Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶನಿವಾರ, ೧೧ ಜುಲೈ, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶನಿವಾರ, ೧೧ ಜುಲೈ, ೧೯೪೨

ಪ್ರೀತಿಯ ಕಿಟಿ,

ಡ್ಯಾಡಿ, ಮಮ್ಮಿ ಮತ್ತು ಮಾರ್‍ಗೊಟ್ ಪ್ರತಿ ಕಾಲುಗಂಟೆಗೊಮ್ಮೆ ಸಮಯ ತಿಳಿಸಲು ಸದ್ದು ಮಾಡುವ ವೆಸ್ಟರ್‌ಟೋರೆನ್ ಗಡಿಯಾರದ ಸದ್ದನ್ನು ಸಹಿಸುತ್ತಿರಲಿಲ್ಲ. ಆದರೆ ನನಗೆ ಅದು ಮೊದಲಿನಿಂದಲೂ ಬಹಳ ಇಷ್ಟ. ಅದರಲ್ಲೂ ರಾತ್ರಿ ಹೊತ್ತು ನಂಬಿಗಸ್ಥ ಗೆಳೆಯನಂತೆ. ನೀನು ಕೂಡಾ ಆ ಸದ್ದು ಕೇಳಲು ಬಯಸುವಿ ಎಂದೇ ನನಗನ್ನಿಸುತ್ತದೆ. ಅಂದರೆ ಆ ಕ್ಷಣ ಎಲ್ಲ ಮರೆತುಬಿಡುವುದು. ಒಳ್ಳೆಯದು. ನನಗೆ ನಾನ್ಯಾರೆಂದೇ ಸರಿಯಾಗಿ ತಿಳಿದಿಲ್ಲ. ಈ ಕಟ್ಟಡವೂ ನನಗೆ ಮನೆಯಲ್ಲಿದ್ದ ಭಾವನೆಯನ್ನು ತಂದಿದೆ ಎಂದು ನನಗನ್ನಿಸುತ್ತಿಲ್ಲ. ಆದರೆ ಇದರರ್ಥ ನಾನು ಇಲ್ಲಿರಲು ಇಷ್ಟಪಡುತ್ತಿಲ್ಲವೆಂದಲ್ಲ. ಇದು ನನಗೆ ಹೊರ ವಸತಿಗೃಹಗಳಲ್ಲಿ ರಜಾದಿನಗಳನ್ನು ಕಳೆದಂತಿದೆ, ನನ್ನದು ಬಹುಶಃ ಹುಚ್ಚು ಯೋಚನೆ. ಆದರೆ ಇದು ನನಗೆ ಹಾಗೆ ಅನ್ನಿಸುತ್ತಿದೆ. ಗುಪ್ತ ಗೃಹವು ಪ್ರಶಸ್ತ ಅಡಗು ತಾಣ. ಒಂದು ಕಡೆ ಬಾಗಿ ಒರಗಿದಂತಿದ್ದ ಇದು ಹೊರಗಿಂದ ಮುಚ್ಚಿದಂತೆ ಗೋಚರಿಸುತ್ತಿತ್ತು. ಇಂತಹ ಸೂಕ್ತ ಅಡಗು ಜಾಗ ನಿಮಗೆ ಅಮ್ಸ್ಟರಡ್ಯಾಮ್ ಮಾತ್ರವಲ್ಲ ಇಡೀ ಹಾಲಂಡ್‌ನಲ್ಲಿ ಇನ್ನೆಲ್ಲಿಯೂ ಸಿಗದು. ನಮ್ಮ ಚಿಕ್ಕದಾದ ಕೋಣೆ ಮೊದಲಿಗೆ ತೀರಾ ಖಾಲಿಖಾಲಿ ಕಾಣುತ್ತಿತ್ತು. ಆದರೆ ಡ್ಯಾಡಿಗೆ ನಾನು ಥ್ಯಾಂಕ್ಸ್ ಹೇಳಲೇಬೇಕು. ಡ್ಯಾಡಿ ನನ್ನ ನೆಚ್ಚಿನ ಫಿಲ್ಮಸ್ಟಾರ ಸಂಗ್ರಹಗಳನ್ನು, ಪೋಸ್ಟಕಾರ್ಡ ಚಿತ್ರಗಳನ್ನು, ಮತ್ತು ಬ್ರಷ್ ಮತ್ತು ಅಂಟಿಸುವ ಬಣ್ಣದ ಮೂಲಕ ನಾನು ಗೋಡೆಯನ್ನು ದೊಡ್ಡ ಚಿತ್ರಗಳಿಂದ ಅಲಂಕರಿಸಿದೆ. ಇದು ಕೋಣೆಯನ್ನು ಹೆಚ್ಚು ಆಹ್ಲಾದಕರವಾಗಿಸುತ್ತದೆ. ವ್ಯಾನ್ಡ್ಯಾನ್ ಬಂದಾಗ ನಾವು ಅಟ್ಟದಿಂದ ಕೆಲವು ಕಟ್ಟಿಗೆಯನ್ನು ತೆಗೆದುಕೊಳ್ಳಬೇಕು. ಮತ್ತು ಅದರಿಂದ ಕೆಲವು ಸಣ್ಣ ಗೋಡೆ ಕಪಾಟುಗಳನ್ನು ತಯಾರಿಸಿ ಬೇಡದ ವಸ್ತುಗಳನ್ನೆಲ್ಲಾ ಸರಿಹೊಂದಿಸಿ ಕೋಣೆಯನ್ನು ಸುಂದರವಾಗಿಸುವುದು.

