Home / ಕವನ / ಕವಿತೆ / ಸಾಯದ ಸಾವು ಬದುಕದ ಬದುಕು

ಸಾಯದ ಸಾವು ಬದುಕದ ಬದುಕು

ಕಣ್ಣೊಳಗೆ ನೋಡಿ ಕುಲುಕಾಟವಾಡಿ
ಮಣ್ಣೊಳಗೆ ಬೆರೆವ ತವಕ
ಬಣ್ಣದಲಿ ತೇಲಿ ಕೆಸರಿನಲಿ ಹೊರಳಿ
ತಣ್ಣಗಿದೆ ಎಮ್ಮೆ ಕುಡುಕ

ತಿಂದಿದ್ದ ಒಂದು ಬೆಂದಿದ್ದೆ ಒಂದು
ನಿಂದಿದ್ದೆ ನಿಲುವು ಗೆಲುವು
ಹೊಂದಿದ್ದೆ ನಡೆತ ಗೊಣಗಿದ್ದೆ ತುಡಿತ
ಕಂದಿದ್ದು ಚಿಗುರು ನಲಿವು

ಆಗಸಕೆ ಏರಿ ಚಿಕ್ಕೆಗಳ ಸಾರಿ
ಸೋಗಿನಲಿ ಬೀರಿ ಮೀರಿ
ಬಾಗಿಲನು ಬಡಿದು ನಿದ್ದೆಯಲಿ ನಡೆದು
ಬೇಗೆಯಲಿ ತೊರೆದು ದಾರಿ

ಕಳಸದಲಿ ಪಾನ ಬಳಸದೆಯೆ ಮೌನ
ತುಳುಕಾಡದಂಥ ಬಿಗುವು
ತಳಕಿತ್ತಿ ಬುಟ್ಟಿ ಚೆಲ್ಲಾಡೆ ಬುತ್ತಿ
ಹಳಸಿದ್ದು ನಾಯಿ ನಗುವು

ಓಡುತಿವೆ ಮೋಡ ಬೀಡಿ ಹೊಗೆ ಕೂಡ
ನಾಡಿಯಲಿ ಕಾಲ ಮಾನ
ಬಾಡುತಿಹ ಹೂವು ಬಿದ್ದಿರಲು ಕೆಳಗೆ
ಕಾಡುತಿದೆ ಸ್ಥಾನ ಮಾನ

ನನಗಾಗಿ ನಾನು ನಿನಗಾಗಿ ನೀನು
ಸೊಣಗನದೆ ಬಣಗು ಮೂಗು
ಮನ ಬೆತ್ತಲಾಗೆ ದಿನ ಕತ್ತಲಾಗೆ
ಘನವಾಯ್ತು ಹಗಲ ಸೋಗು

ಎತ್ತೆತ್ತಲಿಂದೊ ಸಂದೇಶ ಬಂದು
ಹತ್ತಿಲೇ ಗುಯ್ಯಿಗುಡಲು
ಹೊತ್ತಲೇ ಇಲ್ಲ ವಿದ್ಯುತ್ತು ಮೈಗೆ
ಮತ್ತೆಲ್ಲೋ ತರಗು ಸುಡಲು

ಭೂಕೇಂದ್ರದಿಂದ ತರತರವ ದಾಟಿ
ಸೋಕುತ್ತ ಬಿಡಲು ಚರ್ಮ
ಆಕಾಶದಿಂದ ನರನರವ ಮೀಟಿ
ಜೀಕುತಿದೆ ದೇವ ಮರ್ಮ

ಮೈಯನ್ನು ಮಣಿಸಿ ಬಾಯನ್ನು ತಣಿಸಿ
ಬೀಯಗವು ಆಯವ್ಯಯವು
ಸಾಯದಿದೆ ಸಾವು ಬದುಕದಿದೆ ಬದುಕು
ನೋಯದಿಹ ಇಹದ ದ್ವಯವು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...