Home / ಕವನ / ಕವಿತೆ / ಕಾಗೆಗೆ

ಕಾಗೆಗೆ

“ಕಾಗೆಯಂತೆಯೆ ಬಣ್ಣ ಆ ನರ ಪ್ರಾಣಿಗಹ!”
ಎನ್ನುವರು ಕರಿಯರನು ಜನರು ಕಂಡು
“ಆಹ! ಆಕೆಯ ಕೇಶ ಕಾಗೆಯೊಲೆ ಕಪ್ಪೆ”ಂದು
ಬಣ್ಣಿಸರು! ಜನರ ಮತಿಯೆಷ್ಟು ಮೊಂಡು!

ಅಹುದು! ದಿಟ! ನೀನೇನೊ ಕೊಂಚ ಕಪ್ಪಿರಬಹುದು!
‘ಅತಿಕಪ್ಪು’ ಎಂಬ ನುಡಿ ಸುಳ್ಳ ಸಂತೆ!
ನಿನ್ನ ಕಪ್ಪಿನ ಮೊಗಕೆ ಕಪ್ಪುಬಳಿಯುವ ಕಪ್ಪು
ಈ ಜಗದೊಳಿರಲು ನಿನಗೇಕೆ ಚಿಂತೆ?”

ನಿನ್ನದೇ ಠೀವಿಯೊಳು ಕೊರಳ ಬಿಳಿಗೆರೆಯ ನೀ
ಎಡೆಬಿಡದೆ ಕುಕ್ಕುತಿಹೆ ಕತವದೇನು?-
ಅದನು ಕೃಷ್ಣನು ಧರಿಪ ವೈಜಯಂತಿಗೆ ಜನರು
ಹೋಲಿಸರದೇಕೆಂಬ ಕೋಪವೇನು?

ನಿನ್ನ ರೂಪೊಳೆ ಬಂದು ಸತ್ತವರು ಪಿಂಡಗಳ
ಸ್ಪೀಕರಿಸುತಿರಲು ನಿನಗೇನು ಕೊರತೆ?
ನಿನ್ನ ನೋಡುತಲಿರಲು ಸ್ಫೂರ್ತಿಯುಕ್ಕುವುದಮಮ!
ಎಂದಿಗೂ ಬತ್ತದಲ ಭಾವದೊರತೆ!

ಮಾಂಸದೊಂದೇ ತುಂಡ ಕಂಡರೂ ನೀ ಕರೆದು
ನಿನ್ನ ಗೆಳೆಯರಿಗೆಲ್ಲ ಕೊಡುವೆ ಪಾಲು
ಕೂಲಿಗಳಿಗೀಯದೆಯೆ ಎಲ್ಲ ನುಂಗುತಲಿರುವ
ಕ್ಯಪಿಟಲಿಸ್ಟರಿಗಿಂತ ನೀನೆ ಮೇಲು!

ಸರ್ವಗುಣ ಪರಿಪೂರ್ಣನಾರಿಹನು ಧರೆಯೊಳಗೆ?
ಅದರಿಂದ ಸಹ್ಯವೆಲೆ ನಿನ್ನ ಕಂಠ
ಸರ್ವಗುಣಸಂಪನ್ನ ಏಕಗುಣಹೀನನಾ
ಟ್ರಾಜೆಡಿಯ ನಾಯಕನು ನಿನ್ನ ನಂಟ!

ಸವಿಗೊರಲು ನಿನಗಿಲ್ಲವಾದರೇಂ ವಾಯಸವೆ?
ನೀನೀವ ಕಾವಿಲ್ಲದಿರಲು ಪಿಕವು
ಮೊಟ್ಟೆ ಯೊಡೆದೀ ಜಗದಿ ಹಾಡಲೆಂದಿಗುಮರಿದು
ಕ್ಷಮ್ಯವದರಿಂ ನಿನ್ನಘೋರ ಸ್ವರವು!

“ಗುಣವಿಲ್ಲ ವಸ್ತುವೊಳೆ, ಕಾಂಬ ಹೃದಯದೊಳಿಹುದು”
ಎಂದು ಭಾರವಿ ಕವಿಯು ನುಡಿದನಂದೇ!–
ಎಷ್ಟು ದಿಟವೀ ಮಾತು? ಕವಿಧಾತ್ರಿ ನಿನಗೊಲಿದೆ
ಇಂತು ಸವಿಮಾತುಗಳ ಮುಡಿಪ ತಂದೆ!
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...