Home / ಕವನ / ಕವಿತೆ / ಪಂಚರಾತ್ರ (ತೊಗಲುಬೊಂಬೆಯಾಟ)

ಪಂಚರಾತ್ರ (ತೊಗಲುಬೊಂಬೆಯಾಟ)

ಜಗದ ಜನಶಕ್ತಿಗೆ
ನಮೋ ನಮೋ ||

ಬಣ್ಣದಾಟದ ನೆಲೆಗೆ
ನಮೋ ನಮೋ ||

ಕಲಾ ಸ್ವಾದಕನಿಗೆ
ನಮೋ ನಮೋ ||

ಕಲಾ ಪ್ರೋತ್ಸಾಹಕನಿಗೆ
ನಮೋ ನಮೋ ||

ಧನ್ಯತೆಯಿಂ ಕೈಮುಗಿವೆ
ಎನ್ನೆದುರಿನ ಜನಶಕ್ತಿಗೆ

ನಮೋ ನಮೋ ಎನ್ನುವೆ
ಎನ್ನೆದುರಿನ ಮನಶಕ್ತಿಗೆ
ನಮೋ ನಮೋ
ನಮೋ ನಮೋ
ನಮೋ ನಮೋ
ನಮೋ ನಮೋ

ಹಾಡು ೧ :     ಭಾರತವಿದು ಭಾರತ
ಜನ ಮಹಾಭಾರತ ||

ವ್ಯಾಸರಿಂ ರಚಿತ ಭಾರತ
ಕೋಟಿ ಕಿರಣ ಪ್ರಭಾತ
ಜಗವ ಕಾಣ್ವ ಬಂಧನ
ಸಕಲವೂ ನವ ದರ್ಶನ ||

ಅದರೊಂದು ತುಣುಕು
ಈ ಆಟದ ಇಣಕು
ಭಾಸನೆಂಬ ಕವಿಯು
ಸಂಸ್ಕೃತ ಪ್ರತಿಭೆಯು ||

ಅವ ಕಂಡ ಭಾರತವಿದು
ಕತೆ ವಿರಾಟ ಪರ್ವದ್ದು
ಹೆಸರಿಟ್ಟನು ಪಂಚರಾತ್ರ
ನೋಡಿ ಶಾಂತಿಯ ಪಾತ್ರ ||

ಹಾಡು ೨ :     ರಾಜಸೂಯ ಯಾಗವನು
ಮಾಡಿ ಧೀರ ದುರ್ಯೋಧನನು
ನೆರೆದರು ಸಕಲರಸರು
ಏಕಛತ್ರಾಧಿಪತ್ಯವನೊಪ್ಪಲೆಂದು ||

ಯಾಗದಲಿ ಸಂತೃಪ್ತಿ
ಭೂರಿ ಬೋಜನಗಳಾದವು
ಅರಸುಗುಳಿಯಿತು ಬಾಕಿ
ದ್ವಿಜರ ಕೊಡುಗೆ ಕಾಣಿಕೆ ||

ಹಾಡು ೩ :     ಹೇಗೆ ಹೇಳಲಿ ವತ್ಸ
ಮನದೊಳಗಣ ವ್ಯಥೆಯನು
ತಾಳಲಾರದೆ ಉಮ್ಮಳಿತ
ಲೋಚನ ಜಲಕಳಿತವನು ||

ಹಡು ೪ :     ಕೊಡುವುದು ಕೊಡುವಲ್ಲಿ
ಇಹುದು ದೊಡ್ಡತನವು
ಕೊಡದೆ ಕೊಸರಾಡಿದರೆ
ಬಹುದು ದಡ್ಡತನವು ||

ಹಾಡು ೫ :     ಪಂಚರಾತ್ರದೊಳು ತನ್ನಿ
ಪಾಂಡವರಿಹ ಕುರುಹನ್ನು
ಪಡೆಯಿರಿ ಅರ್ಧ ರಾಜ್ಯ
ಮುಕ್ತ ದಾಯಾದಿ ವ್ಯಾಜ್ಯ ||

ಹಾಡು ೬ :     ನಡೆವ ಗೋಗ್ರಹಣ
ದೊರೆ ವಿರಾಟನ ಮಾನ ಹರಣ
ಶಕುನಿ ಒಡ್ಡಿದ ತಂತ್ರ
ಭೀಷ್ಮ ದ್ರೋಣದರ ನವಮಂತ್ರ ||

ಹಾಡು ೭ :     ಕೇಳಿಗುಂಪು ಗೋವುಗಳೆ
ಗಾನದಿಂಪಿನ ಸಂಗಾತಿಗಳೆ
ಸೊಂಪು ಮೇವಿನ ಬನದಲ್ಲಿ
ಚಂದ ಮೇಯಿರಿ ಹಗಲಲ್ಲಿ ||

