Home / ಕವನ / ಕವಿತೆ / ಜೋಕುಮಾರ

ಜೋಕುಮಾರ

ಜೋಕುಮಾರ ಹುಟ್ಟಲಿ ಲೋಕವು ಬೆಳೆಯಲಿ
ಆಕಳ ಹಾಲ ಕರೆಯಲಿ| ಹರಿಯಾಗ
ಕಾತೆದ್ದು ಮಸರ ಕಡೆಯಾಲಿ ೧

ಅಡ್ಡಡ್ಡ ಮಳೆಬಡದ, ದೊಡ್ಡ ದೊಡ್ಡ ಕೆರೆ ತುಂಬಿ
ಗುಡ್ಡಗಳೆಲ್ಲ ಹೈನಾಗಿ || ಜೋ || ಗೌಡಽರ
ಸೆಡ್ಡಿಯ ಮ್ಯಾಲೆ ಸಿರಿಬಂದ || ಜೋ || ೨

ಹಾಸ್ಹ್ಯಾಸಿ ಮಳೆಬಡದ, ಬೀಸ್ಬೀಸಿ ಕೆರೆತುಂಬಿ
ಬಾಸಿಂಗದಂಥ ತೆನೆಬಾಗಿ || ಜೋ || ಗೌಡಽರ
ರಾಸಿಯ ಮ್ಯಾಲೆ ಸಿರಿಬಂದ || ಜೋ || ೩

ಕರುಣುಳ್ಳ ಕುಮರಾನ, ಕೆರೆ ನೋಡ ಹೋದಾನ
ಕರದು ಕಾರ್ಗಾಲ ಮಳೆ ಬಂತ || ಜೋ || ಗೌಡಽರು
ಕರೆದು ಹಚ್ಚಡ ಹೊಚ್ಚ್ಯಾರ || ಜೋ || ೪

ಕೆಂಚ ನಮ್ಮ ಕುಮಾರ, ಬೆಂಚೀಯ ನೋಡ ಹೋದ
ಮಿಂಚಾವ ಕಾರ ಮಳೆಬಂದ || ಜೋ || ಗೌಡಽರು
ಕೆಂಪು ಹಚ್ಚಡ ಹೊಚ್ಚ್ಯಾರ || ಜೋ || ೫

ಹುಟ್ಟಿದೇಳು ದಿವಸದಲಿ, ಪಟ್ಟಣವ ತಿರುಗ್ಯಾನ
ದಿಟ್ಣಾದೇವಿ ನಿನ ಮಗನ || ಜೋ || ಕೋಮರಾಗ
ಕೊಟ್ರವ್ವೇಳು ದಿನಗಳ || ಜೋ || ೬

ವುಂಡಿಯ ವಲ್ಲೆ ನಂಜು, ಕೊಂಡು ತಾನುಣಲಿಲ್ಲ
ದಂಡನಾಳವನ ಬಂಕ್ಯಾಗ || ಜೋ || ನಮದೇವಿ
ಹೊಂಬಳಿ ಸರವ ಬಗೆಸಿದಳ || ಜೋ || ೭

ಚಕ್ಕೋಟಿ ರಸಪಲ್ಲೆ, ಇಕ್ಕೊಂಡು ಉಣಲಿಲ್ಲ
ದಿಕ್ಕನಾಳವನ ಬಂಕ್ಯಾಗ || ಜೋ || ನಮದೇವಿ
ಚೊಕ್ಕ ಮುತ್ತಿನ ಸರಬರೆಸಿ || ಜೋ || ೮

ಅರಕೊಂಬ ಅರಿಷಿಣವ, ದರಬಟ್ಲ ಒಳ್ಳೆಣ್ಣೆ
ನರ ನಮ ದೇವಿ ಕುಲಿ ಹೊಕ್ಕ || ಜೋ || ಎರಕೊಂಡ
ತೆರೆಬಂದು ನೀರು ಬಾಗಿಲಕ || ಜೋ || ೯

ಬಾಲ ಹುಟ್ಟಿದನಂತ, ಬನಕ ತೊಟ್ಟಿಲ ಕಟ್ಟಿ,
ಬಾಲಗನ್ನೆರು ನೆರೆಯುತಲಿ | ಜೋ || ಹಾಡಿದರ
ಕೋಲೆನು ಜನಕ ಜಯಜಯವ || ಜೋ || ೧೦

