Home / ಕವನ / ಕವಿತೆ / ಆಶಯಾ

ಆಶಯಾ

ಮರಮರವನು ಸುತ್ತಿಮುತ್ತಿ ಕೊಂಬೆ ರೆಂಬೆ ಸವರಿ ಏರಿ
ಎಲೆ‌ಎಲೆಯನು ಎಣಿಸುವಂಥ ಹುಚ್ಚು ಹಂಬಲಾ
ಹೂವ ಹೂವ ಮೂಸುವಂಥ ಆಶೆ ಬೆಂಬಲಾ

ಗುಡ್ಡ ಗುಡ್ಡ ಏರಿ ಇಳಿದು ಸೆಡ್ಡು ಹೊಡೆದು ಸೆಟೆದು ನಿಂತು
ಅಡ್ಡ ಹಾದಿಯಲ್ಲಿ ಬಹರ ತರಿವ ಆಶಯಾ
ಕಡ್ಡಿಯೆ ಬ್ರಹ್ಮಾಸ್ತ್ರವಾಗಲೆಂಬ ಆಶಯೂ

ಸಾಹಿತ್ಯದ ಸಾಗರದಲಿ ಆಳದಲ್ಲಿ ಮುಳುಗಿ ಮುಳುಗಿ
ಮುತ್ತು ರತ್ನಗಳನು ತೆಗೆದು ನೋಳ್ಪ ಆಶಯಾ
ಹತ್ತು ಮುಖಗಳಲ್ಲಿ ಹಬ್ಬಿ ನಿಲ್ಲುವಾಶಯಾ

ಹೊಸತು ಹೊಸತು ಎಂದು ನಿತ್ಯ ನವ್ಯ ರೂಪ ಧರಿಸಿ ಮೆರೆವ
ಕಲೆಯ ಬೆಡಗಿಯನ್ನು ಒಲಿಸಿ ಕೂಡುವಾಶಯಾ
ಚೆಲುವ ಹೀರಿ ಹಿಪ್ಪೆಮಾಡಿ ಒಗೆಯುವಾಶಯಾ

ತತ್ವ ಭೇದಗಳನು ತೂರಿ ಸಂಕೋಚದ ತೆರೆಯ ಹರಿದು
ಸ್ನೇಹದಿಂದ ಲೋಕವನ್ನ ಗೆಲ್ಲುವಾಶಯಾ
ಮೋಹರಹಿತ ನಾಕವನ್ನು ನಿಲಿಸುವಾಶಯಾ

ಅವರ ಧರ್ಮ ಅವರ ದಾರಿ ಎಂದೆಲ್ಲರ ಗೌರವಿಸುವ
ನನ್ನ ಧರ್ಮದಲ್ಲಿ ವಿಶ್ವಧರ್ಮ ಬಿಂಬವಾ
ಕನ್ನಡಿಸುತ ವಿಶ್ವದಗಲ ಹರಡಿ ತುಂಬುವಾ

ಒಂದು ಒಡಲಿನೂಡನೆ ನೂರು ಜೀವಿಗಳನು ಕೂಡಿಕೊಂಡು
ಹಂದರವೇ ಹಬ್ಬಿಬಿಡಲಿ ಒಲವಿನಾಶಯಾ
ಸೌಂದರ್ಯವೆ ಸತ್ಯವಾಗಿ ಹೊಮ್ಮುವಾಶಯಾ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...