Home / ಕವನ / ಕವಿತೆ / ಹುಂಬರಾದೆವಲ್ಲೋ

ಹುಂಬರಾದೆವಲ್ಲೋ

ನಂಬಿದ್ರೆ ನಂಬಿ ಬಿಟ್ರೆ ಬಿಡ್ರಿ ಹುಂಬಗುತ್ಗಿ ಮಾತಿದಲ್ಲ
ಹುಂಬರಾದೆವಲ್ಲೋ ನಾವು ಇಷ್ಟೂ ದಿನ ||ಪ||

ತುಂಬಿ ತುಳುಕೋ ದೇಶದೊಳ್ಗೆ ತುಂಬದಂಗೆ ಹೊಟ್ಟೆ ಬಟ್ಟೆ
ದೊಂಬಿ ಮಾಡೋ ಶಕ್ತಿ ಇಲ್ದೆ ಕೊಳಿತಿವೋ ಜನ ||ಅ.ಪ||

ಕಂಡ ಕಂಡ ಗುಂಡು ಕಲ್ಗೆ ದೇವ್ರು ದಿಂಡ್ರು ಅಂದುಕೊಂತ
ಕಂಡು ಕಂಡು ಹಾಳು ಭಾವ್ಯಾಗ ಬಿದ್ದೀವಲ್ಲ
ಉಂಡು ತಿಂದು ಬೊಜ್ಜಾದೋರು ಕಾಲಿಗೆ ಬೀಳ್ರೋ ಅಂತಾ ಅಂದ್ರೆ
ದಿಂಡುಗೆಡ್ಡು ಮಂಡೆ ಬೋಳ್ಸಿಕೊಂಡೇವಲ್ಲ ||೧||

ಖೂನೀ ಮಾಡ್ಸೋ ಕಟುಕರಿಗೆ ಹೆಂಗಸರ್ಯಾನ ಕಳದೋರಿಗೆ
ನೀನೇ ದಣಿ ನಮ್ಮಪ್ಪಂತ ಕಾಲಿಗೆ ಬೀಳ್ತೀವಿ
ತಾನೇ ತಿಂದು ಊರಿನಾಸ್ತಿ ನಾನೇ ನಾನೆಂದ್ಮೆರದೋರ್ನೆಲ್ಲ
ನೀನೇ ಇಂದ್ರ ಚಂದ್ರ ಅಂತ ನಾವೆ ಹೊಗಳ್ತೀವಿ ||೨||

ನಮ್ಮ ಸೇವೆ ಮಾಡೋ ಆಳ್ಗೋಳ್ ಆಫೀಸಿನ್ಯಾಗೆ ದಣಿಗಳಂಗೆ
ಕಮ್ಗೆ ಮೆರ್ದು ದಬಾಯಿಸಿದ್ರೆ ನಾಯ್ಗಳಾಗ್ತೀವಿ
ದಮ್ಮು ಇಲ್ದೆ ಕಾಲಿಗೆ ಬಿದ್ದು ಕೇಳಿದಷ್ಟು ಬೋಳಿಸ್ಕೊಂಡು
ಸುಮ್ಗೆ ಹಲ್ಲಾಗ ನಾಲ್ಗೆ ಮಡ್ಗಿ ಮೂಳ್ಳುಳಾಗ್ತೀವಿ  ||೩||

ನಾನು ಮೇಲಿನ ಜಾತಿಯೋನು ನಾನು ಮೇಲಿಂದುದ್ರಿದೋನು
ನೀವು ಕೀಳು ಅಂದೋರ್ಕಾಲ್ಗೆ ನಾವೆ ಬೀಳ್ತೀವಿ
ಬಾನು ಭೂಮಿ ಗಾಳಿ ಬೆಂಕಿ ಒಂದೇ ಎಂದು ಸಾರುತಿದ್ರು
ಹೀನ ಜಾತಿ ಮೇಲು ಜಾತಿ ಅಂತ ಹೇಳ್ತೀವಿ ||೪||

