Home / ಕವನ / ಕವಿತೆ / ಜಾತೀಯತೆಯು

ಜಾತೀಯತೆಯು

ಸಾತ್ವಿಕರಾಜಸ ತಾಮಸಗುಣಗಳ ತಾತ್ವಿಕವಿಧಿಯಿಂಮಿಶ್ರಣ ಮಾಡುತೆ |
ಸಾತ್ವಿಕ ಬೊಮ್ಮನು ದೇಹಘಟಗಳ ನಿತ್ಯದಿ ನಿರ್ಮಿಪನೂ |
ಆತ್ಮನು ನೆಮ್ಮುದಿ ಪಡೆಯುತೆ ಘಟದೊಳು ವಾಸಿಸಿದೇಹಿಯುಎನಿಸುತ್ತೆ |
ಆತ್ಮನು ಕಾಯಕವೆಸಗಲು ಬರುವನು ಜಗದೊಳು ತಾನಂದೂ || ೧ ||

ಶ್ರಮವಿಭಾಗವ ಮಾಡಲು ಗುಣಗಳ ಹೊಂದಿಸಿ ಸಿರಿರಮಣಾ |
ಶ್ರಮದಿಂ ನಾಲ್ವರ್ಣಗಳನು ಪೇಳಿದ ಪಾಲಿಸೆ ಮಾನವರೂ |
ಶ್ರಮವರಿಯುತೆ ನರಕಾಯಕವೆಸಗಲು ನಿಪುಣತೆ ತಾಪಡೆದು |
ಶ್ರಮವೆನಿಸದೆ ತಾಬಾಳುವ ಜಗದೊಳು ಸಂತಸಪಡೆಯುತ್ತೆ || ೨ ||

ಜಾತಿಯಮೂಲವ ನರಿಯದೆ ಜನಗಳು ಸ್ವಾರ್ಥದಿರೇಗುತ್ತೆ |
ಕೋತಿಯಂದದಿ ಕುಣಿಯುತೆ ವಿಶ್ವದಶಾಂತಿಯ ಕದಡುವರೂ ||
ಜಾತಿಯಜಗಳದ ನಂಜಿನ ಬೀಜವನೂಳುತೆ ವಿಶ್ವದೊಳೂ |
ಕೋತಿಮನದ ಮುಂದಾಳ್ಗಳು ಸ್ವಾರ್ಥದಿ ಬೇಳೆಯ ಬೇಯ್ಸುವರು || ೩ ||

ತಿಳಿದುನೋಡೆ ಮಾನವ ಕುಲವೆಲ್ಲವು ಮನುವಿನ ಸಂತತಿಯೂ |
ಅಳಿದು ಪ್ರೇಮವ ತಮ್ಮೊಳು ಜಗಳವಹೂಡಿಹರೆಲ್ಲೆಲ್ಲೂ ||
ತಳೆದು ಪ್ರೇಮವ ನಡೆದೊಡೆ ಜನತೆಯು ನಲಿವುದು ಸಂತಸದಿ |
ತಿಳುವುಪುಟ್ಟೆ ಜನಮರೆವುದು ಜಾತಿಯ ಕಲಹವನೆಂದೆಂದೂ || ೪ ||

ತಂದೆ ತಾಯಿಗಳ ಜಾತಿಯು ಬಾರದುಮನುಜರನಿನೆಂದೆಂದೂ |
ಒಂದೆಕಾಯಕವ ಸಂತಸಮಾಡಲು ಜಾತಿಯ ಹೊಂದುವನೂ ||
ಹಿಂದೆ ಕೌಸಿಕನು ತಪವನುಗೈಯುತೆ ಪಾರ್‍ವನು ತಾನಾದ |
ನಿಂದ್ಯಕರ್ಮದಿಂ ಪುತ್ತಿನ ಕುವರನು ಬೇಡನು ತಾನಾದ || ೫ ||

ಆರ್ಯ ಜನಗಳೇ ಅಲೆಯುತೆ ವಿಶ್ವದಿ ಸಂಸ್ಕೃತಿ ಬೀರಿದರೂ |
ಬೇರೆಬೇರೆ ಋಷಿಶಿಷ್ಯರೆ ಆದರು ಜಾತಿಯ ಬಾಂಧವರು ||
ಸಾರಿ ಹೇಳುವೆನು ನಡದಿದೆ ಬೆರಿಕೆಯು ವಿಶ್ವದೊಳೆಂದೆಂದೂ
ದೂರುಮಾಡುತೆ ಜಾತಿಯ ಕುರುಡನು ಬಾಳ್ವುದು ಶಾಂತಿಯಲಿ || ೬ ||
*****

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...