Home / ಕವನ / ಕವಿತೆ / ಜಾತೀಯತೆಯು

ಜಾತೀಯತೆಯು

ಸಾತ್ವಿಕರಾಜಸ ತಾಮಸಗುಣಗಳ ತಾತ್ವಿಕವಿಧಿಯಿಂಮಿಶ್ರಣ ಮಾಡುತೆ |
ಸಾತ್ವಿಕ ಬೊಮ್ಮನು ದೇಹಘಟಗಳ ನಿತ್ಯದಿ ನಿರ್ಮಿಪನೂ |
ಆತ್ಮನು ನೆಮ್ಮುದಿ ಪಡೆಯುತೆ ಘಟದೊಳು ವಾಸಿಸಿದೇಹಿಯುಎನಿಸುತ್ತೆ |
ಆತ್ಮನು ಕಾಯಕವೆಸಗಲು ಬರುವನು ಜಗದೊಳು ತಾನಂದೂ || ೧ ||

ಶ್ರಮವಿಭಾಗವ ಮಾಡಲು ಗುಣಗಳ ಹೊಂದಿಸಿ ಸಿರಿರಮಣಾ |
ಶ್ರಮದಿಂ ನಾಲ್ವರ್ಣಗಳನು ಪೇಳಿದ ಪಾಲಿಸೆ ಮಾನವರೂ |
ಶ್ರಮವರಿಯುತೆ ನರಕಾಯಕವೆಸಗಲು ನಿಪುಣತೆ ತಾಪಡೆದು |
ಶ್ರಮವೆನಿಸದೆ ತಾಬಾಳುವ ಜಗದೊಳು ಸಂತಸಪಡೆಯುತ್ತೆ || ೨ ||

ಜಾತಿಯಮೂಲವ ನರಿಯದೆ ಜನಗಳು ಸ್ವಾರ್ಥದಿರೇಗುತ್ತೆ |
ಕೋತಿಯಂದದಿ ಕುಣಿಯುತೆ ವಿಶ್ವದಶಾಂತಿಯ ಕದಡುವರೂ ||
ಜಾತಿಯಜಗಳದ ನಂಜಿನ ಬೀಜವನೂಳುತೆ ವಿಶ್ವದೊಳೂ |
ಕೋತಿಮನದ ಮುಂದಾಳ್ಗಳು ಸ್ವಾರ್ಥದಿ ಬೇಳೆಯ ಬೇಯ್ಸುವರು || ೩ ||

ತಿಳಿದುನೋಡೆ ಮಾನವ ಕುಲವೆಲ್ಲವು ಮನುವಿನ ಸಂತತಿಯೂ |
ಅಳಿದು ಪ್ರೇಮವ ತಮ್ಮೊಳು ಜಗಳವಹೂಡಿಹರೆಲ್ಲೆಲ್ಲೂ ||
ತಳೆದು ಪ್ರೇಮವ ನಡೆದೊಡೆ ಜನತೆಯು ನಲಿವುದು ಸಂತಸದಿ |
ತಿಳುವುಪುಟ್ಟೆ ಜನಮರೆವುದು ಜಾತಿಯ ಕಲಹವನೆಂದೆಂದೂ || ೪ ||

ತಂದೆ ತಾಯಿಗಳ ಜಾತಿಯು ಬಾರದುಮನುಜರನಿನೆಂದೆಂದೂ |
ಒಂದೆಕಾಯಕವ ಸಂತಸಮಾಡಲು ಜಾತಿಯ ಹೊಂದುವನೂ ||
ಹಿಂದೆ ಕೌಸಿಕನು ತಪವನುಗೈಯುತೆ ಪಾರ್‍ವನು ತಾನಾದ |
ನಿಂದ್ಯಕರ್ಮದಿಂ ಪುತ್ತಿನ ಕುವರನು ಬೇಡನು ತಾನಾದ || ೫ ||

ಆರ್ಯ ಜನಗಳೇ ಅಲೆಯುತೆ ವಿಶ್ವದಿ ಸಂಸ್ಕೃತಿ ಬೀರಿದರೂ |
ಬೇರೆಬೇರೆ ಋಷಿಶಿಷ್ಯರೆ ಆದರು ಜಾತಿಯ ಬಾಂಧವರು ||
ಸಾರಿ ಹೇಳುವೆನು ನಡದಿದೆ ಬೆರಿಕೆಯು ವಿಶ್ವದೊಳೆಂದೆಂದೂ
ದೂರುಮಾಡುತೆ ಜಾತಿಯ ಕುರುಡನು ಬಾಳ್ವುದು ಶಾಂತಿಯಲಿ || ೬ ||
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...