Home / ಕವನ / ಕವಿತೆ / ಪಂಚರಾತ್ರ (ತೊಗಲುಬೊಂಬೆಯಾಟ)

ಪಂಚರಾತ್ರ (ತೊಗಲುಬೊಂಬೆಯಾಟ)

ಜಗದ ಜನಶಕ್ತಿಗೆ
ನಮೋ ನಮೋ ||

ಬಣ್ಣದಾಟದ ನೆಲೆಗೆ
ನಮೋ ನಮೋ ||

ಕಲಾ ಸ್ವಾದಕನಿಗೆ
ನಮೋ ನಮೋ ||

ಕಲಾ ಪ್ರೋತ್ಸಾಹಕನಿಗೆ
ನಮೋ ನಮೋ ||

ಧನ್ಯತೆಯಿಂ ಕೈಮುಗಿವೆ
ಎನ್ನೆದುರಿನ ಜನಶಕ್ತಿಗೆ

ನಮೋ ನಮೋ ಎನ್ನುವೆ
ಎನ್ನೆದುರಿನ ಮನಶಕ್ತಿಗೆ
ನಮೋ ನಮೋ
ನಮೋ ನಮೋ
ನಮೋ ನಮೋ
ನಮೋ ನಮೋ

ಹಾಡು ೧ :     ಭಾರತವಿದು ಭಾರತ
ಜನ ಮಹಾಭಾರತ ||

ವ್ಯಾಸರಿಂ ರಚಿತ ಭಾರತ
ಕೋಟಿ ಕಿರಣ ಪ್ರಭಾತ
ಜಗವ ಕಾಣ್ವ ಬಂಧನ
ಸಕಲವೂ ನವ ದರ್ಶನ ||

ಅದರೊಂದು ತುಣುಕು
ಈ ಆಟದ ಇಣಕು
ಭಾಸನೆಂಬ ಕವಿಯು
ಸಂಸ್ಕೃತ ಪ್ರತಿಭೆಯು ||

ಅವ ಕಂಡ ಭಾರತವಿದು
ಕತೆ ವಿರಾಟ ಪರ್ವದ್ದು
ಹೆಸರಿಟ್ಟನು ಪಂಚರಾತ್ರ
ನೋಡಿ ಶಾಂತಿಯ ಪಾತ್ರ ||

ಹಾಡು ೨ :     ರಾಜಸೂಯ ಯಾಗವನು
ಮಾಡಿ ಧೀರ ದುರ್ಯೋಧನನು
ನೆರೆದರು ಸಕಲರಸರು
ಏಕಛತ್ರಾಧಿಪತ್ಯವನೊಪ್ಪಲೆಂದು ||

ಯಾಗದಲಿ ಸಂತೃಪ್ತಿ
ಭೂರಿ ಬೋಜನಗಳಾದವು
ಅರಸುಗುಳಿಯಿತು ಬಾಕಿ
ದ್ವಿಜರ ಕೊಡುಗೆ ಕಾಣಿಕೆ ||

ಹಾಡು ೩ :     ಹೇಗೆ ಹೇಳಲಿ ವತ್ಸ
ಮನದೊಳಗಣ ವ್ಯಥೆಯನು
ತಾಳಲಾರದೆ ಉಮ್ಮಳಿತ
ಲೋಚನ ಜಲಕಳಿತವನು ||

ಹಡು ೪ :     ಕೊಡುವುದು ಕೊಡುವಲ್ಲಿ
ಇಹುದು ದೊಡ್ಡತನವು
ಕೊಡದೆ ಕೊಸರಾಡಿದರೆ
ಬಹುದು ದಡ್ಡತನವು ||

ಹಾಡು ೫ :     ಪಂಚರಾತ್ರದೊಳು ತನ್ನಿ
ಪಾಂಡವರಿಹ ಕುರುಹನ್ನು
ಪಡೆಯಿರಿ ಅರ್ಧ ರಾಜ್ಯ
ಮುಕ್ತ ದಾಯಾದಿ ವ್ಯಾಜ್ಯ ||

ಹಾಡು ೬ :     ನಡೆವ ಗೋಗ್ರಹಣ
ದೊರೆ ವಿರಾಟನ ಮಾನ ಹರಣ
ಶಕುನಿ ಒಡ್ಡಿದ ತಂತ್ರ
ಭೀಷ್ಮ ದ್ರೋಣದರ ನವಮಂತ್ರ ||

ಹಾಡು ೭ :     ಕೇಳಿಗುಂಪು ಗೋವುಗಳೆ
ಗಾನದಿಂಪಿನ ಸಂಗಾತಿಗಳೆ
ಸೊಂಪು ಮೇವಿನ ಬನದಲ್ಲಿ
ಚಂದ ಮೇಯಿರಿ ಹಗಲಲ್ಲಿ ||

