Home / ಲೇಖನ / ಇತರೆ / ಪಂಚಮ ವೇದಗಳು

ಪಂಚಮ ವೇದಗಳು

ಭವ್ಯ ಭಾರತದ ರಾಷ್ಟ್ರ ಪತಿಗಳೂ ಮಕ್ಕಳ ಪ್ರೇಮಿ ಭಾರತದ ಕನಸುಗಾರ ಸರ್ವ ಜನಾಂಗದ ನೊಬೆಲ್ ಮ್ಯಾನ್ ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ ೮೩ನೆಯ ವಯಸ್ಸಿನಲ್ಲಿ ತೀರಿಕೊಂಡರು. ತೀರಿಕೊಳ್ಳಬಾರದಿತ್ತು!

ಅವರು ಸಾಹಿತ್ಯ ಪ್ರೇಮಿಯಾಗಿದ್ದರು. ಹಲವಾರು ಕೃತಿಗಳನ್ನು ರಚಿಸಿರುವರು. ಇವರ ಬಹುಮುಖ್ಯವಾದ ಐದು ಕೃತಿಗಳನ್ನು ಪಂಚಮವೇದವೆಂದು ಕರೆಯಬಹುದು.

ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಈ ಐದು ಕೃತಿಗಳನ್ನಾದರೂ ಓದಲೇಬೇಕು.

ಅವುಗಳನ್ನು ನಾವು ಪಂಚಮ ವೇದಗಳೆಂದು ಕರೆಯಬಹುದು. ಅದರಲ್ಲಿ ಪಂಚಶೀಲತತ್ವಗಳಿವೆ. ಏನೆಲ್ಲ ಇದೆಯೆಂಬುದನ್ನು ನಮ್ಮ ಭಾರತೀಯರೆಲ್ಲ ಹೆಮ್ಮೆ ಪಡಬೇಕಾಗಿದೆ.

೧. ವಿಂಗ್ಸ್ ಆಫ್ ಫೈರ್- ಇದೊಂದು ಆತ್ಮಕಥೆ. ಹುಟ್ಟಿನಿಂದ ತಮ್ಮಳ್ಳಿಯಿಂದ ದಿಲ್ಲಿಯತನಕ ೧೯೯೨ರ ತನಕದ ಕಥೆ ಸಾಗುತ್ತದೆ. ಒಬ್ಬ ಬಡ ಹುಡುಗ ಪೇಪರ್ ಹಾಕುವ ಹುಡುಗ ರಾಷ್ಟ್ರಪತಿಯಾಗುವ ತನಕ ಬೆಳೆಯಬಹುದು, ಅದಕ್ಕೆ ಬೇಕಾಗಿರುವುದು ಪರಿಶ್ರಮ, ಸಂಶೋಧನಾ ರಂಗದಲ್ಲಿ ತಮ್ಮೊಂದಿಗೆ ಕೈಜೋಡಿಸಿದ ಹಲವು ಮಹನಿಯರನ್ನು ಪರಿಚಯಿಸುತ್ತಲೇ ವಿಕ್ರಮ್ ಸಾರಾಬಾಯ್, ಡಾ|| ಬ್ರಹ್ಮಪ್ರಕಾಶ್ ಅವರನ್ನು ಸ್ಮರಿಸುವರು.

೨. ಎರಡನೆಯ ವೇದ ಸಮಾನವಾದ ಕೃತಿ. ಟರ್ನಿಂಗ್ ಪಾಯಿಂಟ್ ಆಗಿದ್ದು, ೧೯೯೨ ರಿಂದ ಮುಂದುವರೆದ ಕಥೆಯಾಗಿದೆ. ಇದು ವಿಂಗ್ಸ್ ಆಫ್ ಫೈರ್ ಕೃತಿಯ ಮುಂದಿನ ಭಾಗವು. ವಿಷನ್ ೨೦೨೦ ಗೆ ಮುನ್ನುಡಿಯಾಗಿದೆ.

