Home / ಕವನ / ಕವಿತೆ / ದಿಲ್ಲಿ ಆವರಿಸಿದ ಮಂಜು

ದಿಲ್ಲಿ ಆವರಿಸಿದ ಮಂಜು

ದಿಲ್ಲಿ ನಗರಿ ಎಲ್ಲಿದೆಯೋ
ಸೂರ್ಯನ ಟಾರ್ಚ್ ಹತ್ತಲೊಲ್ಲದೆ!
ನಾಲ್ಕು ಹೆಜ್ಜೆ ಹಿಂದೆ ಮುಂದೆ
ಏನೂ ಕಾಣದ ದಟ್ಟ ಮಂಜು
ಅಬ್ಬಬ್ಬಾ ! ಡಿಸೆಂಬರ ಚಳಿ ಮೈಕೊರೆತ
ಹಾರಲೊಪ್ಪದ ವಿಮಾನಗಳು ಕುಕ್ಕರುಗಾಲು ಹಾಕಿವೆ
ನಿಲ್ದಾಣದೊಳಗೆಲ್ಲರ ಓಡಾಟ
ಜಗಳಾಟ ಕೌಂಟರಿನಲ್ಲಿ
ಫೋಟೋಗ್ರಾಫರನ ಕ್ಯಾಮರಾಗ್ಲಾಸೆಲ್ಲ
ಮಬ್ಬು, ನೆಲ ಖುರ್ಚಿ ತಾಗಿದ್ದೆಲ್ಲ
ಹಿಮ ಹಿಮ ಮೈ ಮರಗಟ್ಟುವಿಕೆ
ಅವಿತುಕೊಳ್ಳುವಿಕೆ
ಬ್ಯಾಗುಗಳ ಸಂದಿಗೊಂದಿಗಳೊಳಗೆ
ಮಹಿಳೆಯರು ಮಕ್ಕಳು ವೃದ್ಧರು
ಗುಬ್ಬಚ್ಚಿಗೂಡಿನೊಳಗೆ ಪಿಳಿ ಪಿಳಿ ಕಣ್ಣು
ಪಾಪ ! ಟೀ ಕಾಫಿ ಇಲ್ಲದೆ ಬಾಯಾರಿದೆ
ಅಬ್ಬಬ್ಬಾ ! ದಟ್ಟ ಮಂಜು.

ವಿಮಾನಗಳೆಲ್ಲೋ ಅಧಿಕಾರಿಗಳೆಲ್ಲೋ
ಕಾಣಿಸದ ವೇಳಾಪತ್ರಿಕೆ ಬೋರ್ಡು
ಕೇಳಿಸದು ಅನೌನ್ಸ್‌ಮೆಂಟ್
ಮಂಜು ಮೋಡಿನ ತುಣುಕು
ಕಣ್ಣು ಕಿವಿ ಹೊಕ್ಕು
ಮಬ್ಬು ಮಾಡಿವೆಯೊ ಹೇಗೆ

ಅಹಹ ಚಳಿ ! ಕ್ಷಣ ಕ್ಷಣಕೂ
ಆವರಿಸುವ ದಟ್ಟ ಮಂಜು
ಮೊಬೈಲ್ ತರಂಗು ದಾಟಿಸದ ಮಂಜು
ಪಾಪ ಆತನದು ಬೆಂಗಳೂರಿನಲ್ಲಿ
ನಾಳೆಯೇ ಎಂಗೇಜ್‌ಮೆಂಟ್
ಒತ್ತಿ ಬರುತ್ತಿರುವ ಕಣ್ಣೀರು ಆಕೆಗೆ
ಅಪ್ಪ ಹೃದಯಾಘಾತಕ್ಕೊಳಗಾಗಿ
ಚೆನೈದ ಹಾಸ್ಪಿಟಲ್‌ದಲ್ಲಿ
ಆತ ನಿಂತಲ್ಲಿಯೇ ನಿಲ್ಲುತ್ತಿಲ್ಲ
ಬೊಂಬಾಯಿಯಿಂದ ಹೆಂಡತಿಯ ಡೆಲಿವರಿ ಸುದ್ಧಿ
ವಿದೇಶಿಗರ ಗೋಳಾಟವೋ
ಮಂಜಿನೊಳಗವಿತಿರುವ
ಆ ಪರಶಿವನಿಗೇ ಗೊತ್ತು

ದಿವಸಗಳು ಒಂದೆರಡು ಮೂರು
ಅಸ್ತವ್ಯಸ್ತ ಎಲ್ಲೆಲ್ಲೂ ಅಳುಮುಖ
ಮಂಜಿನಡಿ ದಿಲ್ಲಿ ರಾಜಕೀಯ
ಬೆಚ್ಚಗೆ ಮಲಗಿರಬೇಕು
ಕೆಂಡ ಕಾಯಿಸಿ ತಣ್ಣನೆಯ ಬೀರು ಹೀರಿದ್ದೆ ಮಜಾ
ಎಲ್ಲೆಲ್ಲಿಂದಲೋ ಬಂದ ಈ
ಹಕ್ಕಿ ಪಿಕ್ಕಿಗಳ ಪಾಡೇನು ಶಿವಾ ?
ಎಲ್ಲಿ ನಿನ್ನ ರವಿಕಿರಣಗಳ
ಬಾಣ ಬತ್ತಳಿಕೆ….
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...