Home / ಕವನ / ಕವಿತೆ / ಹರೆ ಬಂದಿದೆ ನಮ್ಮೂರ ಕೆರೆಗೆ

ಹರೆ ಬಂದಿದೆ ನಮ್ಮೂರ ಕೆರೆಗೆ

ಹರೆ ಬಂದಿದೆ ನಮ್ಮೂರ ಕೆರೆಗೆ
ಸುತ್ತ ಮುತ್ತ ಬೆಟ್ಟದ
ಮಣ್ಣುತಿಂದು ನೀರು ಕುಡಿದು
ಕೊಬ್ಬಿದ್ದಕ್ಕೇನೋ
ಚಲ್ಲಾಟಕ್ಕೇನೋ ಸರಿ
ಮೊನ್ನೆ ಮೊನ್ನೆ ಒಂದು ಹುಡುಗನ್ನ
ಹಾರ ತಗೊಂಡು ನುಂಗಿ
ನೀರು ಕುಡಿದು
ಇಂಬಾಗಿ ಸುತ್ತ ಮುತ್ತಿನ
ಹಸಿರು ತಲೆದಿಂಬಿಗೆ ತಲೆಯಿಟ್ಟು
ತಿಳಿ ನೀಲಿ ಸೀರೆಹೊದ್ದು
ಸಾವಿರಾರು ಕೊಪ್ಪೆ ಮೀನು
ಹುಳ ಹುಪ್ಪಡಿಗಳ ಮಹಾತಾಯಿಯಾಗಿ
ಮಲಗಿದೆ.
ಮುದ್ದಿನ ಮಕ್ಕಳು
ಗಣಪತಿ, ಕಾಳಿಮಾತಾ ವಿಗ್ರಹಗಳು
ತಾಬೂತ್ ಮಂಟಪಗಳು
ಆಗಾಗ ಬಂದು ಎಬ್ಬಿಸುತ್ತವೆ.
ಹೊಟ್ಟೆ ಎದೆಯಾಳಕ್ಕೆಲ್ಲಾ
ಅವರನ್ನು ಹೂತುಕೊಂಡು
ಇನ್ನೂ ಇನ್ನೂ ಉಬ್ಬುಬ್ಬಿ
ಮುಸುಕೆಳೆಯುವಾಗ….
ನಮ್ಮೂರ ಕೆರೆಯ
ತುಂಬಿದ ಹರೆ ನೋಡಿ
ರಾಜಕೀಯದವುಗಳು ಚಡಪಡಿಸುತ್ತವೆ.
ಬೋಟಿಂಗ್ ವ್ಯವಸ್ಥೆಮಾಡಿ
ಕ್ಲಬ್ ಹೌಸ್ ಹೊಕ್ಕು ಗುಂಡು ಹಾಕಲು
ಮೈ ಕೊಳೆ ತೊಳೆದುಕೊಳ್ಳುವ ಲಾರಿಗಳು –
ಕೆರೆಯಲ್ಲೇ ಹೇತು
ಕುಂಡಿ ತೊಳೆದುಕೊಳ್ಳುವ
ಜೋಪಡಿ ಪಟ್ಟಿಸಾಲು ಜನಗಳು –
ಎಲ್ಲವೂ ಆಕ್ರಮಿಸಿ ಮುಗಿದೇ ಹೋಗಿತ್ತು.
ಎದೆಯೊಳಕ್ಕೆ ನೋವು ನಾಟಿತ್ತು
ಮೈಮರೆತ ಹರೆಯದ
ಕೆರೆ ಎಚ್ಚರಾದಾಗ
ನೋವು ಹತಾಶೆ ಶೋಷಣೆ

ಈಗ: ಈಗೀಗ ರೊಚ್ಚುಕಿಚ್ಚು
ಕೆರೆಗೆ.
ಅಂತೆಯೇ ಏನೋ
ಬಹಳ ದಿವಸದ ಮೇಲೆ
ಇಂದು ನೋಡಿದಾಗ
ತನ್ನ ತಾ ಸುಟ್ಟುಕೊಂಡು
ಆತ್ಮಹತ್ಯ ಮಾಡಿಕೊಂಡ ಪಳೆಯುಳಿಕೆಗಳ
ಬತ್ತಿದ ನೆಲ ನೋಡಿ
ಗಂಟಲು ತುಂಬಿ
ಕೈಮುಗಿದು ಈಗಷ್ಟೇ
ಮರಳುತ್ತಿದ್ದೇನೆ ಗುಂಡಿಗೆಯ
ರಕ್ತದೊತ್ತಡ ಪರೀಕ್ಷಿಸಿಕೊಳ್ಳಲು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...