Home / ಕವನ / ಕವಿತೆ / ನ್ಯಾಯ ಬೇಡುತಾವೆ

ನ್ಯಾಯ ಬೇಡುತಾವೆ

ನ್ಯಾಯ ಬೇಡುತಾವೆ ಬಂದು ನ್ಯಾಯ ಬೇಡುತಾವೆ
ನಾಮುಂದು ನೀಮುಂದು ಒಂದು ಬಿಟ್ಟಿನ್ನೊಂದು
ಎಂದು ಮುಂದುಗಡೆ ಬಂದು ನಿಂದು ತಾವ್                     ||ಪ||

ಒಳಗೆ ಕೊಳೆಯುತಾವೆ ಇಲ್ಲೇ ಕೆಳಗೆ ನರಳುತಾವೆ
ಹೊರಗೆ ಮೇಲೆ ಬಂದೆರಗಲೆಂದು ಕಳವಳದಿ ಕೂಗುತಾವೆ
ನನ್ನ ಪಾಡು ನೀ ಹಾಡು ನೋಡು ಎಂದೆನುತ ತುಡಿಯುತಾವೆ ||೧||

ಹಕ್ಕಿಯಾಗಿದೀವಿ ಪಂಜರದೊಳಗೆ ಸಿಕ್ಕಿದೀವಿ
ರೆಕ್ಕೆಗೆದರಿ ಆಕಾಶದಾಗೆ ನಾವ್
ನಕ್ಕು ಹಾರುತೀವಿ ಬಿಡು ಬಿಡು ನಕ್ಕು ಹಾರುತೀವಿ              ||೨||

ಚಿಕ್ಕಿಯಾಗಿದೀವಿ ಹಗಲಲಿ ಬಿಕ್ಕೆ ಬೇಡುತೀವಿ
ಸೊಕ್ಕಿ ಉರಿವ ಆ ಸೂರ್ಯಗಿಂತ ಬಲು
ಹಕ್ಕು ದೊಡ್ಡದೈತೆ ನಮ್ಮದು ಹಕ್ಕು ದೊಡ್ಡದೈತೆ                ||೩||

ಪ್ರಾಣಿ ಅಂತಿಯಲ್ಲೋ ನರ ನಿನ್ನ ತ್ರಾಣವೇನು ಹೆಚ್ಚೋ
ಜಾಣನಾಗಿ ಏಣಿಯಲಿ ಮ್ಯಾಲೆ ನೀ
ಕೋಣನಾಗಿ ಕುಂತಿ ಶಾಂತಿಯ ಕಾಣದಂತೆ ಸೋತಿ          ||೪||

ಮಣ್ಣು ಕಲ್ಲು ಎಂದು ತುಳಿಯುವಿ ಕಣ್ಣು ಮ್ಯಾಲೆ ಬಂದು
ಮಣ್ಣ ಜೊತೆಗೆ ಆ ಗಾಳಿ ನೀರುಗಳ
ಬಣ್ಣ ಸೇರಿದಾಗ ಮೆರೆಯುವಿ ಮಣ್ಣು ಸೇರೊವರೆಗೆ            ||೫||

ಹೆಣ್ಣು ಸಣ್ಣದೆಂದಿ ಗಂಡಿನ ಉನ್ನತಿಯನೆ ನಡೆಸಿ
ತಣ್ಣ ಸಾಗರದ ಸಣ್ಣ ಕೆಂಡ ಪುಂಡಾಟ ನಡೆಸಿದಂತೆ
ಕರಗುವಿ ಹೆಣ್ಣ ಕಣ್ಣಿನೊಳಗೆ                                     ||೬||

ಬಟ್ಟೆ ಭ್ರಮೆಯ ನೆಚ್ಚಿ ರೊಕ್ಕದ ಹೊಟ್ಟುರವುದೆ ಮುಚ್ಚಿ
ಹೊಟ್ಟೆ ರಟ್ಟೆಗಳ ಕಾಲ ಕೆಳಗೆ ತುಳಿದಿಟ್ಟು ಮೆರೆವ ಮಳ್ಳ ನೀನು
ಸುಟ್ಟು ಹೋಗುತೀಯ ಎಚ್ಚರ ಸುಟ್ಟು ಹೋಗುತೀಯ         ||೭||

ಕಂಡುದನ್ನೆ ನಿಜವು ಅಂತಾ ಉಂಡು ತಿಂದು ಕೊಬ್ಬಿ
ಭಂಡತನದಿ ಉದ್ದಂಡನಾಗಿ ಕಂಡಿರದ ಸತ್ಯ ಬಿಟ್ಟಿ ಬರಿಯ
ತುಂಡು ಬಟ್ಟೆ ಆದೀ ಬರಿಯ ತುಂಡು ಬಟ್ಟೆ ಆದಿ               ||೮||

******************************
೧೯೮೪

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...