Home / ಕವನ / ಕವಿತೆ / ನ್ಯಾಯ ಬೇಡುತಾವೆ

ನ್ಯಾಯ ಬೇಡುತಾವೆ

ನ್ಯಾಯ ಬೇಡುತಾವೆ ಬಂದು ನ್ಯಾಯ ಬೇಡುತಾವೆ
ನಾಮುಂದು ನೀಮುಂದು ಒಂದು ಬಿಟ್ಟಿನ್ನೊಂದು
ಎಂದು ಮುಂದುಗಡೆ ಬಂದು ನಿಂದು ತಾವ್                     ||ಪ||

ಒಳಗೆ ಕೊಳೆಯುತಾವೆ ಇಲ್ಲೇ ಕೆಳಗೆ ನರಳುತಾವೆ
ಹೊರಗೆ ಮೇಲೆ ಬಂದೆರಗಲೆಂದು ಕಳವಳದಿ ಕೂಗುತಾವೆ
ನನ್ನ ಪಾಡು ನೀ ಹಾಡು ನೋಡು ಎಂದೆನುತ ತುಡಿಯುತಾವೆ ||೧||

ಹಕ್ಕಿಯಾಗಿದೀವಿ ಪಂಜರದೊಳಗೆ ಸಿಕ್ಕಿದೀವಿ
ರೆಕ್ಕೆಗೆದರಿ ಆಕಾಶದಾಗೆ ನಾವ್
ನಕ್ಕು ಹಾರುತೀವಿ ಬಿಡು ಬಿಡು ನಕ್ಕು ಹಾರುತೀವಿ              ||೨||

ಚಿಕ್ಕಿಯಾಗಿದೀವಿ ಹಗಲಲಿ ಬಿಕ್ಕೆ ಬೇಡುತೀವಿ
ಸೊಕ್ಕಿ ಉರಿವ ಆ ಸೂರ್ಯಗಿಂತ ಬಲು
ಹಕ್ಕು ದೊಡ್ಡದೈತೆ ನಮ್ಮದು ಹಕ್ಕು ದೊಡ್ಡದೈತೆ                ||೩||

ಪ್ರಾಣಿ ಅಂತಿಯಲ್ಲೋ ನರ ನಿನ್ನ ತ್ರಾಣವೇನು ಹೆಚ್ಚೋ
ಜಾಣನಾಗಿ ಏಣಿಯಲಿ ಮ್ಯಾಲೆ ನೀ
ಕೋಣನಾಗಿ ಕುಂತಿ ಶಾಂತಿಯ ಕಾಣದಂತೆ ಸೋತಿ          ||೪||

ಮಣ್ಣು ಕಲ್ಲು ಎಂದು ತುಳಿಯುವಿ ಕಣ್ಣು ಮ್ಯಾಲೆ ಬಂದು
ಮಣ್ಣ ಜೊತೆಗೆ ಆ ಗಾಳಿ ನೀರುಗಳ
ಬಣ್ಣ ಸೇರಿದಾಗ ಮೆರೆಯುವಿ ಮಣ್ಣು ಸೇರೊವರೆಗೆ            ||೫||

ಹೆಣ್ಣು ಸಣ್ಣದೆಂದಿ ಗಂಡಿನ ಉನ್ನತಿಯನೆ ನಡೆಸಿ
ತಣ್ಣ ಸಾಗರದ ಸಣ್ಣ ಕೆಂಡ ಪುಂಡಾಟ ನಡೆಸಿದಂತೆ
ಕರಗುವಿ ಹೆಣ್ಣ ಕಣ್ಣಿನೊಳಗೆ                                     ||೬||

ಬಟ್ಟೆ ಭ್ರಮೆಯ ನೆಚ್ಚಿ ರೊಕ್ಕದ ಹೊಟ್ಟುರವುದೆ ಮುಚ್ಚಿ
ಹೊಟ್ಟೆ ರಟ್ಟೆಗಳ ಕಾಲ ಕೆಳಗೆ ತುಳಿದಿಟ್ಟು ಮೆರೆವ ಮಳ್ಳ ನೀನು
ಸುಟ್ಟು ಹೋಗುತೀಯ ಎಚ್ಚರ ಸುಟ್ಟು ಹೋಗುತೀಯ         ||೭||

ಕಂಡುದನ್ನೆ ನಿಜವು ಅಂತಾ ಉಂಡು ತಿಂದು ಕೊಬ್ಬಿ
ಭಂಡತನದಿ ಉದ್ದಂಡನಾಗಿ ಕಂಡಿರದ ಸತ್ಯ ಬಿಟ್ಟಿ ಬರಿಯ
ತುಂಡು ಬಟ್ಟೆ ಆದೀ ಬರಿಯ ತುಂಡು ಬಟ್ಟೆ ಆದಿ               ||೮||

******************************
೧೯೮೪

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...