ತಕ್ಡಿ ಮುರ್ದು ತೌಡು ಕೊಟ್ಟು ಮಹಡಿ ಮಹಡಿ ಕಟ್ಟಿಸ್ತಾರೆ
ಬೆಪ್ಪ ತಕ್ಡಿ ಆದ್ವಿ ನಾವು ದುಡ್ಡು ಹಣ್ಣಾಗಿ
ಬಡ್ಡೀ ಬಡ್ಡೀ ಕೂಡ್ಸಿ ಬರ್ದು ಮನೀ ಹೊಲ ನುಂಗಿ ಕುಂತು
ಬಡ್ಡೀ ಮಕ್ಳೆ ಅಂತ ಒದ್ರೆ ಬಿದ್ವಿ ಮಣ್ಣಾಗಿ ||೫||

ಪುಂಡ ಪೋಕ್ರಿ ಭಂಡರೆಲ್ಲ ಗೂಂಡಾಗದಿಮಿ ಮಾಡಿಕೊಂತ
ದಂಡು ಕಟ್ಟಿ ಕುಡ್ದು ತಿಂದು ದೊಡ್ಡೋರಾಗ್ತಾರೆ
ಗಂಡ ಹೇಣ್ತಿ ರಟ್ಟಿ ಮುರ್ದು ಹಗಲೆಲ್ಲ ದುಡುದ್ರು ಕೂಡ
ತಿಂಡಿಗಿಲ್ದೆ ಬಟ್ಟೆಗಿಲ್ದೆ ಹೆಡ್ಡರಾಗ್ತಾರೆ ||೬||

ತಾರಾತಿಗಡೀ ಮಾಡಿದೋರೆಲ್ಲ ತಾರಸಿ ಮನಿ ಕಟ್ಟಿಸ್ತಾರೆ
ನೇರ ನ್ಯಾಯ ನೀತಿ ಅಂದೋನ್ ಕೋತಿಯಾಗ್ತಾನೆ
ಬಾರಾ ವಿದ್ಯಾ ಭಾನಗೇಡಿ ಒಳಾಗೊಳ್ಗೆ ಮಾಡೋರೆಲ್ಲ
ದೊರಿಗಳಾದ್ರೆ ದುಡ್ಡು ಮನಸ್ಯ ಕತ್ತೆ ಆಗ್ತಾನೆ ||೭||

ಪ್ರಜೆಗಳದೆಲ್ಲ ರಾಜ್ಯಂತಾರೆ ಪ್ರಜೆಗಳಂದ್ರೆ ಯಾರಂತೀರಿ
ಪ್ರಜಾರಾಜ್ಯದಾಗ ರೊಕ್ಕ ಇರೋನೆ ರಾಜಾ
ಮೋಜಿನ್ಯಾಗ ರೊಕ್ಕ ಉಗ್ಗಿ ರೊಕ್ಕ ಬಳಿಯೋ ಆಟದಾಗೆ
ನಿಜವಾಗಿ ಸರ್ಕಾರೆಲ್ಲ ರೊಕ್‌ದೋರ್ ಮಜಾ ||೮||

ಕಾವಿ ಬಟ್ಟೆ ಹಾಕಿ ಸ್ವಾಮಿ ಗುರುವು ಅಂತ ಮೆರೆಯೋವಂಥ
ಸಾವಿರಾರು ಕುಂತು ತಿಂಬೊ ಮೈಗಳ್ರಿಗೆ
ನಾವೆ ಕಾಲೀಗ್ ಬೀಳತೀವಿ ಕಾಣ್ಕೆ ಕೊಟ್ಟು ಮೆರೆಸುತೀವಿ
ಪಾವನಾದೆವಂತ ಮಬ್ಬು ಮುಚ್ಚಿ ಮಳ್ಳಿಗೆ ||೯||

ವೇಷಕೆ ನಾವು ಮಳ್ಳಾಗ್ತೀವಿ ಬಣ್ಣಕ ನಾವು ಬಾಯ್ಬಿಡ್ತೀವಿ
ಐಷಾರಾಮಿ ಹಣವಂತರಿಗೆ ಹೆದರಿಕೊಂತಿವಿ
ಭಾಷೆ ಇಲ್ಲದ ಭಂಡರ ಮುಂದೆ ಬಾಯಿ ತೆಕ್ಕೊಂಡ್ ಬಿದ್ದಿರ್ತೀವಿ
ದೋಷ ನಮದಲ್ಲವೇನ್ರೊ ಎಲ್ಲಿ ಕುಂತಿವಿ ||೧೦||

***.

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ.ಎನ್.ಎಸ್‌. ರಾವ್