Home / ಕವನ / ಕವಿತೆ / ಪಂಚರಾತ್ರ (ತೊಗಲುಬೊಂಬೆಯಾಟ)

ಪಂಚರಾತ್ರ (ತೊಗಲುಬೊಂಬೆಯಾಟ)

ಜಗದ ಜನಶಕ್ತಿಗೆ
ನಮೋ ನಮೋ ||

ಬಣ್ಣದಾಟದ ನೆಲೆಗೆ
ನಮೋ ನಮೋ ||

ಕಲಾ ಸ್ವಾದಕನಿಗೆ
ನಮೋ ನಮೋ ||

ಕಲಾ ಪ್ರೋತ್ಸಾಹಕನಿಗೆ
ನಮೋ ನಮೋ ||

ಧನ್ಯತೆಯಿಂ ಕೈಮುಗಿವೆ
ಎನ್ನೆದುರಿನ ಜನಶಕ್ತಿಗೆ

ನಮೋ ನಮೋ ಎನ್ನುವೆ
ಎನ್ನೆದುರಿನ ಮನಶಕ್ತಿಗೆ
ನಮೋ ನಮೋ
ನಮೋ ನಮೋ
ನಮೋ ನಮೋ
ನಮೋ ನಮೋ

ಹಾಡು ೧ :     ಭಾರತವಿದು ಭಾರತ
ಜನ ಮಹಾಭಾರತ ||

ವ್ಯಾಸರಿಂ ರಚಿತ ಭಾರತ
ಕೋಟಿ ಕಿರಣ ಪ್ರಭಾತ
ಜಗವ ಕಾಣ್ವ ಬಂಧನ
ಸಕಲವೂ ನವ ದರ್ಶನ ||

ಅದರೊಂದು ತುಣುಕು
ಈ ಆಟದ ಇಣಕು
ಭಾಸನೆಂಬ ಕವಿಯು
ಸಂಸ್ಕೃತ ಪ್ರತಿಭೆಯು ||

ಅವ ಕಂಡ ಭಾರತವಿದು
ಕತೆ ವಿರಾಟ ಪರ್ವದ್ದು
ಹೆಸರಿಟ್ಟನು ಪಂಚರಾತ್ರ
ನೋಡಿ ಶಾಂತಿಯ ಪಾತ್ರ ||

ಹಾಡು ೨ :     ರಾಜಸೂಯ ಯಾಗವನು
ಮಾಡಿ ಧೀರ ದುರ್ಯೋಧನನು
ನೆರೆದರು ಸಕಲರಸರು
ಏಕಛತ್ರಾಧಿಪತ್ಯವನೊಪ್ಪಲೆಂದು ||

ಯಾಗದಲಿ ಸಂತೃಪ್ತಿ
ಭೂರಿ ಬೋಜನಗಳಾದವು
ಅರಸುಗುಳಿಯಿತು ಬಾಕಿ
ದ್ವಿಜರ ಕೊಡುಗೆ ಕಾಣಿಕೆ ||

ಹಾಡು ೩ :     ಹೇಗೆ ಹೇಳಲಿ ವತ್ಸ
ಮನದೊಳಗಣ ವ್ಯಥೆಯನು
ತಾಳಲಾರದೆ ಉಮ್ಮಳಿತ
ಲೋಚನ ಜಲಕಳಿತವನು ||

ಹಡು ೪ :     ಕೊಡುವುದು ಕೊಡುವಲ್ಲಿ
ಇಹುದು ದೊಡ್ಡತನವು
ಕೊಡದೆ ಕೊಸರಾಡಿದರೆ
ಬಹುದು ದಡ್ಡತನವು ||

ಹಾಡು ೫ :     ಪಂಚರಾತ್ರದೊಳು ತನ್ನಿ
ಪಾಂಡವರಿಹ ಕುರುಹನ್ನು
ಪಡೆಯಿರಿ ಅರ್ಧ ರಾಜ್ಯ
ಮುಕ್ತ ದಾಯಾದಿ ವ್ಯಾಜ್ಯ ||

ಹಾಡು ೬ :     ನಡೆವ ಗೋಗ್ರಹಣ
ದೊರೆ ವಿರಾಟನ ಮಾನ ಹರಣ
ಶಕುನಿ ಒಡ್ಡಿದ ತಂತ್ರ
ಭೀಷ್ಮ ದ್ರೋಣದರ ನವಮಂತ್ರ ||

ಹಾಡು ೭ :     ಕೇಳಿಗುಂಪು ಗೋವುಗಳೆ
ಗಾನದಿಂಪಿನ ಸಂಗಾತಿಗಳೆ
ಸೊಂಪು ಮೇವಿನ ಬನದಲ್ಲಿ
ಚಂದ ಮೇಯಿರಿ ಹಗಲಲ್ಲಿ ||

