Home / ಕವನ / ಕವಿತೆ / ಬುಡು ಬುಡುಕಿ ಹಾಡು

ಬುಡು ಬುಡುಕಿ ಹಾಡು

ಟಿಂವ್ ಟಿವಕು ಟಿವಕು ಟಿಂವ್ ಟಿವಕು ಟಿವಕು
ಟಿಂವ್ ಟಿವಕು ಟಿವಕು ಟಿಂವ್ ಟಿಂವ್ ||ಪ||

ಐತೆ ಐತೆ ಶುಭವಾಗತ್ಯೆತೆ ಬಲವಾಗತ್ಯೆತೆ ತಂಗೀ
ಹಕ್ಕಿ ಹಾಡುತದ ಶಕುನ ನುಡಿಯುತದೆ ಶುಭವು ನಿನಗೆ ತಂಗೀ ||೧||

ಮೂಡಲ ದೇಶದ ಬುಡುಬುಡುಕ್ಯಾನಾ
ಹಾಡನು ಹಾಡುತ ಬಂದೀನಮ್ಮಾ
ಮೂಡುವ ಸೂರ್ಯನ ಹಾಡನು ತಂದೆ
ಓಡಿಸು ಕತ್ತಲ ತಂಗೆಮ್ಮಾ ||೨||

ಹೊಟ್ಟೆಯ ಪಾಡಿಗೆ ದುಡಿಯುತ ಉಣ್ಣುತ
ಕಷ್ಟದಿ ಬದುಕಿರೆ ಸಾಲ್ದಮ್ಮ
ಇಷ್ಟಾನಿಷ್ಟವ ತಿಳಿದೂ ನೋಡೀ
ಗಟ್ಟಿಯ ಬಾಳನ್ನು ಬಾಳಮ್ಮಾ ||೩||

ಹೊಸ ಹೊಸ ಜೀವನ ವಿಧಾನ ಬಂದಿದೆ
ಕಸಮಳ ಕಳೆಯೇ ತಂಗೆಮ್ಮಾ
ಹೊಸಾ ಕಾಲವಿದು ಓದು ಬರೆಯುವುದು
ಹಸನಾಗಿರಲಿಕೆ ಮೂಲಮ್ಮಾ ||೪||

ಓದಿಲ್ಲದ ಮನೆ ಕತ್ತಲೇ ಕಾಣೇ
ಓದನು ಸಾಧಿಸಬೇಕಮ್ಮಾ
ಬಾಧಗಳೆಲ್ಲಕೆ ದಾರಿ ತೋರುವುದು
ವೇದನೆ ಕಳೆಯೇ ತಂಗೆಮ್ಮಾ ||೫||

ಹೆಣ್ಣೊಬ್ಬಳು ನೀ ವಿದ್ಯೆಯ ಕಲಿತರೆ
ಕಣ್ಣೇ ಬಂದಂಗೆ ಮನೆಗೆಲ್ಲಾ
ಪುಣ್ಯವಂತರು ಮುಂದಿನ ಪೀಳಿಗೆ
ಕಣ್ಮಣಿ ಲೋಕಕೆ ನೀನಮ್ಮಾ ||೬||

ನಿನ್ನಾರೋಗ್ಯಾ ಗಂಡನ ಮಕ್ಕಳ
ಚೆನ್ನಾದ ಸ್ಥಿತಿ ನಿನ್ನ ಕೈಲಿ
ಬಿನ್ನಾಣಿಂದಲಿ ಪೇಳುವೆನಮ್ಮಾ
ಚಿನ್ನದ ಕನ್ನಡ ಕಲಿಯಮ್ಮಾ ||೭||

ಮನೆಯೇ ಮೊದಲನೆ ಶಾಲೆಯು ಲೋಕದಿ
ಮನೆ ಮನೆ ಬೆಳಕು ನಿನ್ನಿಂದಾ
ಕನಸುಗಳೆಲ್ಲಾ ಗೂಡು ಕಟ್ಟುವವು
ನನಸಾಗುವವು ನಿನ್ನಿಂದಾ ||೮||

ಹೆಣ್ಣಿಗೆ ಸ್ವಾತಂತ್ರಿಲ್ಲಿನ್ನುವ ಜನ
ಹುಣ್ಣು ರೋಗಮಯವಾಗುವರು
ಹೆಣ್ಣು ಗಂಡುಗಳು ಸಮಬಲವಾದರೆ
ಗಣ್ಯ ಬಲಾಢ್ಯರು ಆಗುವರು ||೯||