ಮಾರ್‍ಗೊಟ್ ಮತ್ತು ಮಮ್ಮಿ ಈಗ ಸ್ವಲ್ಪ ಸುಧಾರಿಸಿಕೊಂಡಿದ್ದಾರೆ. ನಿನ್ನೆಯಿಂದ ಇದು ಮೊದಲ ಬಾರಿ ಮಮ್ಮಿ ಸ್ವಲ್ಪ ಸಾರನ್ನಾದರೂ ಮಾಡುವಷ್ಟು ಚೇತರಿಸಿಕೊಂಡಿದ್ದಾರೆ. ಆದರೆ ಕೆಳ ಮೆಟ್ಟಿಲಲ್ಲಿ ಯಾರೊಂದಿಗೋ ಮಾತನಾಡುತ್ತ ಎಲ್ಲವನ್ನೂ ಮರೆತಳು. ಹಾಗಾಗಿ ಬೇಯಲಿಟ್ಟ ಬಟಾಣಿಗಳು ಕರಟಿದ್ದು, ಪಾತ್ರೆಯ ಬುಡಕ್ಕೆ ಬಿಡದಂತೆ ಅಂಟಿಕೊಂಡಿದ್ದವು. ಕೂಫಸ್ ನನಗೆ “Young People’s Annual” ಎಂಬ ಪುಸ್ತಕ ತಂದಿದ್ದಾರೆ. ನಾವು ನಾಲ್ವರೂ ನಿನ್ನೆ ಸಂಜೆ ಪ್ರೈವೇಟ್ ಕಛೇರಿಗೆ ಹೋಗಿ ರೇಡಿಯೋ ಆಲಿಸಿದೆವು. ಅದನ್ನು ಯಾರಾದರೂ ಕೇಳಿಯಾರೆಂಬ ಕಾರಣಕ್ಕೆ ನಾನು ಬಹಳ ಹೆದರಿದ್ದೆ. ಅದಕ್ಕಾಗಿ ನಾನು ಡ್ಯಾಡಿಯಲ್ಲಿ ನನ್ನೊಂದಿಗೆ ಮೇಲ್ಮಡಿಗೆ ಬರುವಂತೆ ಕಾಡಿದೆ. ಮಮ್ಮಿಗೆ ನನ್ನ ಸ್ವಭಾವ ತಿಳಿದಿದೆ. ಹಾಗಾಗಿ ಆಕೆಯೂ ಬಂದಳು. ಇನ್ನೊಂದು ರೀತಿಯಲ್ಲಿ ನಮ್ಮ ನೆರೆಯವರೆಲ್ಲಾದರೂ ನಮ್ಮನ್ನು ಕೇಳಿಸಿಕೊಂಡಿರಬಹುದು. ಇಲ್ಲ ಏನನ್ನಾದರೂ ನೋಡಿರಬಹುದು ಎಂಬ ಸಂಗತಿಗಳಿಂದ ನಾವು ಬಹಳ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇವೆ. ಮೊದಲ ದಿನ ಕಿಟಕಿ ಬಾಗಿಲ ಪರದೆಗಳನ್ನು ನೇರಗೊಳಿಸಿದೆವು. ಅವುಗಳನ್ನು ಸುಮ್ಮನೇ ಕರ್ಟನ್ನಗಳೆಂದು ಕರೆಯಬಹುದಷ್ಟೇ. ಕಸುಬುದಾರರಲ್ಲದ ಡ್ಯಾಡಿ ಮತ್ತು ನನ್ನ ಕೈ ಹೊಲಿಗೆಯಲ್ಲಿ ಹೇಗೆ ಬೇಕೋ ಹಾಗೆ ಹೊಲಿದ ಅವು ಒಂದೇ ನಮೂನೆಯಲ್ಲಿಲ್ಲದ ಭಿನ್ನ ಆಕಾರ, ಗುಣಮಟ್ಟದ ಸವೆದ ಬಳಸಿದ ಬಟ್ಟೆಗಳಾಗಿದ್ದವು. ಇವೆಲ್ಲ ಕಲೆಯ ಕೆಲಸಗಳು. ಒತ್ತು ಸೂಜಿಗಳ ಮೂಲಕ ನಾವು ಆ ಸ್ಥಳ ಬಿಡುವವರೆಗೂ ಕೆಳಗೆ ಬೀಳದಂತೆ ಗಟ್ಟಿಯಾಗಿ ತಮ್ಮ ಸ್ಥಾನದಲ್ಲೆ ಇರುವಂತೆ ಕಟ್ಟಿದ್ದೆವು.