ನಮ್ಮದಿದುವೆ ಗೋಕುಲ
ವಿರಾಟನ ಹೈನು ಸಂಕುಲ
ಬನ್ನಿ ಮಕ್ಕಳೆ ಬನ್ನಿ ಕುಣಿಯಲು
ತುರುವ ನಗರಕೆ ಅಟ್ಟಲು ||

ಇಂದು ರಾಜನ ವರ್ಧಂತಿ
ನಮಗೆ ಉಲ್ಲಸದಾ ಪಂಕ್ತಿ
ಕುಣಿದು ಹಾಡುತ ನಲಿಯುತ
ನಮ್ಮ ನೋವನು ಮರೆಯುತ ||

ಹಾಡು ೮ :     ಇವಳೆ ಬೃಹನ್ನಳೆ
ಇವನೆ ಬೃಹನ್ನಳ ||

ಗಂಡಿನೊಳಿಹ ಹೆಣ್ಣೆ
ಹೆಣ್ಣಿನೊಳಿಹ ಗಂಡೆ
ದ್ವೈತವದ್ವೈತವಾದ
ಮಾನವ ಪ್ರತೀಕವೆ ||

ಗಿರಿಜೇಶನರ್ಧ ನಾರಿ
ಜಗದೇಕತೆ ತೋರಿ
ಗಂಡ್ಹೆಣ್ಣು ಒಟ್ಟಾಗಿ
ಇರುವುದೆ ಬದುಕಾಗಿ ||

ಒಮ್ಮುಖ ಹೆಣ್ಣು
ಇಮ್ಮುಖ ಗಂಡು
ಸೇರಿ ಎರಡೂ
ಜಗಮುಖವಾಗಿ ||

ಹಾಡು ೯ :     ತಪ್ಪಿತೊಂದು ಯುದ್ಧ
ಗೋಗ್ರಹಣ ಪ್ರಸಿದ್ಧ ||

ಶಾಂತಿ ಪ್ರತೀಕದೀ ಯುದ್ಧ
ಅಜ್ಞಾತವಾಸದಲ್ಲಿದ್ದ
ಪಾಂಡವ ಗುರ್ತೀಗೆ ಸಿದ್ಧ
ಬೃಹನ್ನಳೆಯೇ ಗೆದ್ದ ||

ಕಾಲು ಕರೆದ ಯುದ್ಧ
ಮದುವೆಗಾಗಿ ಸಿದ್ಧ
ಗೋ ಸಂಕುಲವೆಲ್ಲ
ರಕ್ಷಿತವೊ ರಕ್ಷಿತ ||

ಹಾಡು ೧೦ :     ಕಾಲು ಕೆರೆದ ಯುದ್ಧ
ಕೌರವರಿಗೊ ಅಪದ್ಧ ||

ಗೋಗ್ರಹಣಕೆ ಹೋಗಿ
ಗಣ್ಯರಿಗೆ ಭಂಗವಾಗಿ
ಚಿಂತೆಯಲ್ಲಿ ಮುಳುಗಿ
ಸುಮಾರ್ಗ ಇಲ್ಲವಾಗಿ ||

ಅತಿರಥರಿಗೆಲ್ಲಾ
ಮಾನ ಹೋದವಲ್ಲ
ತಪ್ಪಿ ಯುದ್ಧ ಘೋರ
ಸಿಕ್ಕಿಬಿದ್ದ ಕುಮಾರ ||

ಹಾಡು ೧೧ :     ಧರ್ಮದ ಶ್ರೇಷ್ಠತೆ ಶಾಂತಿ
ಯುದ್ಧದ ಬೀಜ ಅಶಾಂತಿ ||

ಕೊಂದು ಕೊಲಿಸಿದ ಮಾನವ
ಆದನಯ್ಯೋ ಛೆ ದಾನವ
ಯುದ್ಧ ಮಾಡಿ ಗೆದ್ದವನು
ಸೋತು ದುಃಖವ ತಿಂದನು ||

ಸಾವನು ಬಯಸಿದ ಬಸಿರು
ಸಾಧಿಸಲಿ ಶಾಂತಿಯ ಹಸಿರು
ಯುದ್ಧ ತಪ್ಪಿಸದ ಕೀರ್ತಿಯು
ನವ ಜೀವನದ ಮದುವೆಯು ||

ಕೊಡುವ ಭಾಗವ ಕೊಟ್ಟರೆ
ಉಳಿವುದೇನದು ಕೆಟ್ಟರೆ
ಪ್ರೀತಿ ಮಮತೆ ಅಕ್ಕರೆ
ಬದುಕಿಗೆ ಜೀವ ಇವಿರೆ ||

*****

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...