ಜಗಳ
ಯಾಕೆಂದರೆ ಇದು ಮಾಯಾಮಾಳವ ಗೌಳ
ಕೆಲವರಭೇರಿ ಕೆಲವರು ಬಿಲಹರಿ
ದೇವಗಾಂಧಾರಿ ಗೌರಿಮನೋಹರಿ
ಖರಹರಪ್ರಿಯ ನಾಟಿಕುರಂಜಿ
ಆನಂದ ಭೈರವಿ ಪೂರ್ವಕಲ್ಯಾಣಿ
ಮಲಯಮಾರುತ ಪಂತುವರಾಳಿ
ಸಿಂಹೇಂದ್ರಮಧ್ಯಮ ಸಿಂಧುಭೈರವಿ
ಒನ್ಸ್ ಮೋರೆಂದು ಕೂಗಲು ಕೆಲವರು
ಟ್ವೈಸ್ ಮೋರೆಂದು ಇನ್ನೂ ಹಲವರು
ಮೋರ್ ಮೋರೆಂಬ ಗುಂಪೂ ಇತ್ತು
ಈ ಮಧ್ಯೆ ಗಾಯನ ಜೋರಾಗ್ತ ಹೋಯ್ತು
ಆಗಲೆ ಬಂದಳು ಪುಟ್ಪನ ಅಮ್ಮ
ಕೈಯಲಿ ಎತ್ಕೊಂಡು ಅಂಗಡಿ ಸಾಮಾನ್ನ
ಅಯ್ಯೋ ಕಂದಾ ಹಸಿವಾಯ್ತೇನಪ
ಯಾಕಿಂಗಳ್ತೀ ನಂದೇ ತಪ್ಪ
ಕರಕೊಂಡು ಹೋದಳು ಪುಟ್ಟನ ಒಳಕ್ಕೆ
ಕಾಲು ಕಿತ್ತರು ಶ್ರಾವಕರು ಹೊರಕ್ಕೆ
ಇಂತು ಸಂಪನ್ನ ಪುಟ್ಪನ ಕಚೇರಿ
ಹೊಟ್ಟೆಗೆ ಸೇರಲು ಮೂರ್ನಾಲ್ಕು ಪೂರಿ!
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...