ನಮ್ಮ ವಾಸದ ಬಲಬದಿಗೆ ದೊಡ್ಡ ವ್ಯವಹಾರ ಪ್ರಾಂಗಣಗಳಿವೆ. ಎಡಕ್ಕೆ ಪೀಠೋಪಕರಣದ ಕಾರ್ಖಾನೆ ಇದೆ. ಕೆಲಸ ವೇಳೆಯ ನಂತರ ಅಲ್ಲಿ ಯಾರೂ ಇರುವುದಿಲ್ಲ. ಆದರೂ ಅಲ್ಲಿಯ ಸದ್ದು ಗೋಡೆಯ ಮೂಲಕ ಚಲಿಸುತ್ತಲೇ ಇರಬಲ್ಲದು. ಮಾರ್‍ಗೊಟ್‌ಳಿಗೆ ರಾತ್ರಿ ಹೊತ್ತು ಕೆಮ್ಮಬಾರದೆಂದು ಖಡಾಖಂಡಿತವಾಗಿ ಹೇಳಲಾಗಿದೆ. ಆಕೆಗೆ ಅತಿಯಾದ ಶೀತವಿದ್ದರೂ ಆಕೆ ಕೋಡೈನ್ ಮಾತ್ರೆ ಹೆಚ್ಚಿಗೆ ಸೇವಿಸುವಂತೆ ಮಾಡುತ್ತೇವೆ. ನಾನು ಮಂಗಳವಾರಕ್ಕಾಗಿ ಕಾಯುತ್ತಿದ್ದೇನೆ. ಅದು ವ್ಯಾನ್ಡ್ಯಾನ್ ಬರುತ್ತಾರೆ ಎಂಬುದಕ್ಕೆ, ಅವರು ಬಂದರೆ ಬಹಳ ತಮಾಷೆ ಹಾಗು ಅಂತಹ ನಿಶ್ಯಬ್ದವಿರುವುದಿಲ್ಲ. ಈ ನೀರವತೆ ನನಗೆ ರಾತ್ರಿ ಮತ್ತು ಸಂಜೆಯ ಸಮಯದಲ್ಲಿ ಭಯ ಹುಟ್ಟಿಸುತ್ತದೆ.

ನಮ್ಮನ್ನು ರಕ್ಷಿಸುವ ಜವಾಬ್ದಾರಿ ಹೊತ್ತವರಲ್ಲಿ ಒಬ್ಬರಾದರೂ ಇಲ್ಲಿಯೇ ರಾತ್ರಿ ಹೊತ್ತು ಮಲಗುವುದಾದರೆ ಚೆನ್ನಾಗಿತ್ತೆಂದು ನಾನು ಬಯಸುತ್ತೇನೆ. ಹೊರಹೋಗಲಾಗದ ಈ ಸಂಕಟವನ್ನು ವ್ಯಕ್ತಗೊಳಿಸಲು ನನ್ನಿಂದ ಸಾಧ್ಯವಿಲ್ಲ. ಅಲ್ಲದೇ ನಾವೆಲ್ಲಾದರೂ ಗುರುತಿಸಲ್ಪಟ್ಟು ಗುಂಡಿಗೆ ಬಲಿಯಾಗುವಂತಾದರೆ ಎಂಬುದು ನನ್ನ ಹೆದರಿಕೆ. ಇದು ಒಳ್ಳೆಯ ಮುಂದಾಲೋಚನೆಯಲ್ಲ. ದಿನದ ಸಮಯದಲ್ಲಿ ನಾವು ಸಣ್ಣದನಿಯಲ್ಲಿಯೇ ಮಾತನಾಡಬೇಕಿತ್ತು. ಮತ್ತು ಇಲ್ಲದಿದ್ದಲ್ಲಿ ಉಗ್ರಾಣದಲ್ಲಿ ಕೆಲಸ ಮಾಡುವವರು ನಮ್ಮನ್ನು ಕೇಳಿಸಿಕೊಳ್ಳುವ ಸಂಭವವಿತ್ತು.

ನನ್ನನ್ಯಾರೋ ಕರೆಯುತ್ತಿದ್ದಾರೆ.

ನಿನ್ನ
ಆನ್.
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...