Home / ಕವನ / ಕವಿತೆ / ಮಾರ್ಸೆಲದಲ್ಲಿಯ ನಾಃತರದಾಮ್‌

ಮಾರ್ಸೆಲದಲ್ಲಿಯ ನಾಃತರದಾಮ್‌

ನಿನ್ನ ನದಿಗಳ ಹೆಸರು ನನಗೆ ಗೊತ್ತಿಲ್ಲ, ಓ ಫ್ರಾನ್ಸ್‌!
ಆದರೆ ಇಂಥ ಚಲುವಿನ ಹೊನಲೇ ಹರಿದಿಹುದು ನನ್ನ ನಾಡಿನಲ್ಲಿ.
ನಿನ್ನ ವನ-ವೃಕ್ಷಗಳ ಹೂ-ಬಳ್ಳಿಗಳ ಪ್ರೀತಿಯನು ಗಳಿಸಿಲ್ಲ ಓ ಫ್ರಾನ್ಸ್‌!
ಇವನೆಲ್ಲ ನೋಡಿ ನಾನೊಸೆದ ತರುಲತೆಗಳ ನೆನಪಾಗುವದು ಮಾತ್ರ.
ಚೆಲುವಿಹುದನಂತ,- ಕಿಡಿಯನು ತಿಳಿದವಗಿಡಿ ಬೆಂಕಿಯ ಮೂಲ ಗೊತ್ತು.

ಅದರೂ ನಿನ್ನ ಚೆಲುವಿಗೆ ಮನಸೊತು ಮುಗ್ಧನಾದೆ!
ಅದಕಿದೆ ಸ್ವಾತಂತ್ರ್ಯದ ಕಾಂತಿ, ಸ್ವಾನುಭೂತಿಯ ಸ್ವಚ್ಛಂದ,
ಆನಂದದ ಲಹರಿಲಹರಿ! ಮಾಟದ ವಿಡಾಯ!
ಪ್ರಕೃತಿಯಾಳವನರಿತಿದೆ ನಿನ್ನಲ್ಲಿಯ ಕಲೆ,-
ಕಲೆಯ ನೆಲೆಯನ್ನರಿತಿದೆ ನಿನ್ನಲ್ಲಿಯ ಪ್ರಕೃತಿ!
ನಿನ್ನ ಬಸಿರಲ್ಲಿ ಬಂದ ಸುಂದರಿಯರು,
ನಿನ್ನಡಿಯಲ್ಲಿ ನಿಂತ ಉನ್ನತ ಕ್ರಿಸ್ತಾಲಯಗಳು,
ನಿನ್ನ ನಂದನವನಗಳಲಿ ಪುಟಿಯುತಿಹ ಕಾರಂಜಿ,-
ಇದರ ಫೋಟೊಗ್ರಾಫಿಯಿದೆ ಮೈಸೂರಲ್ಲಿ,-
ಜೀವಕಳೆಯಿದೆಯಿಲ್ಲಿ,-ನಿನ್ನುಸಿರಿನಲ್ಲಿ!

ಮಾರ್ಸೆಲದಲ್ಲಿಳಿದು ನಿನ್ನ ವೈಭವವ ನೋಡಿ ಬೆರಗುಬಟ್ಟೆ;
ನಿನ್ನೋಣಿಗಳಲ್ಲಿ ತಿರುಗಾಡಿದೆ, ಕಾವಣಗಳಲ್ಲಿ ತರೆದೂಗಿದೆ;
ನಗೆಮೊಗದ ನನ್ನಿಗರೊಡನೆ ಮಾತಾಡಿದೆ; ಸಮಾಧಾನವಿರಲಿಲ್ಲ.
ಪರಂತಂತ್ರ ಭಾರತೀಯನ ಗಂಟಲಿಗೆ ಗಾಳವಿದೆಲ್ಲ ಸಿರಿ.
ನಿನ್ನ `ನಾ:ತರ್‌ದಾಮ’ವು ಮಾತ್ರ ದಿವ್ಯಧಾಮವಾಯ್ತು!
ನೆಲ ನೀರುಗಳಂಚಿನ ಮೇಲೆ ನೆಲೆಸಿದ
ಉನ್ನತೋನ್ನತ ಕಿಸ್ತಾಲಯತೆ ಕಳಸವನಿಟ್ಟು
ಕೈಯಲೆತ್ತಿ ಕ್ರಿಸ್ತನನ್ನು
ಶಾಂತಗ೦ಭೀರವಾಗಿ ನಿಂತಿಹಳು ಮಾತಾಯಿ:
ಆ ದೇವಮಾತೆಯ ಪಡಿಯಚ್ಚಿದೆ
ನಿನ್ನ ಹೆಣ್ಣಿನ ಮೋರೆಯ ಮೇಲೆ, ಓ! ಫ್ರಾನ್ಸ್‌!
ನೀನೇಯೇನು ಆ ಮಾತಾಯಿ?
ರಕ್ಷಿಸಲಣಿಗರನ್ನು, ಸುವ್ವಿಗೆಯ್ಯಲೆಂದತಿಥಿಗಳನ್ನು,-
ನಿಂತೆಯೇನು ನೀನಲ್ಲ?

ಬೆಟ್ಟವನೊ೦ದರಳಿಸಿ ದೇವಮಾತೆಗೆ,-ನಿನ್ನ ದೇಹವು ಪಾವನವಾಯ್ತು,
ತಲೆಯೆತ್ತಿ ನೋಡಿದೆನು ಬಣ್ಣಬಣ್ಣದ ಗುಮ್ಮಟಗಳನ್ನು;
ನುಡಿದದ್ದನ್ನೆ ನುಡಿದು ಮುಗಿಲ ಕಿವಿಗೆ ಮಟ್ಟಿಸುವ ಮಾಡಗಳನ್ನು;
ಮಳೆಬಿಲ್ಲು ಗಾಜಿನಲ್ಲಿ ಮೋಜುಮೋಜಿನ ರೂಹುವೆತ್ತ ಚಿತ್ರಗಳನ್ನು;
ಶಿಲುಬೆಗೇರಿಸಿದ ಕ್ರಿಸ್ತಮೂರ್ತಿಯ;-
ತನೂರುಹುಗಳ ತೆರೆದು ನಿಂತ ದೇವದೂತರ,-
ನೋಡಿ ಬಿಲ್ಲುಂಬೆರಗದೆನಾಗ.
ಕ್ರಿಸ್ತನನೆತ್ತಿಕೊಂಡು ನಿಂತ ಮೇರಿ! ಮಾತಾಯಿ!
ನಿನ್ನನೋಡಿದೊಡನುಕ್ಕಿ ಬ೦ತು ನನ್ನ ಹೃದಯ
ಏಕಾಕಿಯಾದ ನಾನು ದರದೇಶಿಯಂತೆ ಶರಣು ಬರಲು
ತೆಗೆದಪ್ಪಿಕೊಂಡೆ ನನ್ನನು, ಆಶೀರ್ವದಿಸಿದೆ; ಕರುಣಿಸಿದೆ; ವರವನಿತ್ತೆ.
ನಿನ್ನ ನೆನಿಸಲು ಎದೆಯುಕ್ಕುವದು,-ನಿನ್ನಡಿಗಿದ್ದ ಸಮುದ್ರದಂತೆ!
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...