Home / ಲೇಖನ / ವಿಜ್ಞಾನ / ಅಣುಶಕ್ತಿಗಡಿಯಾರ

ಅಣುಶಕ್ತಿಗಡಿಯಾರ

ಮಾನವನ ನಾಗರೀಕತೆಯ ಪ್ರಾರಂಭದಿಂದಲೇ ಸಮಯವನ್ನು ಅಳೆಯುವ ಗಡಿಯಾರಗಳ ಉಪಯೋಗವಾಗುತ್ತಲಿವೆ. ಪುರಾತನ ಅಳತೆಯ ವಿಧಾನಗಳು ಅಷ್ಟೇನೂ
ಕರಾರುವಾಕ್ಕಾಗಿರಲಿಲ್ಲ. ಇದೀಗ ಸಮಯವನ್ನು ಕರಾರುವಾಕ್ಕಾಗಿ ತೋರಿಸುವ ಅತ್ಯಂತ ಸುಧಾರಿತ ಗಡಿಯಾರಗಳು ರಚನೆಯಾಗುತ್ತಲಿವೆ. ಕರಾರುವಾಕ್ಕಾಗಿ ಸಮಯ ತೋರಿಸುವ ಅದ್ಭುತ ಗಡಿಯಾರವೆಂದರೆ ಅಣುಶಕ್ತಿ ಗಡಿಯಾರಗಳು. ಕ್ರಿ.ಶ. ೧೯೪೬ರಲ್ಲಿ ಡಾ|| ವಿಲ್ಲರ್ಟ್ ಫ್ರಾಂಕ್ ಎಂಬ ಒಬ್ಬ ಅಮೇರಿಕದ ಭೌತವಿಜ್ಞಾನಿಯು ಈ ಗಡಿಯಾರವನ್ನು ಸಂಶೋಧಿಸಿದ ವಾಷಿಂಗ್‌ಟನ್ ಡಿ.ಸಿಯ ನ್ಯಾಶನಲ್ ಬ್ಯೂರೋ ಆಫ್ ಸ್ಟ್ಯಾಂಡರ್ಡ್‌ನಲ್ಲಿ ಇಂತಹ ಮೊದಲ ಗಡಿಯಾರವನ್ನು ತಯಾರಿಸಿ ಇಡಲಾಯಿತು.

೧೭,೦೦,೦೦೦ ವರ್ಷಗಳ ಆವಧಿಯವರೆಗೆ ಒಂದು ಸೆಕೆಂಡಿನಷ್ಟು ಕರಾರುವಾಕ್ಕಾಗಿ ಈ ಗಡಿಯಾರ ಇರುತ್ತದೆ. ಸಮಯದ ಅಳತೆಯ ಕ್ಷೇತ್ರದಲ್ಲಿ ಇದು ಈಗಾಗಲೇ ಕ್ರಾಂತಿಯನ್ನುಂಟು ಮಾಡಿದೆ. ಪರಮಾಣುಗಳ ಕೆಲವು ಆಣುಗಳು ಉತ್ಪಾದಿಸುವ ಕಂಪನಗಳನ್ನು ಈ ಅಣುಶಕ್ತಿ ಗಡಿಯಾರವು ಅಳೆಯುತ್ತದೆ. ತೂಗಾಡುವಿಕೆಗಳ ಸಂಖ್ಯೆಯನ್ನು ಲೆಕ್ಕಮಾಡುವುದರಿಂದ ಸಮಯವನ್ನು ಅಳೆಯಲಾಗುತ್ತದೆ. ಹೆಚ್ಚಿನ ಅಣುಶಕ್ತಿಗಡಿಯಾರಗಳು ೧,೪೦೦ ರಿಂದ ೪೦,೦೦೦MHzವರೆಗೆ ಸೂಕ್ಷ್ಮ ಅಲೆಗಳ ಪ್ರದೇಶದಲ್ಲಿ ಆಗುವ ತೂಗಾಡುವಿಕೆಗಳ ಸಂಖ್ಯೆಯನ್ನು ಅಳತೆಮಾಡಿ ಕಾಲವನ್ನು ಕಂಡು ಹಿಡಿಯಲಾಗುತ್ತದೆ.

ಈ ರೀತಿಯ ಅಣುಶಕ್ತಿ ಗಡಿಯಾರಗಳ ಅಭಿವೃದ್ದಿಯಿಂದಾಗಿ ಪ್ರಪಂಚವು ೧೯೭೨ರ ಪ್ರಾರಂಭದಿಂದಲೂ ಅಣುಶಕ್ತಿ ಸಮಯಕ್ಕೆ ಬದಲಾಯಿಸಿಕೊಂಡಿತು. ಈಗ ಅಂತರಾಷ್ಟ್ರೀಯ ಒಪ್ಪಿಗೆಯಾಗಿರುವ ಅತಿ ಚಿಕ್ಕ ಸಮಯ ಘಟಕವು ಅಣುಶಕ್ತಿಸೆಕೆಂಡ್ ಆಗಿದೆ.

ಈ ಗಡಿಯಾರಗಳ ಅನುಕೂಲ ಮತ್ತು ಉಪಯೋಗ: ವಾತಾವರಣದ ಚಂಚಲತೆಯಿಂದಾಗಲಿ ಅಥವಾ ಭೂಮಿಯ ಸುತ್ತುವಿಕೆಯ ವ್ಯತ್ಯಾಸಗಳಿಂದಾಗಲಿ ಇದರ ಮೇಲೆ ಯಾವುದೇ ಪರಿಣಾಮ ಬೀರಲಾರದು ಏಕೆಂದರೆ ಭೂಮಿಯು ಪ್ರತಿವರ್ಷವೂ ಒಂದು ಸೆಕೆಂಡಿನಷ್ಟು ತನ್ನ ಸುತ್ತುವಿಕೆಯಲ್ಲಿನಿಧಾನವಾಗುತ್ತಿದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...