Home / ಬಾಲ ಚಿಲುಮೆ / ಕವಿತೆ / ಚುಟುಕುಗಳು

ಚುಟುಕುಗಳು

ನಾಯಿ ಬೆಕ್ಕು ಕುರಿ
ಹಚ್ಚಿ ದೊಡ್ಡ ಉರಿ
ಕಾಡು ತುಂಬ ಬೆಂಕಿ ಹತ್ತಿ
ಚಳಿ ಕಾಸಿತು ನರಿ!
***

ಡೊಳ್ಳು ಹೊಟ್ಟೆ ಗುಂಡ
ತಿನ್ನೋದ್ರಲ್ಲಿ ಭಂಡ,
ಕೇಳಿ ಕೇಳಿ ಹಾಕಿಸ್ಕೊಂಡು
ತಿಂದ ನೂರು ಬೋಂಡ.
***

ಊಟ ಗುಂಡಂಗ್ ಇಷ್ಟ
ಪಾಠ ಮಾತ್ರ ಕಷ್ಟ
ಕ್ಲಾಸಿನಲ್ಲಿ ಗೊರಕೆ ಹೊಡೆದು
ಭಾರೀ ಹೂಸು ಬಿಟ್ಟ!
***

ಬಿಸಿಲು ಬಿದ್ದಿದೆ – ಜೊತೆಗೆ
ಮಳೆ ಬರ್‍ತಿದೆ
ಕಾಗೆಗೂ ನರಿಗೂ ಎಲ್ಲೋ
ಮದುವೆ ಆಗ್ತಿದೆ!
***

ಉಂಡೆ ಉಂಡೆ ಉಂಡೆ
ತನ್ನಿ ಒಂದು ಹಂಡೆ
ಒಳಕ್ಕೆ ಇಳಿದು ತಿಂದ್ಹಾಕ್ತೀವಿ
ಇಡೇ ಸಂಡೇ ಮಂಡೆ
***

ಚಕ್ಲಿ ನಂಗೆ ಇಷ್ಟ
ಹೊರಕ್ ತರೋದೇ ಕಷ್ಟ
ರೌಡಿ ಗುಂಡ ಓಡಿ ಬಂದು
ಕಸ್ಕೋತಾನೆ ದುಷ್ಟ!
***

ಪುಟ್ಟ ಪುಟ್ಟ ರೊಟ್ಟಿ
ಬೆಣ್ಣೆ ಸವರಿ ತಟ್ಟಿ
ಕೊಡು ಅಜ್ಜಿ ಆಗ್ತೀನಿ
ಭೀಮಗಿಂತ ಗಟ್ಟಿ
***

ನನ್ನನ್ ಅಪ್ಕೊಂಡ್ ಮುದ್ಮಾಡೋದು
ಬಲೇ ಇಷ್ಟ ಅಜ್ಜಿಗೆ
ಅಜ್ಜಿ ಅಂದ್ರೆ ನಂಗಂತೂ
ಅನಾನಸ್ಸಿನ್ ಸಜ್ಜಿಗೆ
***

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...