Home / ಕವನ / ಕವಿತೆ / ಮಾರ್ಸೆಲದಲ್ಲಿಯ ನಾಃತರದಾಮ್‌

ಮಾರ್ಸೆಲದಲ್ಲಿಯ ನಾಃತರದಾಮ್‌

ನಿನ್ನ ನದಿಗಳ ಹೆಸರು ನನಗೆ ಗೊತ್ತಿಲ್ಲ, ಓ ಫ್ರಾನ್ಸ್‌!
ಆದರೆ ಇಂಥ ಚಲುವಿನ ಹೊನಲೇ ಹರಿದಿಹುದು ನನ್ನ ನಾಡಿನಲ್ಲಿ.
ನಿನ್ನ ವನ-ವೃಕ್ಷಗಳ ಹೂ-ಬಳ್ಳಿಗಳ ಪ್ರೀತಿಯನು ಗಳಿಸಿಲ್ಲ ಓ ಫ್ರಾನ್ಸ್‌!
ಇವನೆಲ್ಲ ನೋಡಿ ನಾನೊಸೆದ ತರುಲತೆಗಳ ನೆನಪಾಗುವದು ಮಾತ್ರ.
ಚೆಲುವಿಹುದನಂತ,- ಕಿಡಿಯನು ತಿಳಿದವಗಿಡಿ ಬೆಂಕಿಯ ಮೂಲ ಗೊತ್ತು.

ಅದರೂ ನಿನ್ನ ಚೆಲುವಿಗೆ ಮನಸೊತು ಮುಗ್ಧನಾದೆ!
ಅದಕಿದೆ ಸ್ವಾತಂತ್ರ್ಯದ ಕಾಂತಿ, ಸ್ವಾನುಭೂತಿಯ ಸ್ವಚ್ಛಂದ,
ಆನಂದದ ಲಹರಿಲಹರಿ! ಮಾಟದ ವಿಡಾಯ!
ಪ್ರಕೃತಿಯಾಳವನರಿತಿದೆ ನಿನ್ನಲ್ಲಿಯ ಕಲೆ,-
ಕಲೆಯ ನೆಲೆಯನ್ನರಿತಿದೆ ನಿನ್ನಲ್ಲಿಯ ಪ್ರಕೃತಿ!
ನಿನ್ನ ಬಸಿರಲ್ಲಿ ಬಂದ ಸುಂದರಿಯರು,
ನಿನ್ನಡಿಯಲ್ಲಿ ನಿಂತ ಉನ್ನತ ಕ್ರಿಸ್ತಾಲಯಗಳು,
ನಿನ್ನ ನಂದನವನಗಳಲಿ ಪುಟಿಯುತಿಹ ಕಾರಂಜಿ,-
ಇದರ ಫೋಟೊಗ್ರಾಫಿಯಿದೆ ಮೈಸೂರಲ್ಲಿ,-
ಜೀವಕಳೆಯಿದೆಯಿಲ್ಲಿ,-ನಿನ್ನುಸಿರಿನಲ್ಲಿ!

ಮಾರ್ಸೆಲದಲ್ಲಿಳಿದು ನಿನ್ನ ವೈಭವವ ನೋಡಿ ಬೆರಗುಬಟ್ಟೆ;
ನಿನ್ನೋಣಿಗಳಲ್ಲಿ ತಿರುಗಾಡಿದೆ, ಕಾವಣಗಳಲ್ಲಿ ತರೆದೂಗಿದೆ;
ನಗೆಮೊಗದ ನನ್ನಿಗರೊಡನೆ ಮಾತಾಡಿದೆ; ಸಮಾಧಾನವಿರಲಿಲ್ಲ.
ಪರಂತಂತ್ರ ಭಾರತೀಯನ ಗಂಟಲಿಗೆ ಗಾಳವಿದೆಲ್ಲ ಸಿರಿ.
ನಿನ್ನ `ನಾ:ತರ್‌ದಾಮ’ವು ಮಾತ್ರ ದಿವ್ಯಧಾಮವಾಯ್ತು!
ನೆಲ ನೀರುಗಳಂಚಿನ ಮೇಲೆ ನೆಲೆಸಿದ
ಉನ್ನತೋನ್ನತ ಕಿಸ್ತಾಲಯತೆ ಕಳಸವನಿಟ್ಟು
ಕೈಯಲೆತ್ತಿ ಕ್ರಿಸ್ತನನ್ನು
ಶಾಂತಗ೦ಭೀರವಾಗಿ ನಿಂತಿಹಳು ಮಾತಾಯಿ:
ಆ ದೇವಮಾತೆಯ ಪಡಿಯಚ್ಚಿದೆ
ನಿನ್ನ ಹೆಣ್ಣಿನ ಮೋರೆಯ ಮೇಲೆ, ಓ! ಫ್ರಾನ್ಸ್‌!
ನೀನೇಯೇನು ಆ ಮಾತಾಯಿ?
ರಕ್ಷಿಸಲಣಿಗರನ್ನು, ಸುವ್ವಿಗೆಯ್ಯಲೆಂದತಿಥಿಗಳನ್ನು,-
ನಿಂತೆಯೇನು ನೀನಲ್ಲ?

ಬೆಟ್ಟವನೊ೦ದರಳಿಸಿ ದೇವಮಾತೆಗೆ,-ನಿನ್ನ ದೇಹವು ಪಾವನವಾಯ್ತು,
ತಲೆಯೆತ್ತಿ ನೋಡಿದೆನು ಬಣ್ಣಬಣ್ಣದ ಗುಮ್ಮಟಗಳನ್ನು;
ನುಡಿದದ್ದನ್ನೆ ನುಡಿದು ಮುಗಿಲ ಕಿವಿಗೆ ಮಟ್ಟಿಸುವ ಮಾಡಗಳನ್ನು;
ಮಳೆಬಿಲ್ಲು ಗಾಜಿನಲ್ಲಿ ಮೋಜುಮೋಜಿನ ರೂಹುವೆತ್ತ ಚಿತ್ರಗಳನ್ನು;
ಶಿಲುಬೆಗೇರಿಸಿದ ಕ್ರಿಸ್ತಮೂರ್ತಿಯ;-
ತನೂರುಹುಗಳ ತೆರೆದು ನಿಂತ ದೇವದೂತರ,-
ನೋಡಿ ಬಿಲ್ಲುಂಬೆರಗದೆನಾಗ.
ಕ್ರಿಸ್ತನನೆತ್ತಿಕೊಂಡು ನಿಂತ ಮೇರಿ! ಮಾತಾಯಿ!
ನಿನ್ನನೋಡಿದೊಡನುಕ್ಕಿ ಬ೦ತು ನನ್ನ ಹೃದಯ
ಏಕಾಕಿಯಾದ ನಾನು ದರದೇಶಿಯಂತೆ ಶರಣು ಬರಲು
ತೆಗೆದಪ್ಪಿಕೊಂಡೆ ನನ್ನನು, ಆಶೀರ್ವದಿಸಿದೆ; ಕರುಣಿಸಿದೆ; ವರವನಿತ್ತೆ.
ನಿನ್ನ ನೆನಿಸಲು ಎದೆಯುಕ್ಕುವದು,-ನಿನ್ನಡಿಗಿದ್ದ ಸಮುದ್ರದಂತೆ!
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...