Home / ಲೇಖನ / ಇತರೆ / ಬಾಳಿನಲ್ಲಿ ಶೃದ್ಧೆ

ಬಾಳಿನಲ್ಲಿ ಶೃದ್ಧೆ

ಜೀವನದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಿಷ್ಠೆ ಮತ್ತು ಶೃದ್ಧೆ ಇರಬೇಕು. ಶೃದ್ಧೆ ಇಲ್ಲದ ಕಾರ್ಯ ಎಂದಿಗೂ ಸುಗಮವಾಗದೆ ಕೆಡುತ್ತದೆ. ಅಂತಲೇ ನಾವು ಮಾಡುವ ಕಾಯಕದ ಮೇಲೆ ಮನಸಿಟ್ಟು ಮಾಡಬೇಕು. ಆದರೆ ಮನುಷ್ಯ ತಾನು ಮಾಡುತ್ತಿರುವ ಕಾರ್ಯದಲ್ಲಿ ತನುವು ತೊಡಗಿಸಿಕೊಂಡರೂ ಅವನ ಮನಸ್ಸು ಇನ್ನಾವುದೋ ವಿಚಾರದಲ್ಲಿ ತಲ್ಲೀನವಾಗುತ್ತದೆ. ಹೀಗೆ ಮಾಡುವುದರಿಂದ ಅವನೆಂದೂ ಜೀವನದಲ್ಲಿ ಸಾರ್ಥಕವಾದ ಕಾರ್ಯ ಮಾಡಲಾರನು.

ಈಗ ಅನೇಕ ಸಲ ಕಚೇರಿಯಲ್ಲಿ ನಾವು ನೋಡುತ್ತೇವೆ. ಕಾರ್ಯ ನಿರ್ವಹಿಸುವ ಆ ಕಚೇರಿಯ ಸಿಬ್ಬಂದಿ ವರ್ಗದವರು ಕಾರ್ಯ ಮಾಡುತ್ತಿರುವಾಗಲೇ ಇನ್ನಾವುದೋ ಮಾತುಗಳಲ್ಲಿ, ವಿಷಯಗಳಲ್ಲಿ ತೇಲಾಡುತ್ತಾರೆ. ಹೀಗಾಗುವುದರಿಂದ ಲೆಕ್ಕ ತಪ್ಪಾಗಬಹುದು. ಅವಘಡಕ್ಕೆ ಕಾರಣವಾಗಬಹುದು. ಬ್ಯಾಂಕಿನಲ್ಲಿ ನಗದು ಗುಮಾಸ್ತ ತನ್ನ ಗ್ರಾಹಕರಿಗೆ ನೀಡುವ ಪ್ರತಿಯೊಂದು ಚೆಕ್ಕಿನ ಬಗ್ಗೆಯೂ ಲೆಕ್ಕವಿರಬೇಕು. ತುಸು ಅಲಕ್ಷ್ಯವಾದರೂ ಕೈಯಿಂದ ಕಾಸು ಕಳೆದುಕೊಳ್ಳಬೇಕಾಗುತ್ತದೆ.

ಮನೆಯಲ್ಲಿ ನಾರಿಯರು ಮನೆಗೆಲಸಗಳನ್ನು ಮಾಡುವಾಗ ಯಾವ ಕಾರ್ಯ ಮಾಡುತ್ತಿರುತ್ತಾರೋ ಅದರಲ್ಲಿಯೇ ಅವರ ಮನಸ್ಸಿರಬೇಕು. ಅಡುಗೆ ಮಾಡುವಾಗ ಬಟ್ಟೆ ಒಗೆಯುವ ಬಗ್ಗೆ, ಬಟ್ಟೆ ತೊಳೆಯುವಾಗ ಪಾತ್ರೆ ಸ್ವಚ್ಛಗೊಳಿಸುವ ಬಗ್ಗೆ ಚಿಂತನೆ ಮಾಡಿದರೆ ಈಗಿರುವ ಕೆಲಸ ಮತ್ತು ಮಾಡಬೇಕಾದ ಕೆಲಸಗಳೂ ಹಾಳಾಗುತ್ತವೆ.

