Home / ಕವನ / ಕವಿತೆ / ಪಯಣದ ಹಾಡು

ಪಯಣದ ಹಾಡು

ಗಾಳಿ ಬಿಟ್ಟಿತು ಏಳು ಕೆಳದಿ ಕೇಳು ಕಡಲಿನ ಕರೆಯನು
ನಾಳೆ ಸಿಕ್ಕದು ಇಂಥ ವೇಳೆಯು ಹೇಳು ಪಯಣದ ಹಾಡನು

ದೇವಲೋಕದ ದಿವ್ಯ ಗಾನದ ಭವ್ಯನಾದವನಾಲಿಸು
ಸಾವು ನೋವುಗಳಾಚೆ ಚಾಚಿಹ ಭಾವಲೋಕವನೀಕ್ಷಿಸು

ಸತ್ಯನಿತ್ಯಗಳಿಂದ ಬಂದಿಹ ಚೈತ್ಯಪುರುಷನಮಾತ್ಯರು
ಮೃತ್ಯು ಮುಖದಿಂದಮರರಾದೆವು ನಮ್ಮ ಹಿರಿಯರು ಕರೆವರು

ತೊರೆದು ತೀರದಿ ತೊಡವುಗಳನೀನೇರು ಹಡಗವು ಕಾದಿದೆ
ತೊರೆಯ ತೊಡೆಯನ್ನೇರಿ ಆಚೆಯ ದಡದ ವರೆಗೂ ಸಾಗಿದೆ

ಹೊಂಬಣ್ಣದ ಹೊನ್ನು ಹಡಗವು ಹೊಂಬಿಸಿಲಲಿ ಹೊಳೆವುದು
ನಂಬಿದವರಿಗೆ ಇಂಬು ದೊರೆಯುವದೆಂಬ ಸತ್ಯವ ಸಾರ್ವುದು

ನೀಲಿ ಪಟ ಮೇಲೆದ್ದು ಮೆರೆವುದು ನೀಲವ್ಯೋಮದ ಮಧ್ಯದಿ
ಕಾಲದೊಂದಿಗೆ ತಾಲ ಹಾಕುತಕಾಲ ಮಂಡಲ ಗರ್ಭದಿ

ದಾರಿಯುದ್ದಕು ಕೆತ್ತಿ ಕೋದಿದೆ ಹವಳ ಮುತ್ತಿನ ತೋರಣ
ಹಾರದಂದದಿ ಹಾರ ಹಕ್ಕಿಗಳಿಂದ ಬೆಳಗಿದೆ ಮೂಡಣ

ಮುಗಿಲ ನೀರಿನ ಮೀನದಂದದಿ ರೆಕ್ಕೆಗೊಂಡಿಹ ಮನುಜರು
ನಗುತ ನಮ್ಮನ್ನೆ ದುರುಗೊಳ್ಳುತ ಮುಂದ ಮುಂದಕೆ ಹೊರಟರು

ಅಲೆಯುತಲೆಯುತ ಅಲೆಗಳೊಂದಿಗೆ ಆಟವಾಡುತ ಸಾಗುವಾ
ಕಲೆತು ಕಡಲಿನ ಜೀವದೊಂದಿಗೆ ದೇವಲೋಕಕ್ಕೇರುವಾ

ನೋಡು ದೂರದಿ ಆಚೆ ತೀರದಿ ದೇವಗಡಣವು ಕೂಡಿದೆ
ಮೋಡದೊಡಲಿಂದಿಳಿದು ಬಂದಿಹ ತಾರೆ ಹೂಮಳೆಗರೆದಿದೆ

ಜೀವ ಹಿರಿ ಹಿರಿದಾಗಲಿ
ದೇವನೊಲುಮೆಗೆ ಬಾಗಲಿ

ಆತನುಸುರಿಗೆ ಹೆಸರು ಬರಲೆಂದೆನ್ನು ಸಾಗುವಾ ಮುಂದಕೆ
ಆತನಿಂದಲೆ ಬ೦ದು ಮರಳಿದೆವೆನ್ನು ಆತನ ಪಾದಕೆ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...