ನಮ್ಮದಿದುವೆ ಗೋಕುಲ
ವಿರಾಟನ ಹೈನು ಸಂಕುಲ
ಬನ್ನಿ ಮಕ್ಕಳೆ ಬನ್ನಿ ಕುಣಿಯಲು
ತುರುವ ನಗರಕೆ ಅಟ್ಟಲು ||

ಇಂದು ರಾಜನ ವರ್ಧಂತಿ
ನಮಗೆ ಉಲ್ಲಸದಾ ಪಂಕ್ತಿ
ಕುಣಿದು ಹಾಡುತ ನಲಿಯುತ
ನಮ್ಮ ನೋವನು ಮರೆಯುತ ||

ಹಾಡು ೮ :     ಇವಳೆ ಬೃಹನ್ನಳೆ
ಇವನೆ ಬೃಹನ್ನಳ ||

ಗಂಡಿನೊಳಿಹ ಹೆಣ್ಣೆ
ಹೆಣ್ಣಿನೊಳಿಹ ಗಂಡೆ
ದ್ವೈತವದ್ವೈತವಾದ
ಮಾನವ ಪ್ರತೀಕವೆ ||

ಗಿರಿಜೇಶನರ್ಧ ನಾರಿ
ಜಗದೇಕತೆ ತೋರಿ
ಗಂಡ್ಹೆಣ್ಣು ಒಟ್ಟಾಗಿ
ಇರುವುದೆ ಬದುಕಾಗಿ ||

ಒಮ್ಮುಖ ಹೆಣ್ಣು
ಇಮ್ಮುಖ ಗಂಡು
ಸೇರಿ ಎರಡೂ
ಜಗಮುಖವಾಗಿ ||

ಹಾಡು ೯ :     ತಪ್ಪಿತೊಂದು ಯುದ್ಧ
ಗೋಗ್ರಹಣ ಪ್ರಸಿದ್ಧ ||

ಶಾಂತಿ ಪ್ರತೀಕದೀ ಯುದ್ಧ
ಅಜ್ಞಾತವಾಸದಲ್ಲಿದ್ದ
ಪಾಂಡವ ಗುರ್ತೀಗೆ ಸಿದ್ಧ
ಬೃಹನ್ನಳೆಯೇ ಗೆದ್ದ ||

ಕಾಲು ಕರೆದ ಯುದ್ಧ
ಮದುವೆಗಾಗಿ ಸಿದ್ಧ
ಗೋ ಸಂಕುಲವೆಲ್ಲ
ರಕ್ಷಿತವೊ ರಕ್ಷಿತ ||

ಹಾಡು ೧೦ :     ಕಾಲು ಕೆರೆದ ಯುದ್ಧ
ಕೌರವರಿಗೊ ಅಪದ್ಧ ||

ಗೋಗ್ರಹಣಕೆ ಹೋಗಿ
ಗಣ್ಯರಿಗೆ ಭಂಗವಾಗಿ
ಚಿಂತೆಯಲ್ಲಿ ಮುಳುಗಿ
ಸುಮಾರ್ಗ ಇಲ್ಲವಾಗಿ ||

ಅತಿರಥರಿಗೆಲ್ಲಾ
ಮಾನ ಹೋದವಲ್ಲ
ತಪ್ಪಿ ಯುದ್ಧ ಘೋರ
ಸಿಕ್ಕಿಬಿದ್ದ ಕುಮಾರ ||

ಹಾಡು ೧೧ :     ಧರ್ಮದ ಶ್ರೇಷ್ಠತೆ ಶಾಂತಿ
ಯುದ್ಧದ ಬೀಜ ಅಶಾಂತಿ ||

ಕೊಂದು ಕೊಲಿಸಿದ ಮಾನವ
ಆದನಯ್ಯೋ ಛೆ ದಾನವ
ಯುದ್ಧ ಮಾಡಿ ಗೆದ್ದವನು
ಸೋತು ದುಃಖವ ತಿಂದನು ||

ಸಾವನು ಬಯಸಿದ ಬಸಿರು
ಸಾಧಿಸಲಿ ಶಾಂತಿಯ ಹಸಿರು
ಯುದ್ಧ ತಪ್ಪಿಸದ ಕೀರ್ತಿಯು
ನವ ಜೀವನದ ಮದುವೆಯು ||

ಕೊಡುವ ಭಾಗವ ಕೊಟ್ಟರೆ
ಉಳಿವುದೇನದು ಕೆಟ್ಟರೆ
ಪ್ರೀತಿ ಮಮತೆ ಅಕ್ಕರೆ
ಬದುಕಿಗೆ ಜೀವ ಇವಿರೆ ||

*****

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...