೩. ಇಂಡಿಯಾ ೨೦೨೦. ಭವ್ಯ ಭಾರತವು ಇಡೀ ವಿಶ್ವದಲ್ಲೇ ಬೃಹತ್ ರಾಷ್ಟ್ರವಾಗಿ ನಾಲ್ಕನೆಯ ಮುಂದುವರೆದ ಆದರ್ಶ ರಾಷ್ಟ್ರವಾಗುವುದೆಂದು ಭವಿಷ್ಯ ನುಡಿದಿರುವರು. ನಮ್ಮ ದೇಶ ಹಸಿರುಕ್ರಾಂತಿ, ಬಾಹ್ಯಾಕಾಶ ಸಂಶೋಧನೆಯಿಂದಲೇ ಪ್ರಬಲ ರಾಷ್ಟ್ರವಾಗಲು ಸಾಧ್ಯವೆಂದು ಅಂಕಿ ಅಂಶಗಳ ಒದಗಿಸಿರುವರು.

೪. ನಾಲ್ಕನೆಯ ವೇದವಾಗಿ ಇವರ ಇಗ್ನೈಟೆಡ್ ಮೈಂಡ್ ಕೃತಿ ನಮ್ಮೆದುರಿಗೆ ಎದ್ದು ನಿಲ್ಲುವುದು. ಮಕ್ಕಳೊಂದಿಗೆ ಇವರೂ ಮಕ್ಕಳಾಗಿ ಕಾಲ ಕಳೆದ ರಸ ಘಳಿಗೆಗಳನ್ನು ಬಲು ರಸವತ್ತಾಗಿ ದಾಖಲಿಸಿರುವರು. ಬಲು ದೊಡ್ಡದಾಗಿ ಕನಸು ಕಾಣಬೇಕು. ಬಹು ದೊಡ್ಡದಾಗಿ ಯೋಚಿಸಬೇಕೆಂದೂ ಇಗೋ+ಸ್ಪಿರಿಟ್ ಭ್ರೂಣಗಳ ಸಂವಾದವು ಮುಂದಾಲೋಚನೆಗೆ ಉತ್ತಮ ಸಂವಾದವಾಗಿದೆ. ಈ ಕೃತಿ ೨೦೦೨ ರಲ್ಲಿ ಹೊರ ಬಂದಿದೆ. ಜಗತ್ತಿಗೆ ಸುಪರಿಚಿತವಾಗಿದೆ.

೫. ಪಂಚಮ ವೇದವಾಗಿ ಇನ್‌ಡಾಮಿಟೇಬಲ್ ಸ್ಪಿರಿಟ್- ಈ ಕೃತಿ ಭವ್ಯ ಭಾರತದ ಆದರ್ಶಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಅಪ್ಪಟ ವೀರ ಸನ್ಯಾಸಿಯಾಗಿ ಆದರ್ಶ ಬ್ರಹ್ಮಚಾರಿಯಾಗಿ ಭಾರತೀಯ ನಾರಿಮಣಿಯರನ್ನು ದೇವತೆಗಳೆಂದು ಹೃದಯ ತುಂಬಿ ಒಪ್ಪಿ ಅಪ್ಪಿ ಹಾಡಿ ಹೊಗಳಿರುವರು. ಇದು ಇವರ ಹೃದಯ ಶ್ರೀಮಂತಿಕೆಯನ್ನು ಸಾರುವುದು.

ಈ ಎಲ್ಲ ಕೃತಿಗಳು ನೊಬೆಲ್ ಬಹುಮಾನ ಕೃತಿಗಳಿಗೂ ಮಿಗಿಲು. ಯಾಕೋ ಇವರಿಗೆ ಸಲ್ಲಬೇಕಾದ ಕೀರ್ತಿ ಲಭಿಸಲಿಲ್ಲವೆಂದು ನನ್ನ ಭಾವನೆ.

ಇವಲ್ಲದೆ ಇನ್ನು ಮಹತ್ತರ ಕೃತಿಗಳನ್ನು ರಚಿಸಿರುವರು. ಇವರ ಕುರಿತು ರಚಿತವಾದ ಕೃತಿಗಳು ನೂರಾರು. ಎಲ್ಲ ಭಾಷೆಗಳಲ್ಲಿ ಬಂದಿವೆ. ಅವರಿನ್ನೂ ಜೀವಂತವಿರುವರು.

ಈಗ ಅವರ ಕೃತಿಗಳು ಮಾತನಾಡುತ್ತಿವೆ. ಜೀವನವೆಂದರೆ ಇದಲ್ಲವೇ? ಪಂಚಮವೇದವಲ್ಲವೇ??
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...