Home / ಲೇಖನ / ವಿಜ್ಞಾನ / ಎಲೆಕ್ಟ್ರಾನಿಕ್‌ನಲ್ಲಿ ಕ್ರಾಂತಿ: ನೋಟುಗಳನ್ನು ಎಣಿಸುವ ಯಂತ್ರ

ಎಲೆಕ್ಟ್ರಾನಿಕ್‌ನಲ್ಲಿ ಕ್ರಾಂತಿ: ನೋಟುಗಳನ್ನು ಎಣಿಸುವ ಯಂತ್ರ

ಬ್ಯಾಂಕುಗಳಲ್ಲಿ ಅಥವಾ ದೊಡ್ಡ ವ್ಯಾಪಾರಿ ಕಂಪನಿಗಳಲ್ಲಿ ಲಕ್ಷ ಲಕ್ಷ ಕೋಟಿ ಹಣವನ್ನು ಅತಿಬೇಗನೆ ಎಣಿಸಬೇಕಾಗುತ್ತದೆ. ಮನುಷ್ಯನ ಎಣಿಸುವಿಕೆಯ ವೇಗದಲ್ಲಿ ಸ್ವಲ್ಪ ನೆನಪು ಹುಸಿಯಾದರೂ ಎಣಿಕೆ ತಪ್ಪಾಗಿ ಮುಂದೆ ಅನೇಕ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಜತೆಗೆ ಸಮಯವೂ ಹೆಚ್ಚುಬೇಕಾಗುತ್ತದೆ. ಇದನ್ನೆಲ್ಲ ಪರಿಹರಿಸಿ ಕರಾರುವಾಕ್ಕಾದ ಫಲಿತಾಂಶ ನೀಡುವ ವಿಜ್ಞಾನದ ಹೊಸ ಅವಿಷ್ಕಾರವು “ನೋಟುಗಳನ್ನು ಎಣಿಸುವ ಯಂತ್ರವನ್ನೇ ಕಂಡುಹಿಡಿದಿದೆ. ಸಮಯದ ಉಳಿತಾಯ, ಕರಾರುವಾಕ್ಕು ಲೆಕ್ಕ ಜಾಣ್ಮೆಯ ಲೆಕ್ಕಾಚಾರಕ್ಕಾಗಿ ಈ ಯಂತ್ರ ಬಹುಬೇಗನೆ ಜನಪ್ರಿಯವಾಗತೊಡಗಿದೆ. ಮತ್ತು ಬಹುಸಾಮರ್ಥ್ಯವನ್ನು
ಹೊಂದಿದೆ. ಇದೊಂದು ಎಲೆಕ್ಟ್ರಾನಿಕ್ ಯಂತ್ರ. ಈ ಯಂತ್ರದ ವಿಶಿಷ್ಟತೆ ಎಂದರೆ ಹೊಸ ಮತ್ತು ಹಳೆಯ, ಸುಕ್ಕುಗಟ್ಟಿದ ಮತ್ತು ಹರಿದು ಹೋಗಿರುವ ಬಿಡಿಯಾಗಿರುವ ಮತ್ತು ಕಟ್ಟಿರುವ ಎಲ್ಲ ವಿಧವಾದ ನೋಟುಗಳನ್ನು ಎಣಿಸಬಹುದು.

ಇದು ಹಗುರವಾದ ಅಚ್ಚುಕಟ್ಟಾದ ಯಂತ್ರ. ಇದಕ್ಕೆ ಹೆಚ್ಚಿನ ಸ್ಥಳಬೇಕಿಲ್ಲ ಬ್ಯಾಂಕಿನಲ್ಲಿ ಪ್ರತಿಯೊಬ್ಬ ಖಜಾಂಚಿಯು ಎಣಿಸಿದ ನೋಟುಗಳು ಸಂಖ್ಯೆಯನ್ನು ಈ ಯಂತ್ರ ಮುದ್ರಿಸಿಡುತ್ತದೆ. ಜಪಾನಿನ ಮತ್ತು ಸಂಯುಕ್ತ ಸಂಸ್ಥಾನದ ಅನೇಕ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ನೋಟುಗಳನ್ನು ಎಣಿಸುವ ಯಂತ್ರಗಳನ್ನು ತಯಾರಿಸುತ್ತಿದ್ದು ವಿಶ್ವವ್ಯಾಪಿಯಾಗುತ್ತಲಿವೆ.

“ಟೆಲ್ಲಾಕ್-೫” ಎಂಬುದು ಸುಪ್ರಸಿದ್ಧವಾದ ನೋಟು ಎಣಿಸುವ ಯಂತ್ರ. “ಮುಸಾ೮” ಜಪಾನ್ ಸಂಸ್ಥೆಯಲ್ಲಿ ತಯಾರಿಸಲಾಗುತ್ತಿದ್ದು ಜೆ. ಇಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್ ಮತ್ತು ಕ್ಯಾಲ್ಕ್ಯೂಲಸ್ ಲಿ|| ಗಳಿಂದ ಸರಬರಾಜಾಗುತ್ತದೆ. ಈ ಯಂತ್ರವನ್ನು ಆಗಲೇ ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿ ಸ್ಥಾಪಿಸಲಾಗಿದೆ. ಇದರಂತೆ “ಯೂನಿಟೇಕ್” “ಜಯಿಸುಮಿ” “O.B.M- 1010” (ನೋಟು ಎಣಿಸುವ ಯಂತ್ರ) ಇದು ಒಂದು ನಿಮಿಷಕ್ಕೆ ಒಂದು ಸಾವಿರ ನೋಟುಗಳನ್ನು ಎಣಿಸುತ್ತದೆ. ನೋಟುಗಳ ಸಂಖ್ಯೆ ಹಾಗೂ ಹಣದ ಮೊತ್ತವನ್ನು ತೋರಿಸುವ ಏಳು ಅಂಕಿ L.E.D). ಪ್ರದರ್ಶನ ಇದರಲ್ಲಿದೆ. ಒಂದರಿಂದ ೯೯೯ ನೋಟುಗಳನ್ನು ಎಣಿಸುವಾಗ ಸ್ವಯಂ ಚಾಲಿತ ನಿಲುಗಡೆಯನ್ನು ಒದಗಿಸುತ್ತದೆ. G.N.E-1-W ಮತ್ತು G.E.2-8/9F.B-200 ಈ ಎರಡು ಹೆಸರಿನ ನೋಟು ಎಣಿಸುವ ಯಂತ್ರಗಳನ್ನು ಗ್ಲೋರಿ ಜಪಾನ್ ಸಂಸ್ಥೆಯು ತಯಾರಿಸುತ್ತಿದೆ. ಈ ಯಂತ್ರಗಳು ಕ್ರಮವಾಗಿ ಒಂದು ನಿಮಿಷಕ್ಕೆ ೧,೫೦೦ ಮತ್ತು ೧,೦೦೦ ನೋಟುಗಳನ್ನು ಎಣಿಸುವ ವೇಗವನ್ನು ಹೊಂದಿವೆ. ಸಮಗ್ರ ಪ್ರದಕ್ಷಿಣೆ (ಸರ್ಕ್ಯೂಟ್) ಮತ್ತು ಸಿಲಿಕಾನ್ ವಲ್ಕಲ ಕ್ರಾಂತಿಯಿಂದ ಇವೆಲ್ಲ ಸಾಧ್ಯವಾಗಿದೆ.
*****

ಲೇಖಕ: ಚಂದ್ರಶೇಖರ್ ಧೂಲೇಕರ್

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...