Home / ಕವನ / ಕವಿತೆ / ವಸಂತ ಚಂದನ

ವಸಂತ ಚಂದನ

ವಸಂತ ಚಂದನ
ನಂದನಗಂಧವ ನಿಂದಿಸುತಿದ ಆ-
ನಂದದೊಳಂಜಲಿಯೊಳು ಕೊಳುವೆಲರಿನ-
ಅಲರಲರಿನ ಪೆರಿಮಳಗಳೆ ಮೇಳದಿ
ಮನಮನಗಳ ಹೊಗುತಲ್ಲಿ ಸುಮಾನದಿ
ದಿನದ ದಿನದ ಜಂಜಡಮೊಳು ಮೈಗರೆ-
ದಿಹ ಸಮ್ಮುದಗಳನೆಚ್ಚರಗೊಳಿಸುವ
ವಸಂತ ಚಂದನ
ಬಂಡೆಗಳೆದೆಬಿರಿಸುತ ಬೆಳೆದೊತ್ತಿನ
ಹುತ್ತದ ನಾಗಗಳಪ್ಪುಗೆಕೆಳೆಯೊಳು
ಕಮ್ಮನೆಮರ ಮೈಗೊಂಡಿಹ ರಸದಿಂ-
ದೊಲುಮೆನಂಜ ಬಗೆಗೇರಿಸಕಲಿತಿಹ
ವಸಂತ ಚಂದನ
ಮಲೆತಲೆಮಂಜೊಳು ಪಳಗಿಹ ಕರ್ಪೂ-
ರದ ಮೃಗಮದದುನ್ಮದಸುರಭಿಯ ಕಾ-
ಶ್ಮೀರದ ಕಂದರ ಲಕ್ಷ್ಮಿಯ ಕುಂಕುಮ-
ವೋ ಎನಲಚ್ಚರಿ ಕೇಸರಿಚರ್ಚೆಯ
ವಸಂತ ಚಂದನ
ನೀಲದ ತಂಪ ತರುವ ತೆಂಗಾಳಿ
ಚಂದನಗಂಧಕದರ ವೈಹಾಳಿ
ಕಾತರಿಸುವ ಕೋಗಿಲೆ ದನಿ ಕೇಳಿ
ಚಿತ್ತಕಿಟ್ಟ ಚಿತ್ತಜನಿದೊ ದಾಳಿ
ಕೊಳ್ಳಿರಿ ಚಂದನ
ತುಂಬಿದಿಂದು ಬರೆ ಬಾನಿಗೆ ಚಂದನ
ಹೂತ ಬನಕೆ ಹೂಧೂಳಿಯ ಚಂದನ
ಬಹುಮಹೋತ್ಸವಾಮೋದಸ್ಯಂದನ
ಹೃದಯೋತ್ಸವಕೀ ವಸಂತ ಚಂದನ-
ಕೊಳ್ಳಿರಿ ಚಂದನ
ತೆರೆದೆದೆಯೆನು ಹೂಮಾಲೆಯು ಮುತ್ತಿಡೆ
ಬಾಂದೊರೆಯಂತೆಲರಂಗವನಪ್ಪಿಡೆ
ಉದಿತೋದಿತ ರಾಗವ ರೇಖಿಸುವೊಲು
ಚಂದನಕಾಗಲಿ ವಕ್ಷಸ್ಥಲವೆಡೆ-
ಕೊಳ್ಳಿರಿ ಚಂದನ
ಶ್ರುತಿಘೋಷದ ಶ್ರುತಿಮೋಹನಗೀತದ
ಸಂಶ್ರಿತಧರ್ಮಾಗಮಸೌಂದರ್ಯದ
ಹಸೆಯೊಸಗೆಯ ಚೆಲುವಿನ ಸಂರಂಭದ
ನೆನವೊಳು ತೊಯ್ದಿಹ ಸುವರ್ಣವರ್ಣದ
ವಸಂತ ಚಂದನ
ಒಲಿವರೆ ನಮ್ಮೀವಸಂತ ಸಮಯಕೆ
ಸಿಂಗರ ಸಡಗರದೀ ಮಲೆಹುಳುವಿಗೆ
ಬೆಳುದಿಂಗಳ ಗುಡಿಗೋಪುರದೂರಿಗೆ
ಒಲಿವರೆ ರಸಸ್ವಾಯತ್ತಕೆ ಕೊಳ್ಳಿರಿ
ವಸಂತ ಚಂದನ
ಋತು ನಡೆಗೊಳಿಸುವ ಮಾಧವಲಾಸ್ಯವ
ಅನುವದಿಸುವ ತೆರ ಮನವನುಗೊಳಿಸುವ
ಪರಿಣಾಮಕೆ ಪರಿಮಳಿಸಿಹ ಪರಿಣತ
ಸೌಗಂಧದ ಪರಿಕರ್ಮವ ನೇಹದಿ
ಕೊಳ್ಳಿರಿ ಚಂದನ
*****
ಈ ಹಾಡಿನ ಬೇರು ನನ್ನ “ಈಚಲುಮರದ ಕೆಳಗೆ” ಎಂಬ ಪುಸ್ತಕದಲ್ಲಿನ ‘ವಸಂತ ಚಂದನೋತ್ಸವ’ ಎಂಬ ಬಂಧದಲ್ಲಿದೆ.
Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...