Home / ಲೇಖನ / ವಿಜ್ಞಾನ / ಅಣುಶಕ್ತಿಗಡಿಯಾರ

ಅಣುಶಕ್ತಿಗಡಿಯಾರ

ಮಾನವನ ನಾಗರೀಕತೆಯ ಪ್ರಾರಂಭದಿಂದಲೇ ಸಮಯವನ್ನು ಅಳೆಯುವ ಗಡಿಯಾರಗಳ ಉಪಯೋಗವಾಗುತ್ತಲಿವೆ. ಪುರಾತನ ಅಳತೆಯ ವಿಧಾನಗಳು ಅಷ್ಟೇನೂ
ಕರಾರುವಾಕ್ಕಾಗಿರಲಿಲ್ಲ. ಇದೀಗ ಸಮಯವನ್ನು ಕರಾರುವಾಕ್ಕಾಗಿ ತೋರಿಸುವ ಅತ್ಯಂತ ಸುಧಾರಿತ ಗಡಿಯಾರಗಳು ರಚನೆಯಾಗುತ್ತಲಿವೆ. ಕರಾರುವಾಕ್ಕಾಗಿ ಸಮಯ ತೋರಿಸುವ ಅದ್ಭುತ ಗಡಿಯಾರವೆಂದರೆ ಅಣುಶಕ್ತಿ ಗಡಿಯಾರಗಳು. ಕ್ರಿ.ಶ. ೧೯೪೬ರಲ್ಲಿ ಡಾ|| ವಿಲ್ಲರ್ಟ್ ಫ್ರಾಂಕ್ ಎಂಬ ಒಬ್ಬ ಅಮೇರಿಕದ ಭೌತವಿಜ್ಞಾನಿಯು ಈ ಗಡಿಯಾರವನ್ನು ಸಂಶೋಧಿಸಿದ ವಾಷಿಂಗ್‌ಟನ್ ಡಿ.ಸಿಯ ನ್ಯಾಶನಲ್ ಬ್ಯೂರೋ ಆಫ್ ಸ್ಟ್ಯಾಂಡರ್ಡ್‌ನಲ್ಲಿ ಇಂತಹ ಮೊದಲ ಗಡಿಯಾರವನ್ನು ತಯಾರಿಸಿ ಇಡಲಾಯಿತು.

೧೭,೦೦,೦೦೦ ವರ್ಷಗಳ ಆವಧಿಯವರೆಗೆ ಒಂದು ಸೆಕೆಂಡಿನಷ್ಟು ಕರಾರುವಾಕ್ಕಾಗಿ ಈ ಗಡಿಯಾರ ಇರುತ್ತದೆ. ಸಮಯದ ಅಳತೆಯ ಕ್ಷೇತ್ರದಲ್ಲಿ ಇದು ಈಗಾಗಲೇ ಕ್ರಾಂತಿಯನ್ನುಂಟು ಮಾಡಿದೆ. ಪರಮಾಣುಗಳ ಕೆಲವು ಆಣುಗಳು ಉತ್ಪಾದಿಸುವ ಕಂಪನಗಳನ್ನು ಈ ಅಣುಶಕ್ತಿ ಗಡಿಯಾರವು ಅಳೆಯುತ್ತದೆ. ತೂಗಾಡುವಿಕೆಗಳ ಸಂಖ್ಯೆಯನ್ನು ಲೆಕ್ಕಮಾಡುವುದರಿಂದ ಸಮಯವನ್ನು ಅಳೆಯಲಾಗುತ್ತದೆ. ಹೆಚ್ಚಿನ ಅಣುಶಕ್ತಿಗಡಿಯಾರಗಳು ೧,೪೦೦ ರಿಂದ ೪೦,೦೦೦MHzವರೆಗೆ ಸೂಕ್ಷ್ಮ ಅಲೆಗಳ ಪ್ರದೇಶದಲ್ಲಿ ಆಗುವ ತೂಗಾಡುವಿಕೆಗಳ ಸಂಖ್ಯೆಯನ್ನು ಅಳತೆಮಾಡಿ ಕಾಲವನ್ನು ಕಂಡು ಹಿಡಿಯಲಾಗುತ್ತದೆ.

ಈ ರೀತಿಯ ಅಣುಶಕ್ತಿ ಗಡಿಯಾರಗಳ ಅಭಿವೃದ್ದಿಯಿಂದಾಗಿ ಪ್ರಪಂಚವು ೧೯೭೨ರ ಪ್ರಾರಂಭದಿಂದಲೂ ಅಣುಶಕ್ತಿ ಸಮಯಕ್ಕೆ ಬದಲಾಯಿಸಿಕೊಂಡಿತು. ಈಗ ಅಂತರಾಷ್ಟ್ರೀಯ ಒಪ್ಪಿಗೆಯಾಗಿರುವ ಅತಿ ಚಿಕ್ಕ ಸಮಯ ಘಟಕವು ಅಣುಶಕ್ತಿಸೆಕೆಂಡ್ ಆಗಿದೆ.

ಈ ಗಡಿಯಾರಗಳ ಅನುಕೂಲ ಮತ್ತು ಉಪಯೋಗ: ವಾತಾವರಣದ ಚಂಚಲತೆಯಿಂದಾಗಲಿ ಅಥವಾ ಭೂಮಿಯ ಸುತ್ತುವಿಕೆಯ ವ್ಯತ್ಯಾಸಗಳಿಂದಾಗಲಿ ಇದರ ಮೇಲೆ ಯಾವುದೇ ಪರಿಣಾಮ ಬೀರಲಾರದು ಏಕೆಂದರೆ ಭೂಮಿಯು ಪ್ರತಿವರ್ಷವೂ ಒಂದು ಸೆಕೆಂಡಿನಷ್ಟು ತನ್ನ ಸುತ್ತುವಿಕೆಯಲ್ಲಿನಿಧಾನವಾಗುತ್ತಿದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...