Home / ಕವನ / ಕವಿತೆ / ಅಶಾಂತ ಮನಸ್ಸುಗಳ ನಡುರಾತ್ರಿ

ಅಶಾಂತ ಮನಸ್ಸುಗಳ ನಡುರಾತ್ರಿ

ಈಗಷ್ಟೇ ನಡುರಾತ್ರಿ
ಬಿ.ಪಿ. ಸದ್ದುಗಳೆಲ್ಲ
ಒಂದೊಂದಾಗಿ ಅಡಗುತ್ತಿವೆ
ಬ್ರೇನ್ ಹೆಮರೇಜಕ್ಕೆ ಹತ್ತಿರವಿದ್ದ
ಉದ್ಯಮಿಗಳು ಇನ್ನೂ
ಲೆಕ್ಕಾಚಾರದಲ್ಲಿದ್ದಾರೆ

ಇರಲಿ ನಾಳಿನ ಜಗಳಕ್ಕೆಂದು
ಹೊಸಪದಗಳಿಗೆ ಹುಡುಕಾಡುವ
ಬುದ್ದಿ ಜೀವಿಗಳು ನೆತ್ತಿಯೊಳಗೆ ಕಣ್ಣಿಟ್ಟು
ಏನೋ ಸಾಧನೆಗೆ ಉರಿಯುತ್ತ
ಹೊರಳಾಡುತ್ತಿದ್ದಾರೆ.

ಜಾಗತೀಕರಣದ ನೆಪಮಾಡಿ
ಬೇಡವಾದುದೆಲ್ಲ ನಮ್ಮ ಅಂಗಳಕೆ
ಬಂದು ಬೀಳುತ್ತಿವೆಯಲ್ಲ ಎಂದೇ ಹೊರಗೆ
ಭಾಷಣ ಮಾಡಿದವರು
ರಾತ್ರಿ ಇನ್ನೂ ಇಸ್ತ್ರಿ ಮಾಡುತ್ತಿದ್ದಾರೆ

ಮೌಲ್ಯಗಳು ಗಾಳಿಗೆ ತೂರಿ
ಕನಸಿನಂಗಳಕೆ ಚಂದಿರನ ಕರೆದು ನಾಗಾಲೋಟದ ಕುದುರೆ ಏರಿ
ಇದ್ದುದೆಲ್ಲ ಇಲ್ಲದಂತೆ
ಇಲ್ಲದ್ದೆಲ್ಲ ಇದ್ದಂತೆ ಕಾಣುವ ಹದಿಹರೆಯದವರು
ಇನ್ನೂ ಕನವರಿಸುತ್ತಿದ್ದಾರೆ.

ವೇದಿಕೆಯ ಮೇಲೆ
ಮಹಿಳಾವಾದ ಸ್ವಾತಂತ್ರ್ಯ ಸಮಾನತೆ
ಭಾಷಣಮಾಡಿ ಏನೋ ಸಾಧಿಸಿದಂತೆ
ಮನೆಯವರೊಂದಿಗೆ ವಿರೋಧ
ಕಟ್ಟಿಕೊಂಡ ಆಕೆ
ನಾಳೆ ಕೋರ್ಟಿಗೆ
ಯಾವುದಕ್ಕೊ ಅರ್ಜಿಸಲ್ಲಿಸಲು
ಕಣ್ಣೀರು ಚೀರಾಟ ಭರಾಟೆಗಳಲಿ
ಏನೇನೋ ಗೀಚಾಡುತ್ತಿದ್ದಾಳೆ

ಬೆಳಗಾದರೆ ಮತ್ತೆಲ್ಲ
ರಾಕ್ಷಸೀ ಚಟುವಟಿಕೆಗಳು
ಬಿಸಿಲು ಉರಿಬಿಸಿಲು ಬಿಸುಲ್ಗುದುರೆಯ
ಧಗೆ ಇವರುಗಳ ಒಳಹೊರಗೆಲ್ಲ

ರಾತ್ರಿಯೇ ನಿನ್ನ ಕತ್ತಲೆಯ
ಕಪ್ಪು ಹರವು ತೆಕ್ಕೆಯೊಳಗೆ
ಇವರನ್ನೆಲ್ಲಾ ಎಳೆದು ತಬ್ಬಿ
ಸುಮ್ಮನೆ ಮಲಗಿ ಬಿಡಬಾರದೆ
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...