Home / ಲೇಖನ / ವಿಜ್ಞಾನ / ಸಾಗರಗಳು ಮತ್ತು ಅವುಗಳ ತಳ

ಸಾಗರಗಳು ಮತ್ತು ಅವುಗಳ ತಳ

ಭೂಮಿಯ ಶೇ. ೭೧ ಭಾಗವು ನೀರಿನಿಂದ ಆವರಿಸ್ಪಟ್ಟಿರುವುದರಿಂದ ಈ ನೀರಿನ ಸಂಚಯಗಳೇ ಸಾಗರಗಳಾದವು. ಮಾರುತಗಳು ನೀರಿನಲ್ಲಿ ಅಲೆಗಳನ್ನು ಉಂಟು
ಮಾಡುವುದರಿಂದಲೂ ಮತ್ತು ಚಂದ್ರನ ಗುರುತ್ವಾಕರ್ಷಣೆ ಶಕ್ತಿಯಿಂದಲೂ ‘ಉಕ್ಕು’ ಮತ್ತು ‘ಕೆಳಭರತ’ಗಳು ಉಂಟಾಗುವುದರಿಂದ ಸಾಗರ ಮತ್ತು ಸಮುದ್ರಗಳ ಮೇಲ್ಮೈಯು ನಿರಂತರವಾಗಿ ಅವಿಶ್ರಾಂತ ಸ್ಥಿತಿಯಲ್ಲಿದೆ. ಸಾಗರತಜ್ಞರು ಅಂತರ್ಜಲ ಕ್ಯಾಮರಗಳು, ಪ್ರತಿಧ್ವನಿ ಶಬ್ದಯಂತ್ರಗಳು, ಸೋನಾರ್‌ಗಳು ಮತ್ತು ಜಲಂತರ್ಗಾಮಿ ನೌಕೆಗಳನ್ನು ಉಪಯೋಗಿಸಿ ನಿರಂತರ ಸಾಗರಗಳ ಅಧ್ಯಯನ ಮಾಡಿ ಸಾಗರದ ತಳವು ನಮ್ಮ ಭೂಪ್ರದೇಶದಂತೆಯೇ ಇದೆ, ಎಂಬುದನ್ನು ಕಂಡುಹಿಡಿದರು. ಇಲ್ಲಿಯೂ ಸಹ ಪ್ರಸ್ಥಭೂಮಿ, ಕಂದಕಗಳು, ಕಡಿದಾದ ಬಿರುಕುಗಳು, ಪರ್ವತ ಶ್ರೇಣಿಗಳು ಮತ್ತು ಅಗ್ನಿಪವರ್ತಗಳೂ ಇವೆ ಎಂದರೆ ಆಶ್ಚರ್ಯವಲ್ಲವೆ? ಸಮುದ್ರದ ತಳದಿಂದ ಉದ್ಭವಿಸಿದ ಶಿಖರಗಳು ನೀರಿನ ಮೇಲೆದ್ದು ದ್ವೀಪಗಳಾಗಿ ಪರಿವರ್ತನೆ ಗೊಂಡಿವೆ. ೬ ಕಿ.ಮೀ. ಗಳಿಂದ ಫೆಸಿಫಿಕ್ ಸಾಗರದಲ್ಲಿ ಇದರ ಆಳವು ಸಮುದ್ರದ ಮೇಲ್ಮೆಯಿಂದ ೧೧ ಕಿ.ಮೀ. ನಷ್ಟು ಆಳವಾಗಿದೆ. ಇದನ್ನು ‘ಸಾಹಸಿಗರ ಆಳ’ವೆಂದು ಕರೆಯಲಾಗುತ್ತದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...