Home / ಕವನ / ಕವಿತೆ / ಕಲಪುರಂಷನ ಕಂತೆಯು

ಕಲಪುರಂಷನ ಕಂತೆಯು

ಕಲಿಯ ಕಾಲದ ಕಂತೆಯ ಕೇಳಿರಿ ಕೂಡಿದ ಜನರೆಲ್ಲಾ |
ಕಲಿಯು ತನ್ನಯ ತಾಂಡವ ಪೂಡಿಹ ವಿಶ್ವದೊಳೆಲ್ಲೆಲ್ಲಾ || ೧ ||

ಹುಲಿಗೆಯಂಜದವ ನಿಲಿಗೆಯಂಜುವುದು ಪ್ಲೇಗದ ಭಯವಲ್ಲಾ |
ಸುಲಿಗೆಯೆಲ್ಲೆಡೆ ಹಬ್ಬಿದೆ ನರರೊಳು ವಿಶ್ವದೊಳೆಲ್ಲೆಲ್ಲಾ || ೨ ||

ರಾಷ್ಟ್ರ ರಾಷ್ಟ್ರದ ನಡುವೆ ಹೆಬ್ಬುತಿದೆ ಹಗೆತನವೆಲ್ಲೆಲ್ಲಾ
ರಾಷ್ಟ್ರನಾಯಕರು ಸ್ವಾರ್ಥದಿ ಶಾಂತಿಯ ಕದಡುವರೆಲ್ಲೆಲ್ಲಾ || ೩||

ವಿಶ್ವಪಿತನ ಪರಮಾತ್ಮನ ನಂಬುವ ಜನಗಳೆ ಉಳಿದಿಲ್ಲಾ |
ವಿಶ್ವಮೇಧದೊಳ್ಕಲೆಯುತೆ ರಕುತವ ಹರಿಸುವರೆಲ್ಲೆಲ್ಲಾ || ೪ ||

ತಂದೆತಾಯಿ ಗುರುಹಿರಿಯರ ಸ್ಮರಣೆಗೆ ಮನದೊಳಗಿಂಬಿಲ್ಲಾ
ಕಂಡಕಂಡಪೆಣ್ಣೊಳ್ಳುತೆ ಗೃಹಿಣಿಯ ಮಾಳ್ಪರು ಎಲ್ಲೆಲ್ಲಾ || ೫ ||

ಧರ್ಮಗುರುಗಳೇ ಧರ್ಮದ ಛದ್ಮದಿ ಸುಲಿಗೆ ಮಾಳ್ಪಬರಲ್ಲಾ
ಕರ್‍ಮಮಾಡದಲೆ ಫಲವ ಬೇಡಿಪಬಂಟರೆಯೆಲ್ಲೆಲ್ಲಾ || ೬||

ಕಪ್ಪು ಸಂತೆಯೆ ದುಡ್ಡನು ಗಳಿಸುವ ಮಾರ್ಗವೆನಿಪುದಲ್ಲಾ |
ಉಪ್ಪುವುಂಡವಗೆ ಮೋಸಗೊಳಿಪುದೆ ಜಾಣ್ಮೆಲಕ್ಕಣಲ್ಲಾ || ೭||

ದೇಶಭಕ್ತರ ಸೋಗಿಲಿ ಲಂಚವ ಪಡೆದರೆ ತಪ್ಪಲ್ಲಾ |
ದೇಶಶೀಳುತೆ ಜನಗಳ ಕೊಲ್ವುದೆ ಪರಮ ಧರ್ಮವಲ್ಲಾ || ೮ ||

ಬಿಳಿಯ ಟೊಪ್ಪಿಗೆ ವೇಷದಿ ಜನಗಳ ಸುಲಿದರೆ ತಪ್ಪಲ್ಲಾ |
ಸುಳಿಯನರಿಯುತೆ ಸುಳ್ಳನು ಪೇಳ್ವುದೆ ಲೋಕರೂಢಿಯಲ್ಲಾ || ೯ ||

ಕರ್ಮಯೋಗಿಯ ಗಾಂಧಿಯ ಕೊಲ್ವುದೆ ತೂರಲಕ್ಕಣಲ್ಲಾ |
ಮರ್ಮವಿದನು ನೀಂ ತಿಳಿದು ನಡೆದೊಡೆ ಕಲಿಯಭಯವೆಯಿಲ್ಲಾ || ೧೦ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...