Home / ಕವನ / ಕವಿತೆ / ಹೆದ್ದಾರಿಗುಂಟ

ಹೆದ್ದಾರಿಗುಂಟ

“ಹೆದ್ದಾರಿಗುಂಟ ರಾತ್ರಿ ಏನೆಲ್ಲ ನಡೆಯಬಹುದೆಂದು
ಹೆದರಿಕೊಂಡೇ ‘ಹಗಲಿನಲ್ಲಿಯೇ ಹೊರಟಿದ್ದೇನೆ’
safe ಆಗಿ ನನ್ನೂರು ತಲುಪಲು”

ಊರಿಂದೂರಿನ ಸರಪಳಿ ರಸ್ತೆಗಳ ಏರಿಳಿತ ನೋಡಲು
ವಿಶಾಲ ವಿಹಂಗಮ ನಿಸರ್ಗಕಾಣಲು
ಅಷ್ಟೇ ಅಲ್ಲ ಅಗಾಗ ತೂಕಡಿಕೆ ಬಂದರೂ
ಸ್ವಲ್ಪ ನೆಮ್ಮದಿಯಾಗಿ ಮಲಗಲೂ ಎಂದು
ಮುಂದಿನ ಸೀಟಿನಲ್ಲಿಯೇ ಕುಳಿತದ್ದು
ಗೊತ್ತಲ್ಲ ನಿಮಗೂ
ಹಿಂದಿನ ಸೀಟು ಎಬ್ಬೆಬ್ಬಿಸಿ ಒಗೆಯುವದೆಂದು

ನಮ್ಮ ಡ್ರೈವರು ತುಂಬಾ ತಲೆಹಿಡುಕ
Private Luxury bus ಬೇರೆ ನೋಡಿ
ಚಹಾದ ಅಂಗಡಿ ಬೀಡಿ ಅಂಗಡಿ
ಗಬ್ಬೆದ್ದಿರುವ ನೊಣಗಳ ಡಾಬ
ಕಳ್ಳಿನ ಹಳಸುನಾತಿನ ಹೊಟೇಲುಗಳ ಈ ಹೆದ್ದಾರಿಗುಂಟೆಲ್ಲ
ಇವನಿಗೆ ಜಿಗರಿದೋಸ್ತಗಳ ಸರಮಾಲೆ
ಇವನಿಗೆ ಅವರೋ, ಅವರಿಗಾಗಿ ಇವನೋ ಎಂಬಂತೆ.
ಓಡುವ ಬಸ್ಸು ಹಾರ್ನು ತಕ್ಷಣದ ಬ್ರೇಕು
ಅಬ್ಬಬ್ಬಾ ಬಸ್ಸಪ್ಪಾ, ಏ ಬಸಪ್ಪಾ
ಕಿರುಚಾಡುವಂತಾಗುತ್ತಿತ್ತು ಮನಸ್ಸು.

ಟೊಂಗೆ ಟೊಂಗೆಗಳ ಮೇಲಿನ ಮಂಗಗಳಂತೆ
ಡ್ರೈವರ್ರನ ಅಕ್ಕಪಕ್ಕದಲ್ಲೆಲ್ಲಾ Extra ಸೀಟುಗಳು
ಬಸಪ್ಪನ ಜೇಬು ತುಂಬುವ ಅರ್ಜೆಂಟದವರು.

ರಣರಣ ಮಧ್ಯಾಹ್ನ ಬಿಸಿಲು
ಎಳೆನೀರು ಬಾಳೆಹಣ್ಣುಗಳಿದ್ದರೂ
ಪ್ರಯಾಣಿಕರಿಗೆಲ್ಲ ಬೇಕು Fancy cococolaಗಳು
ಚಳಿಹತ್ತಿ ನಡಗುವ ವಿದೇಶಿಮೂಲದವರಂತೆ
ಇಳಿದಾಗೊಮ್ಮೆ ಎಳೆಯಲು ಬ್ರಾಂಡೇಡ್ ಸಿಗರೇಟುಗಳು.
ಹೆದ್ದಾರಿಗುಂಟ ಓಡುವ ಎದುರಾಗುವ
ಚಿತ್ರವಿಚಿತ್ರ ಹೆಸರಿನ ಲಾರಿ ಬಸ್ಸು ಟೆಂಪೋಗಳು
ಬೆಟ್ಟದಹಾವು, ತಾಯಿಯಮಗ, ನಿಮ್ಮಪ್ಪನ ಮಗ,
ಅಣ್ಣಯ್ಯನ ತಮ್ಮ, ಹೆದ್ದಾರಿಬಕ ಹೀಗೆ –
ಯಕ್ಷಕನ್ನಿಕೆಯರ ಸಿನೇಮದವುಗಳ
ಮಿನಿ ಮಿಡಿ ಚಿತ್ರಗಳು ನೋಡುತ್ತ ಓದುತ್ತ
ಡ್ರೈವರ್ ಹೇಗೆ ಓಡಿಸುತ್ತಾನಪ್ಪ ಬಸ್ಸು
ಆಕ್ಸಿಡೆಂಟ್ ಮಾಡದೆಯೆ?
ಹೆದರಿ ಹಿಂದೊರಗಿ ಕಣ್ಣುಮುಚ್ಚಿದ್ದೆ-

ಸುರುವಾಯಿತು ನೋಡಿ
ಒಂದು ಜೊಂಪು ನಿದ್ದೆ ಮಾಡಿ ಎದ್ದವರ ಹರಟೆ
ಮದುವೆ ದಿಬ್ಬಣದವರಿರಬೇಕೇನೊ
ಅವರಪ್ಪನ ಮನೆಯ ಬಸ್ಸು ಎನ್ನುವಂತೆ
ಹುಡುಗ ಹುಡುಗಿ ಬಂಗಾರು ಅಂತಸ್ತುಗಳನ್ನೆಲ್ಲ
ಇಲ್ಲಿ ಕಿತಾಪತಿಸುತ್ತ
ಸಂಬಂಧಿಕರನ್ನೆಲ್ಲಾ ಮಾತಿನಲ್ಲಿ ಥಳಿಸುತ್ತಾ ಹಗುರಾಗುತ್ತಿದ್ದರು.