ಹುಟ್ಟಿದ ಮನೆಯನು ಬಿಟ್ಟು ಬಂದರೂ
ಕೊಟ್ಟ ಮನೆಯು ನಿನದಾಗುವುದು
ನೆಟ್ಟಗೆ ಎರಡೂ ಮನೆಗಳ ಬೆಸೆದು
ದಿಟ್ಟ ಕೀರ್ತಿ ನಿನಗಾಗುವುದು ||೧೦||

ನಿನ್ನಯ ಜೋಗುಳ ದನಿಯಲಿ ನಾಡಿನ
ಉನ್ನತಿ ಒಲವು ಮೊಳಗುವುದು
ನಿನ್ನೆದೆ ಹಾಲಲಿ ಮಾನವತೆಯ ಹೊಳೆ
ಚೆನ್ನಾಗೆಲ್ಲೆಡೆ ಹರಿಯುವುದು ||೧೧||

ಸದ್ಗುಣ ಎಂಬುದು ನಿನ್ನಾಭರಣ
ಮುದ್ದಿನ ಪ್ರೀತಿಯ ಮೂಗುತಿಯು
ಶುದ್ಧದ ನಗುವೇ ನಂದಾದೀಪವು
ಸದ್ಗತಿ ಮನೆಗದು ನೋಡಮ್ಮಾ ||೧೨||

ಅಕ್ಷರ ಕಲಿಯುತ ಮಕ್ಕಳ ತಿದ್ದುತ
ಶಿಕ್ಷಕಿ ಲೋಕಕೆ ಆಗಮ್ಮಾ
ನಕ್ಕರೆ ನೀನೀ ಜಗವೇ ನಗುವುದು
ಅಕ್ಕರೆಯಲಿ ನೀ ಬೆಳೆಸಮ್ಮಾ ||೧೩||

ಬಂಗಾರೆನ್ನುವ ಆಶೆಯು ಬ್ಯಾಡಾ
ಬಂಗಾರವು ಮನಸಿರಿಯಮ್ಮಾ
ಸಿಂಗಾರೆನ್ನುವ ಪಾಶವು ಬ್ಯಾಡಾ
ಸಿಂಗಾರವು ನಿಜ ವಿದ್ಯಮ್ಮಾ ||೧೪||

ಮೌಢ್ಯದ ಹುಳುಗಳ ನಿನ್ನ ಸೆರಗಿನಲಿ
ಹೊದ್ದಿಸಿ ಪೋಷಿಸಬ್ಯಾಡಮ್ಮಾ
ಆಢ್ಯದಿ ಮೆರೆಯುವ ಬೊಜ್ಜು ಮೈಗಳಿಗೆ
ಕೂಡಿಸಿ ಕೂಳಿಡ ಬ್ಯಾಡಮ್ಮಾ ||೧೫||

ವರದಕ್ಷಣೆಯನು ತೆಗೆದುಕೊಳ್ಳುವ
ಕುರಿ ಮಕ್ಕಳ ಹಡಿಬ್ಯಾಡಮ್ಮಾ
ಪರಿ ಪರಿ ಲಂಚದ ಬೆಂಕಿಯ ಬೆಳೆಸುವ
ನರಿಗಳ ನೀ ಕೊಡಬ್ಯಾಡಮ್ಮಾ ||೧೬||

ಅಬಲೆಯಲ್ಲವೇ ತಂಗೆಮ್ಮಾ ನೀ
ದುರ್ಬಲೆ ಎಂಬುದ ಮರೆಯಮ್ಮಾ
ಸಬಲ ಸಮಾಜದ ನಿರ್ಮಾಣಕೆ ನೀ
ಪ್ರಬಲೆಯಾಗು ನೀ ಏಳಮ್ಮಾ ||೧೭||

ಕೇಳೇ ಅಕ್ಕಾ ಕೇಳೇ ತಂಗೀ
ಕೇಳೇ ಅವ್ವಾ ನಮ್ಮಮ್ಮಾ
ಹೇಳುವೆ ನಿನ್ನದೆ ಒಳಗಿನ ಮಾತಾ
ಬಾಳುವೆ ನುಡಿ ಬುಡುಬುಡಿಕೆಮ್ಮ ||೧೮||

*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...