Home / ಕವನ / ಕವಿತೆ / ತಾಯಂದಿರಿಗೆ

ತಾಯಂದಿರಿಗೆ

ತಾಯಂದಿರೇ
ಹುಟ್ಟುತ್ತಲೇ ಯಾರೂ
ಕರ್ಣಕುಂಡಲ ಜಟೆ ಗಡ್ಡ ಮೀಸೆಗಳ
ಪಡೆದುಕೊಂಡೇ ಬರುವುದಿಲ್ಲ
ಹುಟ್ಟುತ್ತಲೇ ವೇದಾದಿಗಳು
ಯಾರ ನಾಲಿಗೆಯ ಮೇಲೂ ನರ್ತಿಸುವುದಿಲ್ಲ
ಹುಟ್ಟಿ ಬಂದ ಕುಲ
ಕುಂದು ದೋಷ ವೃತ್ತಿಗಳೆಲ್ಲ
ಶಿಲಾ ಶಾಸನವೇನಲ್ಲ
ಇದನ್ನು ಬರೆದಿಟ್ಟುಕೊಳ್ಳಿ

ಇಂಥ ಕರಿ ಮೋಡಗಳು ನಿಮ್ಮ ಸೂರ್ಯರಿಗೆ
ಬಾಲಾರಿಷ್ಟರಾಗಿ ಬಡಿದುಕೊಂಡಿರಬಹುದು
ಇದರಿಂದ ನಿಮ್ಮ ಕರುಳಕಿಡಿಗಳು
ಇದ್ದಿಲ ಚೂರುಗಳಂತೆ ಭಾಸವಾಗಬಹುದು
ಆದರೆ ತಾಯಂದಿರೆ
ಆ ಬಾಲಾರಿಷ್ಟ ಗ್ರಹ ಬಾಧೆಗಳ
ನಿಮ್ಮ ಚೈತನ್ಯ ಬೆಂಕಿಯಿಂದ ಸುಡಿರಿ
ಭವಿಷ್ಯದ ಆಶಾ ಮಾರುತನಿಂದ ಝಾಡಿಸಿರಿ
ನಿಮ್ಮ ಇದ್ದಿಲ ಚೂರನ್ನೇ ಗಟ್ಟಿ ಮಾಡಿ ಮಾಡಿ
ಸಾಣೆ ಹಿಡಿದು ವಜ್ರ ಮಾಡುವ
ಸಾಣೆಯಂತ್ರ ನಿಮ್ಮ ಕೈಯಲ್ಲೇ ಇದೆ
ನಿಮ್ಮ ಸೊಂಟಕ್ಕಂಟಿದ ಉಪಗ್ರಹಗಳಿಗೆ
ಕಾವು ಕಸುವು ತುಂಬಿ ತುಂಬಿ
ಸ್ವಯಂ ತೇಜೋಮೂರ್ತಿ ಮಾಡುವ
ಮಾಯಾ ದಂಡವೂ ನಿಮ್ಮ ಕೈಯಲ್ಲೇ ಇದೆ
ಇದನ್ನು ನಂಬಿ|
ನಿಮ್ಮ ಮನೆಗೋಡೆಯ ಮೇಲೆ
ಬರೆದಿಟ್ಟು ಬಣ್ಣ ತುಂಬಿ
ಗ್ರಹವು ಸೂರ್ಯನಾಗುವುದನ್ನು
ಹುಳುವು ಸಿಂಹವಾಗುವುದನ್ನು
ಈ ದೇಶ ಕಳ್ಳಕತ್ತಲೆ ಎಂದೂ ಸಹಿಸದು
ಎಲ್ಲ ಕಡೆ ಬೆಳಕಾದರೆ ಬಾವಲಿ ಹೆಗ್ಗಣ
ದರೋಡೆಖೋರ ನಿಶಾಚರರಿಗೆ ಅನುಕೂಲವಾಗದು

ಎಲ್ಲಾದರೂಂದೊಂದು ಕಿಡಿ ಹೊತ್ತಿಕೊಂಡರೆ
ಅಗ್ನಿ ಸತ್ಯ ಮೂಡಿದರೆ
ಕರಿನೆರಳ ಬುಟ್ಟಿ ಬೋರಲು ಹಾಕಿ ಬಿಡುವುದು
ಇಲ್ಲಿಯ ಚರಿತ್ರಾಹೀನ ಚರಿತ್ರೆ

ಸೂರ್ಯನ ಸೃಷ್ಟಿಸುವ
ಸಾಣೆಯಂತ್ರವನ್ನು ಕಸಿದುಕೊಂಡು,
ನಿಮಗೆ ಕೇವಲ ಸೌಟು ಕೊಟ್ಟಿರುವುದು
ಇಂಥ ಚರಿತ್ರಯೇ

ಆದ್ದರಿಂದ ತಾಯಂದಿರೇ
ನಿಮ್ಮ ಕರುಳ ಕುಡಿಗಳಲ್ಲಿ
ಕಿಡಿ ಹೊತ್ತಿಸಿ ಅಗ್ನಿ ಪುಂಜಗಳಾಗಿ ಮಾಡಿ
ಕತ್ತಲೆಯೋಡಿಸುವ ಕಜ್ಜದಲ್ಲಿ ಕೈಗೂಡಿ

೧೨-೬-೮೬
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...