Home / ಲೇಖನ / ವಿಜ್ಞಾನ / ಅಣುಶಕ್ತಿಗಡಿಯಾರ

ಅಣುಶಕ್ತಿಗಡಿಯಾರ

ಮಾನವನ ನಾಗರೀಕತೆಯ ಪ್ರಾರಂಭದಿಂದಲೇ ಸಮಯವನ್ನು ಅಳೆಯುವ ಗಡಿಯಾರಗಳ ಉಪಯೋಗವಾಗುತ್ತಲಿವೆ. ಪುರಾತನ ಅಳತೆಯ ವಿಧಾನಗಳು ಅಷ್ಟೇನೂ
ಕರಾರುವಾಕ್ಕಾಗಿರಲಿಲ್ಲ. ಇದೀಗ ಸಮಯವನ್ನು ಕರಾರುವಾಕ್ಕಾಗಿ ತೋರಿಸುವ ಅತ್ಯಂತ ಸುಧಾರಿತ ಗಡಿಯಾರಗಳು ರಚನೆಯಾಗುತ್ತಲಿವೆ. ಕರಾರುವಾಕ್ಕಾಗಿ ಸಮಯ ತೋರಿಸುವ ಅದ್ಭುತ ಗಡಿಯಾರವೆಂದರೆ ಅಣುಶಕ್ತಿ ಗಡಿಯಾರಗಳು. ಕ್ರಿ.ಶ. ೧೯೪೬ರಲ್ಲಿ ಡಾ|| ವಿಲ್ಲರ್ಟ್ ಫ್ರಾಂಕ್ ಎಂಬ ಒಬ್ಬ ಅಮೇರಿಕದ ಭೌತವಿಜ್ಞಾನಿಯು ಈ ಗಡಿಯಾರವನ್ನು ಸಂಶೋಧಿಸಿದ ವಾಷಿಂಗ್‌ಟನ್ ಡಿ.ಸಿಯ ನ್ಯಾಶನಲ್ ಬ್ಯೂರೋ ಆಫ್ ಸ್ಟ್ಯಾಂಡರ್ಡ್‌ನಲ್ಲಿ ಇಂತಹ ಮೊದಲ ಗಡಿಯಾರವನ್ನು ತಯಾರಿಸಿ ಇಡಲಾಯಿತು.

೧೭,೦೦,೦೦೦ ವರ್ಷಗಳ ಆವಧಿಯವರೆಗೆ ಒಂದು ಸೆಕೆಂಡಿನಷ್ಟು ಕರಾರುವಾಕ್ಕಾಗಿ ಈ ಗಡಿಯಾರ ಇರುತ್ತದೆ. ಸಮಯದ ಅಳತೆಯ ಕ್ಷೇತ್ರದಲ್ಲಿ ಇದು ಈಗಾಗಲೇ ಕ್ರಾಂತಿಯನ್ನುಂಟು ಮಾಡಿದೆ. ಪರಮಾಣುಗಳ ಕೆಲವು ಆಣುಗಳು ಉತ್ಪಾದಿಸುವ ಕಂಪನಗಳನ್ನು ಈ ಅಣುಶಕ್ತಿ ಗಡಿಯಾರವು ಅಳೆಯುತ್ತದೆ. ತೂಗಾಡುವಿಕೆಗಳ ಸಂಖ್ಯೆಯನ್ನು ಲೆಕ್ಕಮಾಡುವುದರಿಂದ ಸಮಯವನ್ನು ಅಳೆಯಲಾಗುತ್ತದೆ. ಹೆಚ್ಚಿನ ಅಣುಶಕ್ತಿಗಡಿಯಾರಗಳು ೧,೪೦೦ ರಿಂದ ೪೦,೦೦೦MHzವರೆಗೆ ಸೂಕ್ಷ್ಮ ಅಲೆಗಳ ಪ್ರದೇಶದಲ್ಲಿ ಆಗುವ ತೂಗಾಡುವಿಕೆಗಳ ಸಂಖ್ಯೆಯನ್ನು ಅಳತೆಮಾಡಿ ಕಾಲವನ್ನು ಕಂಡು ಹಿಡಿಯಲಾಗುತ್ತದೆ.

ಈ ರೀತಿಯ ಅಣುಶಕ್ತಿ ಗಡಿಯಾರಗಳ ಅಭಿವೃದ್ದಿಯಿಂದಾಗಿ ಪ್ರಪಂಚವು ೧೯೭೨ರ ಪ್ರಾರಂಭದಿಂದಲೂ ಅಣುಶಕ್ತಿ ಸಮಯಕ್ಕೆ ಬದಲಾಯಿಸಿಕೊಂಡಿತು. ಈಗ ಅಂತರಾಷ್ಟ್ರೀಯ ಒಪ್ಪಿಗೆಯಾಗಿರುವ ಅತಿ ಚಿಕ್ಕ ಸಮಯ ಘಟಕವು ಅಣುಶಕ್ತಿಸೆಕೆಂಡ್ ಆಗಿದೆ.

ಈ ಗಡಿಯಾರಗಳ ಅನುಕೂಲ ಮತ್ತು ಉಪಯೋಗ: ವಾತಾವರಣದ ಚಂಚಲತೆಯಿಂದಾಗಲಿ ಅಥವಾ ಭೂಮಿಯ ಸುತ್ತುವಿಕೆಯ ವ್ಯತ್ಯಾಸಗಳಿಂದಾಗಲಿ ಇದರ ಮೇಲೆ ಯಾವುದೇ ಪರಿಣಾಮ ಬೀರಲಾರದು ಏಕೆಂದರೆ ಭೂಮಿಯು ಪ್ರತಿವರ್ಷವೂ ಒಂದು ಸೆಕೆಂಡಿನಷ್ಟು ತನ್ನ ಸುತ್ತುವಿಕೆಯಲ್ಲಿನಿಧಾನವಾಗುತ್ತಿದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...