ನನಗೋ ಕಣ್ಣು ಮುಚ್ಚದೆಯೋ ತೆರಯದೆಯೋ
ಒಳಗೊಳಗೇ ಕಿರಿಕಿರಿಯ ಒದ್ದಾಟ.
ಬರುತ್ತಿದೆ ನನ್ನೂರು ಹತ್ತಿರ ಹತ್ತಿರ
ಸಂಜೆಯಸೂರ್ಯ ಗಲ್ಲಕ್ಕೆ ಮುದ್ದಿಟ್ಟು ಎಬ್ಬಿಸಿದ್ದ
ಹಕ್ಕಿಪಕ್ಕಿ ದನಕರುಗಳೆಲ್ಲಾ ಗೂಡು ಸೇರಲು
ಓಡುತ್ತಿರುವಾಗ ಗಕ್ಕನೆ ಬ್ರೇಕ್ ಹಾಕಿದ ಬಸ್ಸಪ್ಪಾ
ಕ್ಷಣಾರ್ಧದಲ್ಲಿಯೇ ಇಳಿದು
ಅಡ್ಡಬಂದ ಚಕ್ಕಡಿಯವನೆದೆ ಎಳೆದು ಥಳಿಸಿ
ನೂರೆಂಟು ಹಲ್ಕಾ ಬೈಗುಳಗಳನ್ನೆಲ್ಲಾ ಸುರಿದು
ಎತ್ತೂಗಳೂ ನಡುಗುವಂತೆ ಮಾಡಿದ್ದ ನಮ್ಮ ಡ್ರೈವರ್ರು
ಹೆದ್ದಾರಿಗುಂಟ ಎರಡೂ ಕಡೆಗೂ
ಅರ್ಧ ಗಂಟೆ ರಸ್ತೆ ಬ್ಲಾಕು.
ಪ್ರಯಾಣಿಕರೆಲ್ಲ ಎರಡೂ ಕಡೆಗೂ ಬಾಲಬಡಿದು
ಡ್ರೈವರ್ರನ್ನ ತಂದು ಕೂರಿಸಿ
ನಡೆಯಪ್ಪ ಬೇಗ ಊರು ಸೇರೋಣ ಬೆಳಕಿನಲ್ಲಿಯೇ
ಅಂದರೂ
ಮುಂದಿನ ಊರಿನ ಹೊಟೆಲ್ ಮುಂದೆ ನಿಲ್ಲಿಸಿಯೇಬಿಟ್ಟ.

Coffee ಸಮಯ ಪ್ರಯಾಣಿಕರ ಪರಿಚಯ ವಿಳಾಸ
ಮಾತುಕತೆಗಳಲಿ ಸಂಬಂಧಿಗಳು, ಸ್ನೇಹಿತರು, ಆಗೇಬಿಡುವದೆ!!
“ಮುಂದಿನ ಸಲ ಬೆಂಗಳೂರಿಗೆ ಬಂದರೆ ನಿಮ್ಮಲ್ಲೇ ವಸ್ತಿ
ಇನ್ನೇನೂ ತೊಂದರೆ ಇಲ್ಲ ಬಿಡಿ”
ನನ್ನ ಪರಮೀಷನ್ ಇಲ್ಲದೆ ಬುಕ್ ಮಾಡಿಕೊಂಡೇ ಬಿಟ್ಟರು.

ಅಬ್ಬಬ್ಬಾ ಯಾಕಾದರೂ ಹಗಲಿನಲ್ಲಿಯೇ ಹೊರಟೆನಪ್ಪ ಊರಿಗೆ
ಸುದೈವಕೆ ಗಾಡಿ ಪಂಕ್ಚರ್ ಆಗದೇ
ಊರು ಸೇರಿದಾಗ ಅಗಿತ್ತು ರಾತ್ರಿ ಹತ್ತು.

“ಈಗೀಗ ತೀರ್ಮಾನಿಸಿದ್ದೇನೆ
ಹೆದ್ದಾರಿಗುಂಟ ರಾತ್ರಿ
ದರೋಡೆಯಾಗಲಿ ಕೊಲೆಸುಲಿಗೆ
ಅಕ್ಸಿಡೆಂಟೇ ಆಗಲಿ
ಮತ್ತಷ್ಟು ಊಟ ಮಾಡಿ ಬೇಕಿದ್ದರೆ
ಒಂದು ನಿದ್ದೆ ಗುಳಿಗೆಯೂ ನುಂಗಿ
ನೀರು ಕುಡಿದು ಆರಾಮವಾಗಿ
ಸೀಟಿಗೊರಗಿ ಗಪ್‌ಚುಪ್‌ ನಿದ್ದೆ ಮಾಡುತ್ತ
“ರಾತ್ರಿ ಪ್ರಯಾಣ ಮಾಡಲು”!
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...