Home / ಕವನ / ಕವಿತೆ / ಕಲಪುರಂಷನ ಕಂತೆಯು

ಕಲಪುರಂಷನ ಕಂತೆಯು

ಕಲಿಯ ಕಾಲದ ಕಂತೆಯ ಕೇಳಿರಿ ಕೂಡಿದ ಜನರೆಲ್ಲಾ |
ಕಲಿಯು ತನ್ನಯ ತಾಂಡವ ಪೂಡಿಹ ವಿಶ್ವದೊಳೆಲ್ಲೆಲ್ಲಾ || ೧ ||

ಹುಲಿಗೆಯಂಜದವ ನಿಲಿಗೆಯಂಜುವುದು ಪ್ಲೇಗದ ಭಯವಲ್ಲಾ |
ಸುಲಿಗೆಯೆಲ್ಲೆಡೆ ಹಬ್ಬಿದೆ ನರರೊಳು ವಿಶ್ವದೊಳೆಲ್ಲೆಲ್ಲಾ || ೨ ||

ರಾಷ್ಟ್ರ ರಾಷ್ಟ್ರದ ನಡುವೆ ಹೆಬ್ಬುತಿದೆ ಹಗೆತನವೆಲ್ಲೆಲ್ಲಾ
ರಾಷ್ಟ್ರನಾಯಕರು ಸ್ವಾರ್ಥದಿ ಶಾಂತಿಯ ಕದಡುವರೆಲ್ಲೆಲ್ಲಾ || ೩||

ವಿಶ್ವಪಿತನ ಪರಮಾತ್ಮನ ನಂಬುವ ಜನಗಳೆ ಉಳಿದಿಲ್ಲಾ |
ವಿಶ್ವಮೇಧದೊಳ್ಕಲೆಯುತೆ ರಕುತವ ಹರಿಸುವರೆಲ್ಲೆಲ್ಲಾ || ೪ ||

ತಂದೆತಾಯಿ ಗುರುಹಿರಿಯರ ಸ್ಮರಣೆಗೆ ಮನದೊಳಗಿಂಬಿಲ್ಲಾ
ಕಂಡಕಂಡಪೆಣ್ಣೊಳ್ಳುತೆ ಗೃಹಿಣಿಯ ಮಾಳ್ಪರು ಎಲ್ಲೆಲ್ಲಾ || ೫ ||

ಧರ್ಮಗುರುಗಳೇ ಧರ್ಮದ ಛದ್ಮದಿ ಸುಲಿಗೆ ಮಾಳ್ಪಬರಲ್ಲಾ
ಕರ್‍ಮಮಾಡದಲೆ ಫಲವ ಬೇಡಿಪಬಂಟರೆಯೆಲ್ಲೆಲ್ಲಾ || ೬||

ಕಪ್ಪು ಸಂತೆಯೆ ದುಡ್ಡನು ಗಳಿಸುವ ಮಾರ್ಗವೆನಿಪುದಲ್ಲಾ |
ಉಪ್ಪುವುಂಡವಗೆ ಮೋಸಗೊಳಿಪುದೆ ಜಾಣ್ಮೆಲಕ್ಕಣಲ್ಲಾ || ೭||

ದೇಶಭಕ್ತರ ಸೋಗಿಲಿ ಲಂಚವ ಪಡೆದರೆ ತಪ್ಪಲ್ಲಾ |
ದೇಶಶೀಳುತೆ ಜನಗಳ ಕೊಲ್ವುದೆ ಪರಮ ಧರ್ಮವಲ್ಲಾ || ೮ ||

ಬಿಳಿಯ ಟೊಪ್ಪಿಗೆ ವೇಷದಿ ಜನಗಳ ಸುಲಿದರೆ ತಪ್ಪಲ್ಲಾ |
ಸುಳಿಯನರಿಯುತೆ ಸುಳ್ಳನು ಪೇಳ್ವುದೆ ಲೋಕರೂಢಿಯಲ್ಲಾ || ೯ ||

ಕರ್ಮಯೋಗಿಯ ಗಾಂಧಿಯ ಕೊಲ್ವುದೆ ತೂರಲಕ್ಕಣಲ್ಲಾ |
ಮರ್ಮವಿದನು ನೀಂ ತಿಳಿದು ನಡೆದೊಡೆ ಕಲಿಯಭಯವೆಯಿಲ್ಲಾ || ೧೦ ||
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...