ಕಬ್ಬುಳ್ಳ ತ್ವಾಟ್ದಾಗ ಇಬ್ಬನ್ನಿ ಹಿರದ್ಹಂಗ
ಇಬ್ಬರು ತೂಗಲು ಮಲಗನ || ಜೋ || ನಮದೇವಿ
ಹೆಬ್ಬುಲಿ ಮಗನ ಹಡೆದಾಳ || ಜೋ || ೧೧

ಹಾರೂರ ಕೇರ್ಯಾಗ, ಹಾರಿ ಚಂಡಾಡ್ಯಾನ
ನಾರಿ ನಿನಮಗ ಕೊಮರಯ್ಯ || ಜೋ || ಚೆಂಡಾಡಿ
ಊರ ಭೂಮೆಲ್ಲ ಬೆಳಿಬಂದ || ಜೋ || ೧೨

ಒಕ್ಕಽಲಗೇರ್ಯಾಗ, ಹೊಕ್ಕ ಚೆಂಡಾಡ್ಯಾನ
ಅಕ್ಕನ ಮಗನವ ಕೊಮರಯ್ಯ || ಜೋ || ಆಡಿದರ
ಅಕ್ಕಿ ನಾಡೆಲ್ಲ ಬೆಳಿಬಂದ || ಜೋ || ೧೩

ಹಾಲ್ಬೇಡಿ ಹಲುಬ್ಯಾನ ಕೆನೆಬೇಡಿ ಕುಣಿದಾನ
ಮೊಸರಬೇಡಿ ಕೆಸರ ತುಳಿದಾನ || ಜೋ || ಕೊಮರಾಮ
ಕುಸುರಾದ ಗೆಜ್ಜೆ ಕೆಸರಾಗಿ || ಜೋ || ೧೪

ಸಂದಿಯಾ ಮನೆಯನ್ನ ಗೋಂದಿಯಾ ಮನೆಯನ್ನ
ಗೊಂಜಾಳದನ್ನ ಕೆಸರನ್ನ || ಜೋ || ನಮಕೊಮರ
ಸಂದೀಯ ಹೊಕ್ಕ ನಡುಗೇರಿ || ಜೋ || ೧೫

ಹಾದಿಽಯ ಮನೆಯನ್ನ ಬೀದಿಽಯ ಮನೆಯನ್ನ
ಬಾಜರದನ್ನ ಮೊಸರನ್ನ || ಜೋ || ಕೋಮರಯ್ಯ
ಗೌಳೇರೋಣಿ ಹೊಕ್ಕಾನ || ಜೋ || ೧೬

ಹಳ್ಳಕ ತಾ ಹೋಗಿ ಸಣ್ಣವ್ನ ಇಟ್ಟಾನ
ಕನ್ನುಡಿ ತಗೆದು ಮೊಕನೊಡೊ || ಜೋ || ಕೋಮರಾಮ
ಕಣ್ಣು ಮೂಗಿಲೆ ಕರಚಲುವ || ಜೋ || ೧೭

ಅಳಕೂತ ಬಳಕೂತ, ಬಂದಾಳ ಗುಳಕವ್ವ
ಬಂದು ನಿಂತಾಳ ಅಗಸ್ಯಾಗ || ಜೋ || ಗೌಡಽರು
ತಂದು ಇಳಿಸ್ಯಾರ ಸೆಳಿಮಂಚ || ಜೋ || ೧೮

ಕೊಮಾರ ತಾ ಬರ್ತಾನಂತ, ಕೋಣೀಯ ಸಾರಿಸಿ
ಜಣ ಒಕ್ಕಲಗಿತ್ತಿ ಚದರಿಽಯ || ಜೋ || ಮನಿಯಾಗ
ಒಂದಾರ ಜಾವ ಇರಲಿಲ್ಲ || ಜೋ || ೧೯