ನಮ್ಮದಿದುವೆ ಗೋಕುಲ
ವಿರಾಟನ ಹೈನು ಸಂಕುಲ
ಬನ್ನಿ ಮಕ್ಕಳೆ ಬನ್ನಿ ಕುಣಿಯಲು
ತುರುವ ನಗರಕೆ ಅಟ್ಟಲು ||

ಇಂದು ರಾಜನ ವರ್ಧಂತಿ
ನಮಗೆ ಉಲ್ಲಸದಾ ಪಂಕ್ತಿ
ಕುಣಿದು ಹಾಡುತ ನಲಿಯುತ
ನಮ್ಮ ನೋವನು ಮರೆಯುತ ||

ಹಾಡು ೮ :     ಇವಳೆ ಬೃಹನ್ನಳೆ
ಇವನೆ ಬೃಹನ್ನಳ ||

ಗಂಡಿನೊಳಿಹ ಹೆಣ್ಣೆ
ಹೆಣ್ಣಿನೊಳಿಹ ಗಂಡೆ
ದ್ವೈತವದ್ವೈತವಾದ
ಮಾನವ ಪ್ರತೀಕವೆ ||

ಗಿರಿಜೇಶನರ್ಧ ನಾರಿ
ಜಗದೇಕತೆ ತೋರಿ
ಗಂಡ್ಹೆಣ್ಣು ಒಟ್ಟಾಗಿ
ಇರುವುದೆ ಬದುಕಾಗಿ ||

ಒಮ್ಮುಖ ಹೆಣ್ಣು
ಇಮ್ಮುಖ ಗಂಡು
ಸೇರಿ ಎರಡೂ
ಜಗಮುಖವಾಗಿ ||

ಹಾಡು ೯ :     ತಪ್ಪಿತೊಂದು ಯುದ್ಧ
ಗೋಗ್ರಹಣ ಪ್ರಸಿದ್ಧ ||

ಶಾಂತಿ ಪ್ರತೀಕದೀ ಯುದ್ಧ
ಅಜ್ಞಾತವಾಸದಲ್ಲಿದ್ದ
ಪಾಂಡವ ಗುರ್ತೀಗೆ ಸಿದ್ಧ
ಬೃಹನ್ನಳೆಯೇ ಗೆದ್ದ ||

ಕಾಲು ಕರೆದ ಯುದ್ಧ
ಮದುವೆಗಾಗಿ ಸಿದ್ಧ
ಗೋ ಸಂಕುಲವೆಲ್ಲ
ರಕ್ಷಿತವೊ ರಕ್ಷಿತ ||

ಹಾಡು ೧೦ :     ಕಾಲು ಕೆರೆದ ಯುದ್ಧ
ಕೌರವರಿಗೊ ಅಪದ್ಧ ||

ಗೋಗ್ರಹಣಕೆ ಹೋಗಿ
ಗಣ್ಯರಿಗೆ ಭಂಗವಾಗಿ
ಚಿಂತೆಯಲ್ಲಿ ಮುಳುಗಿ
ಸುಮಾರ್ಗ ಇಲ್ಲವಾಗಿ ||

ಅತಿರಥರಿಗೆಲ್ಲಾ
ಮಾನ ಹೋದವಲ್ಲ
ತಪ್ಪಿ ಯುದ್ಧ ಘೋರ
ಸಿಕ್ಕಿಬಿದ್ದ ಕುಮಾರ ||

ಹಾಡು ೧೧ :     ಧರ್ಮದ ಶ್ರೇಷ್ಠತೆ ಶಾಂತಿ
ಯುದ್ಧದ ಬೀಜ ಅಶಾಂತಿ ||

ಕೊಂದು ಕೊಲಿಸಿದ ಮಾನವ
ಆದನಯ್ಯೋ ಛೆ ದಾನವ
ಯುದ್ಧ ಮಾಡಿ ಗೆದ್ದವನು
ಸೋತು ದುಃಖವ ತಿಂದನು ||

ಸಾವನು ಬಯಸಿದ ಬಸಿರು
ಸಾಧಿಸಲಿ ಶಾಂತಿಯ ಹಸಿರು
ಯುದ್ಧ ತಪ್ಪಿಸದ ಕೀರ್ತಿಯು
ನವ ಜೀವನದ ಮದುವೆಯು ||

ಕೊಡುವ ಭಾಗವ ಕೊಟ್ಟರೆ
ಉಳಿವುದೇನದು ಕೆಟ್ಟರೆ
ಪ್ರೀತಿ ಮಮತೆ ಅಕ್ಕರೆ
ಬದುಕಿಗೆ ಜೀವ ಇವಿರೆ ||

*****

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...