Home / ಕಥೆ / ಕಿರು ಕಥೆ / ಪ್ರಶ್ನೆಗೆ ಉತ್ತರ

ಪ್ರಶ್ನೆಗೆ ಉತ್ತರ

“ಶೂನ್ಯವನ್ನು ತಲುಪುದು ಹೇಗೆ?” ಎಂದು ಒಬ್ಬ ಶಿಷ್ಯ ಗುರುಗಳಲ್ಲಿ ಕೇಳಿದ.
ಗುರು ಹೇಳಿದರು- “ಅದು ತಲುಪುವುದಲ್ಲ, ಪಡೆಯುವುದು”
“ಹಾಗೆಂದರೆ ಏನು?” ಶಿಷ್ಯ ಕೇಳಿದ.

ನಮ್ಮ ಹಾವಭಾವ, ಬಾಳು ಬದುಕು, ಸೀಮ ಅಸ್ಸೀಮ, ನೇಹಗೇಹ, ಗೆರೆಗೋಡೆ, ಅಡ್ಡದಿಡ್ಡೆ, ರಾಗವಿರಾಗ, ಬೆಳಕುನೆಳಲು, ಪ್ರಜ್ಞೆ ಪ್ರಾಣ, ಅಂಗ ಅಭಂಗ, ನಾನಲ್ಲಿ-ಬಾನು, ಬಾನಲ್ಲಿ ನಾನು, ಪವನದಲ್ಲಿ ಪ್ರಾಣ, ಪ್ರಾಣದಲಿ ವಿಶ್ವ ಎಂಬ ಸ್ಥಿತಿಯಲ್ಲಿ ನಡೆವುದೇ ಶೂನ್ಯದ ಹಾದಿ ಎಲ್ಲ ಬಿಡುವುದಲ್ಲ. ಎಲ್ಲ ಸೇರಿಸಿ ಒಂದಾಗುವುದು. ಸೀಮೆಗಳ ಸೀಮೋಲ್ಲಂಘನ, ಗೆರೆ ಗೋಡೆಗಳ ವಿಚ್ಛೇದನ, ಅಡ್ಡದಿಡ್ಡೆಯ ಆಚೆ, ಬೆಳಕುನೆರಳಲಿನ ವಿಸ್ತಾರದಲ್ಲಿ, ಭಿನ್ನತೆಯಿಂದ ಬಿಡುಗಡೆ, ಬಿಡುಗಡೆಯಿಂದ ಎಲ್ಲೆಡೆ ಬದುಕು ಬಾಳಿನ ಬಯಲ ಸೀಮೆಯಲ್ಲಿ ಅನಂತತೆಯ ಹೆಜ್ಜೆಯಲ್ಲಿ ಎಲ್ಲಡೆ ಇಲ್ಲದ್ದು ಏನಿಲ್ಲ, ಏನಿಲ್ಲ, ಹೇಳು? ಅದೇ ನೇತಿ ನೇತಿ ಅಲ್ಲವೇ?” ಎಂದಾಗ ಗುರುಗಳು, ಶಿಷ್ಯ ಸೃಷ್ಟಿಯಲ್ಲಿ ಒಂದಾಗಿ ಶೂನ್ಯವಾಗಿದ್ದ. ತನ್ನ ಪ್ರಶ್ನೆಗೆ ತಾನೇ ಉತ್ತರವಾಗಿ, ಗುರುಗಳನ್ನು ನಮಿಸುತ್ತ ನಡೆದಿದ್ದ.
*****

Tagged:

Leave a Reply

Your email address will not be published. Required fields are marked *

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...