Home / ಕವನ / ಕವಿತೆ / ಮಳಿ ಬಂತು

ಮಳಿ ಬಂತು

ಮಳಿ ಬಂತು ನೋಡು ಮೂಡಲಿನ್ಯಾಗ-
ಮರಡೀಯ ತಲಿಯ ಮ್ಯಾಗ
ಗುಡು ಗುಡುಡು ಎಂದು ಗುಡಗ್ತದ ಕಾಡು ಕರಿಮುಗಿಲು-
ಕೇಳ್ದವರ ಎದೆಗೆ ಭುಗಿಲು
ಗಡಗಡಡ ಎ೦ದು ನಡಗ್ತದ ನಿಂತ ನೆಲದೊಡಲು-
ನೆರೆದವರಿಗೆಲ್ಲ ದಿಗಿಲು
ಇದನೋಡಿ ರವಿಯು ತಾನೋಡಿ ಹೋದನಪ ಚದರಿ
ಬರಲಿಲ್ಲ ಚಿಕ್ಕಿಗಳು ಬೆದರಿ
ಮಳಿಬಂತು ನೋಡು ಮೂಡಲಿನ್ಯಾಗ-
ಮರಡೀಯ ತಲಿಯ ಮ್ಯಾಗ

ಬಾನಿ೦ದ ಬಿದ್ದು ಮೇಲೆದ್ದು ಮಣ್ಣಿನೊಡನಿದ್ದು-
ಹೊರಟೀತು ನೀರು ನೆಲದುದ್ದು
ಹನಿ ಹನಿ ಕೂಡಿ ಹಳ್ಳಾಗಿ ತುಂಬಿ ಹರಿದಾವ ಹೊಳೆಯ ಕಡಿಗಾಗಿ-
ಅಲ್ಲಲ್ಲಿ ನಿಂತು ಮಡುವಾಗಿ
ಹೊಲ ತುಂಬಿ ತುಳಕಿ ಕೆರೆನೀರ ಕುಲುಕಿ ನದಿನೀರನೆಲ್ಲ ಕಲಕಿ-
ಹಾಕೀತು ನೀರು ತಳಕಿ
ಗಿಡಮರ ಬಳ್ಳಿ ಎಲಿಸಾಲು ಕಳ್ಳಿ ನಿಂತಾವ ಜಳಕ ಮಾಡಿ-
ತಣಿದಾವು ನೀರ ನೋಡಿ
ಮಳಿ ಬಂತು ನೋಡು ಮೂಡಲಿನ್ಯಾಗ-
ಮರಡೀಯ ತಲಿಯ ಮ್ಯಾಗ
ದಿಕ್ಕೆಟ್ಟು ಹಾರಿ ಸಿಕ್ಕಲ್ಲೆ ಸೇರಿ ಹುದುಗ್ಯಾವ ಹಕ್ಕಿ ಪಕ್ಕಿ-
ಆಗ್ಯಾವ ಕಕ್ಕ ಬಿಕ್ಕಿ
ಗಿಡದಿಂದ ಗಿಡಕೆ ಹಾರಾಡಿ ನಡಕ ಬದ್ದಾವ ಕೋತಿ ಜೋತು-
ಮಳೆಗೂಡ ಹೆಣಗಿ ಸೋತು
ದನಕರುಗಳೆಲ್ಲ ನಿಂತಾವ ಹುಲ್ಲ ತಿನಲಾರ್ದ ಅಡವಿಯಲ್ಲಿ-
ಬೆಪ್ಪಾಗಿ ಅಲ್ಲಿ ಇಲ್ಲಿ
ದನಕಾವ ಹುಡುಗಹುಡುಗಿಯರು ಮನೆಗೆ ಬಂದಾರ ಓಡಿತೊಯ್ದು-
ಬಿಟಗೊಟ್ಟ ಹುಲ್ಲ ಕೊಯ್ದು
ಮಳಿ ಬಂದಿ ನೋಡು – ಮೂಡಿಲಿನ್ಯಾಗ
ಮರಡೀಯ ತಲಿಯ ಮ್ಯಾಗ

ಬೇಸಿಗೆಯ ಬಿಸಿಲ ಬೇಗೆಯಲಿ ಬಳಲಿ ಬೆಂದಾಳ ಭೂಮಿತಾಯಿ-
ನೀರಡಿಸಿ ಬಿಟ್ಟು ಬಾಯಿ
ಗುಡ್ಡಕ್ಕೆ ತಾಗಿ ಹತ್ತಿದ್ದ ಬ್ಯಾಗಿ ಸುಟ್ಟಂಥ ಮೈಯ ಚಾಚಿ
ಹಲುಬ್ಯಾಳ ಆಂಗಲಾಚಿ
ಬಾಯಾರಿ ಬಾಯ್ಬರದೆ ಬಿದ್ದಲ್ಲೆ ಇದ್ದಽರು ಆಸರಕೆ ದೈವ ಬ೦ತು-
ಮರೆಯಲ್ಲಿ ಇತ್ತು ನಿಂತು
ಆಕಾಶ ತಂದೆ ಎದೆ ಕರಗಿ ಬ೦ದೆ ಮಳೆಯಾಗಿ ನೆಲಕೆ ನಿಂದೆ
ಬರುವಾಗ ಅಮೃತ ತಂದೆ
ಮಳೆ ಬಂತು ನೋಡು ಮೂಡಲಿನ್ಯಾಗ
ಮರಡೀಯ ತಲಿಯಮ್ಯಾಗ
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...