ನಮ್ಮ ಶೃದ್ಧೆ ಕೇವಲ ಕಾರ್ಯದ ಮೇಲೆ ಮಾತ್ರ ಇರದೆ ಹಿರಿಯರ ಮಾತುಗಳನ್ನು ಸಹ ನಾವು ಶೃದ್ಧೆಯಿಂದ ಕೇಳಿ ನಿರ್ವಹಿಸವಬೇಕು. ಅವರು ಹೇಳುವ ಕಾಟಾಚಾರಕ್ಕೆ ಕಾರ್ಯ ನಿರ್ವಹಿಸಿದರೆ ಅವರಿಗೂ ಖುಷಿ ಕೊಡುವುದಿಲ್ಲ. ಮತ್ತು ಕಾರ್ಯವೂ ಶಿಸ್ತಾಗುವುದಿಲ್ಲ.

ಶ್ರೀ ರಾಮಕೃಷ್ಣ ಪರಮಹಂಸರು ಒಂದು ಪುಟ್ಟ ಕಥೆ ಹೇಳುತಿದ್ದರು. ಓರ್ವ ಪ್ರಯಾಣಿಕ ದಾರಿಯಲ್ಲಿ ನಡೆದು ನದಿ ತೀರಕ್ಕೆ ಬಂದಿದ್ದ. ನದಿ ದಾಟಿ ಆಚೆಗೆ ಹೋಗುವ ಪಸ್ರಂಗ, ನದಿಯಲ್ಲಿ ತುಂಬ ಜಾಸ್ತಿ ನೀರಿತ್ತು. ಹಿಂತಿರುಗಿ ಹೋಗಲು ಕತ್ತಲಾಗುತಿತ್ತು. ಏನೂ ತೋಚದೆ ನಿಂತಿರಲು ಅಲ್ಲೋರ್ವ ಸಾಧು ಈ ಪ್ರಯಾಣಿಕನ ಹೊಯ್ದಾಟ ಕಂಡು ಹತ್ತಿರಕ್ಕೆ ಕರೆದು ಒಂದು ಎಲೆಯ ಮೇಲೆ ಏನೋ ಬರೆದು ಈ ಪ್ರಯಾಣಿಕನ ಕೈಗಿತ್ತು. ‘ಹೋಗು ನೀನು ಈ ನೀರಿನ ಮೇಲಿಂದ ನಡೆದುಕೊಂಡು ಹೋಗಬಹುದು’ ಎಂದರು. ಪ್ರಯಾಣಿಕನು ಸಂತಸಗೊಂಡು ಸಾಧುವಿಗೆ ಅಭಿನಂದನೆ ಹೇಳಿ ಅದನ್ನು ಪಡೆದು ನೀರ ಮೇಲೆ ಪಾದವಿಟ್ಟನು. ಪ್ರಯಾಣಿಕ ಮುಳುಗದೆ ನೀರಿನ ಮೇಲೆ ನಡೆಯತೊಡಗಿದ. ಕೊನೆಗೆ ಆಶ್ಚರ್ಯಚಕಿತನಾಗಿ ನೀರಿನ ಮೇಲಿದ್ದ ಎಲೆಯಲ್ಲಿ ಏನಿದೆಯೋ? ಎಂದು ಬಿಡಿಸಿ ನೋಡಿದಾಗ ಅದರ ಮೇಲೆ “ಶ್ರೀರಾಮ” ಬರೆದಿತ್ತು. ಅಯ್ಯೋ ಇಷ್ಟೆನಾ! ಎಂದಾಗ ಪ್ರಯಾಣಿಕನ ಶೃದ್ಧೆ ಕರಗಿತ್ತು. ಹಾಗೆ ಅವನು ನೀರಿನಲ್ಲಿ ಮುಳುಗಿದ. ಅಂತಲೇ ಶೃದ್ಧೆಯೇ ಸಾರ್ಥಕ ಬದುಕಿನ ಮೆಟ್ಟಿಲಾಗಬೇಕು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...