ಹೋಗೂತ ಹೊನ್ನೀ ಮುರಿದ, ಬರೂತ ಬನ್ನೀ ಮುರಿದ
ಕಂಡಕಂಡಲ್ಲಿ ಕರಿಬೇವ || ಜೋ || ಮುಡುವಂತ
ಪುಂಡನ್ನ ದೇವಿ ಹಡೆದಾಳ || ಜೋ || ೨೦

ಅಕ್ಕ ಹಡೆದಾಳಂತ, ಏನೊಯ್ದೆ ಬನವಯ್ಯ
ಮುತ್ತಿನ ಚೆಂಡ ಕಾರ್ಮುಗಿಲ || ಜೋ || ಸುರಿಮಳೆಯ
ಅರತಿಲಿ ಒಯ್ದೆ ಹರಳೆಲೆಯ || ಜೋ || ೨೧

ಬೆಣ್ಣಿಽಯ ತಾ ಮುದ್ದಿ, ಕನ್ಯುಳ್ಳ ಕೊಮರಾಗ
ಹೊನ್ನ ಮಾಳಿಗೆ ಮನೆಯವ್ವ || ಜೋ || ಕೆನೆ ಮೊಸರ
ಬಿನ್ನಾಯ ಹೇಳ ಕೊಮರಾಗ || ಜೋ || ೨೨

ಹಾಲ ತಾ ಮಗಿತುಂಬಿ, ಬಾಲ ನಮ್ಮ ಕುವರಾಗ
ಮೇಲ ಮಾಳಿಗೆ ಮನೆಯವ್ವ || ಜೋ || ನೀ ಕೊಟ್ರ
ಮೇಲಾಗಿ ಬೆಳಿಲಿ ನಿಂಭೂಮಿ || ಜೋ || ೨೩

ಅಳೂತಲಿ ಸಿರಿತಾನು, ಬಳಲುತಲಿ ಬಂದಾಳು
ಅಳಕಾದಂಬಲಿ ತಡೆದಾವು || ಜೋ || ನಮಕೊಮರ
ಕಳೆದೇಳು ದಿನಕ ಮರಣವ್ವ || ಜೊ || ೨೪

ಹುಟ್ಟಿದ ಏಳ್ದಿನಕ, ಪಟ್ಟಣವ ತಿರುಗ್ಯಾನ
ದಿಟ್ಣಾದೇವಿ ನಿನ ಮಗ || ಜೋ || ಕೊಮರಾಗ
ಬರೆದಾಳ ಸೆಟವಿ ಏಳ್ದಿನ || ಜೋ || ೨೫

ಪುಂಡಽನ ಪುಂಡಾಟ್ಕ, ಹಿಂಡ ಮಂದಿ ಕೂಡ್ಯಾರ
ಕಂಡಲಿ ಕಲ್ಲೀಗೆ ಬಡಿದಾರ || ಜೋ || ರಾತ್ರ್ಯಾಗ
ಅಗಸರ ಕಲ್ಲಾಗ ತುರಿಕ್ಯಾರ || ಜೋ || ೨೬

ಜಂಗಮ ನಾನಲ್ಲ, ಜೋಗಯ್ಯ ನಾನಲ್ಲ
ತಿಂಗಳಿಗೆ ಬರುವ ತಿರುಕಲ್ಲ || ಜೋ || ತಾಯವ್ವ
ತುಂಬಿ ಮೊರ ಜೋಳ ನೀಡವ್ವ || ಜೋ || ೨೭

ಕಲ್ಗಳಿಗಿ ಕಬ್ಬಿಣದ, ಮೆಟ್ಟ್ಹಚ್ಚಿ ಏರ್ಯಾಳ
ಬಳಕೂತ ಬಳತವ ತಗೆದಾಳ || ಜೋ || ಒಕ್ಕಲಗಿತ್ತಿ
ಬಿಳಿ ಎಳ್ಳ ತುಂಬಿ ನೀಡಾಳ || ಜೋ || ೨೮

ಜಯ ಜಯ ಕೊಮರಾಗ, ಜಯ ಜಯ ಹಾಡಿಽರೆ
ಜಯ ಜಯ ಭೂಮಿ ಬೆಳಸಿಽಗೆ ||ಜೋ|| ಹಡದವ್ವ
ಜಯ ಜಯವಿರಲಿ ಜಗದಾಗ ||ಜೋ || ೨೯
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...