Home / ಲೇಖನ / ಇತರೆ / ಮಾತಿನಲಿ ಹೃದಯವಿರಲಿ

ಮಾತಿನಲಿ ಹೃದಯವಿರಲಿ

ಪ್ರಿಯ ಸಖಿ,
ಇಂದು ನಾವು ಆಡುತ್ತಿರುವ ಮಾತು ತನ್ನ ಮೌಲ್ಯವನ್ನೇ ಕಳೆದುಕೂಂಡಿದೆ. ಬೇಕಾದಾಗ ಬೇಕಾದಂತೆ ಮಾತಾಡುವ, ಅದಕ್ಕೆ ಬದ್ಧರಾಗಿರಬೇಕೆಂಬ ಯಾವುದೇ ಸಿದ್ಧಾಂತವನ್ನೂ ನಾವಿಂದು ಇಟ್ಟುಕೊಂಡಿಲ್ಲ. ಆಡುವ ಮಾತಿಗೂ ನಡೆದುಕೊಳ್ಳುವ ರೀತಿಗೂ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ. ಅದನ್ನು ಕಂಡೇ ಕವಿ ಬಿ. ಅರ್. ಲಕ್ಷ್ಮಣರಾವ್ ಅವರು ತಮ್ಮ ‘ಇಂದು’ ಎಂಬ ಹನಿಗವನದಲ್ಲಿ ಹೀಗೆನ್ನುತ್ತಾರೆ.

     ಮಾತು
ತನ್ನ ನಂಬಿಕೆ ಕಳೆದುಕೊಂಡಿರುವ
ಇಂದು
ಪ್ರತಿ ದಿನವೂ
ಏಪ್ರಿಲ್ ಒಂದು

ಯಾರದೋ ಮಾತನ್ನು ನಂಬಿಕೂತವನು ಇಂದು ಮೂರ್ಖನಾಗುವ ಕಾಲ ಬಂದಿದೆ. ‘ಮಾತನಾಡುವ ಮೊದಲು ಅದರಲ್ಲಿ ನಿನ್ನ ಹೃದಯವಿದೆಯೇ ಎಂದು ಪರೀಕ್ಷಿಸು ಎನ್ನುವ ಹಳೆಯ ನಾನ್ನುಡಿಯೊಂದು ನಮ್ಮಲ್ಲಿದೆ. ಹೃದಯವಿರಲಿ ಇಂದು ಮಾತಿನಲ್ಲಿ ನಾಲಿಗೆಯೂ ಇರುವುದಿಲ್ಲ. ಬರಿಯ ಗಾಳಿಯಲ್ಲಿ ಮಾತುಗಳು ಹಾರಾಡುತ್ತವೆ.

ಮಾನವೀಯ ಮೌಲ್ಯಗಳು ಕಳೆದು ಹೋಗುತ್ತಿರುವ ಇಂದಿನ ದಿನಗಳಲ್ಲಿ ಮಾತೂ ತನ್ನ ಅರ್ಥ ಕಳೆದುಕೊಳ್ಳುತ್ತಿದೆ. ತನ್ನ ಲಾಭಕ್ಕಾಗಿ ಯಾವ ಮಾತನ್ನಾದರೂ ಹೇಗೆ ಬೇಕಾದರೂ ಆಡಿ ಕಾರ್ಯ ಸಾಧಿಸಿಕೊಳ್ಳುವ ಹಂತಕ್ಕೆ ಮನುಷ್ಯ ಬಂದು ಮುಟ್ಟಿದ್ದಾನೆ. ಅವನಿಗೆ ತನ್ನ ಸ್ವಾರ್ಥ, ಸ್ವಹಿತಗಳೇ ಮುಖ್ಯ. ಇಂತಹ ನಾಟಕಗಳನ್ನರಿಯದ ಮುಗ್ಧ ವ್ಯಕ್ತಿಗಳೂ ನಮ್ಮಲ್ಲಿದ್ದಾರೆ. ಅವರೆಲ್ಲ ಇಂತಹ ಕಪಟ ಮಾತುಗಾರರ ಮಾತುಗಳನ್ನು ನಂಬಿ ಕ್ಷಣ ಕ್ಷಣವೂ ಮೂರ್ಖರಾಗುತ್ತಿರುತ್ತಾರೆ.

ನುಡಿದಂತೆ ನಡೆಯಬೇಕು ನಡೆದಂತೆ ನುಡಿಯಬೇಕು ಎಂಬ ತತ್ವಕ್ಕೆ ನಾವು ಯಾವಾಗ ಬದ್ಧರಾಗುವುದಿಲ್ಲವೋ ಅಲ್ಲಿಯವರೆಗೂ ನಾವು ಆತ್ಮವಂಚನೆ ಮಾಡಿಕೊಳ್ಳುತ್ತಲೇ ಇರುತ್ತೇವೆ. ಮಾತಿಗೂ ಅದರದ್ದೇ ಮಹತ್ವವಿದೆ. ಪ್ರಾಮಾಣಿಕ ಮಾತಿನಿಂದಲೇ ಮಾನವನಿಗೆ ಗೌರವ, ಪ್ರತಿಷ್ಠೆಗಳು ಬರುತ್ತವೆ ಎಂದು ಎಲ್ಲಿಯವರೆಗೆ ಮನುಷ್ಯ ತಿಳಿದು ಕೊಳ್ಳುವದಿಲ್ಲವೋ ಅಲ್ಲಿಯವರೆಗೆ ಬೇರೆ ಯಾರೇ ಅವನನ್ನು ಕ್ಷಮಿಸಿದರೂ ಅವನ ಆತ್ಮ ಅವನನ್ನು ಎಂದೂ ಕ್ಷಮಿಸುವುದಿಲ್ಲ. ಈ ಕುರಿತು ನಿನ್ನ ನಿಲುವೇನು ಸಖಿ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...