Home / ಲೇಖನ / ಇತರೆ / ಮೂರು ಕತೆ

ಮೂರು ಕತೆ

ಒಮ್ಮೆ- ರಮಣಮಹರ್ಷಿಗಳು ತಮ್ಮ ಶಿಷ್ಯರಿಗೆ ಉಪದೇಶ ನೀಡುತ್ತಿದ್ದರು. ಉಪದೇಶದ ಮಧ್ಯೆ ಒಂದು ಪ್ರಶ್ನೆ ಎತ್ತಿದರು. ‘ಜೀವನದಲ್ಲಿ ಮೂರು ಸೂತ್ರಗಳ್ಯಾವುವು?’ ಎಂದು ಅಲ್ಲಿದ್ದ ಶಿಷ್ಯರೆಲ್ಲರನ್ನೂ ಕೇಳುತ್ತಾ ಹೋದರು.

ಮೊತ್ತ ಮೊದಲು ಮರುಳ ಸಿದ್ದಯ್ಯ ಸ್ವಾಮಿಗಳದ್ದು- ಸ್ವಾಮಿಗಳ ಜೀವನದಲ್ಲಿ ಮಾತು, ಮಾನ, ಮರ್‍ಯಾದೆ ಎಂಬ ಮೂರು ಮುತ್ತುಗಳು ಒಡೆದು ಹೋಗದಂತೆ ಬಲು ಎಚ್ಚರಿಕೆಯಿಂದ ಬದುಕಬೇಕು…’ ಎಂದ.

“ಜೀವನದಲ್ಲಿ ನಾಲಿಗೆ-ಕಚ್ಛೆ-ಪಂಚೆ ಈ ಮೂರು ಜಾರದಂತೆ ಎಚ್ಚರಿಕೆ ವಹಿಸಬೇಕು. ಈ ಮೂರು ಒಮ್ಮೆ ಜಾರಿದರೆ ಇನ್ನೂ ಫಲವಿಲ್ಲ ಸ್ವಾಮಿಗಳೆ…” ಎಂದ ಮೃತ್ಯುಂಜಯ.

ಅಲ್ಲಿದ್ದ ಸೀನ್ಯ ಎದ್ದು ನಿಂತು ‘ಬಾಲ್ಯ, ಪ್ರೌಢ, ಯೌವ್ವನ ಈ ಮೂರು ಹಂತಗಳು ಹಾಳಾಗದಂತೆ ಬಲು ಎಚ್ಚರಿಕೆಯಿಂದ ಜೋಪಾನ ಮಾಡತಕ್ಕದ್ದು’ ಎಂದ.

ಗೌಡಪ್ಪನ ಸರದಿ ಬಂತು “ಸ್ವಾಮಿ… ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಆಡಬೇಡ, ಕೆಟ್ಟದ್ದನ್ನು ಕೇಳಬೇಡ ಎಂಬ ಮೂರು ಸೂತ್ರ ಪಾಲಿಸಿದರೆ ಯಾವುದೇ ಭಯವಿಲ್ಲ” ಎಂದ.

ವಲಿಯ ಎದ್ದು ನಿಂತ ‘ಸ್ವಾಮಿ… ಬ್ರಹ್ಮ ವಿಷ್ಣು ಮಹೇಶ್ವರರ ನಿತ್ಯ ಮರೆಯಬಾರದು ಅವರೇ ಜೀವನ ಆಧಾರವೆಂದ.’

ಎಲಿವಾಳ ಅವರು ಎದ್ದು ನಿಂತು – ‘ಗುರುಗಳೆ ಜೀವನದಲ್ಲಿ ನಾನು ಎಂಬುದ ಬಿಡಬೇಕು. ನಾವು ಎಂಬುದ ಹಿಡಿಬೇಕು. ಇನ್ನೊಬ್ಬರ ಬಗ್ಗೆ ಅಸಹ್ಯ ಪಡುವುದ ಬಿಡಬೇಕು’ ಎಂದ.

ರಮಣ ಮಹರ್ಷಿಗಳು ಕ್ಷಣ ಮೌನ ವಹಿಸಿ- ‘ಶಿಷ್ಯರೆ… ಮಾನವ ಜನ್ಮ ದೊಡ್ಡದು. ಅದನ್ನು ಸಾರ್ಥಕ ಮಾಡಿಕೊಳ್ಳಬೇಕೆಂದರೆ…. ಮೊದಲು ಸರಳ ಜೀವನ ನಡೆಸುವುದನ್ನು ರೂಢಿಸಿಕೊಳ್ಳಬೇಕು. ಎರಡನೆಯದಾಗಿ ಮೌನವೇ ಆಭರಣ ಎಂಬುದನ್ನು ಪಾಲಿಸಬೇಕು. ದೇವರಿಗೆ ಸದಾ ಶರಣಾಗುವುದು. ಈ ಮೂರು ಸೂತ್ರದಲ್ಲಿ ಏನೆಲ್ಲ ಅಡಗಿದೆ. ಈ ಮೂರು ತತ್ವಗಳ ಪಾಲಿಸುವುದು ಕಡು ಕಷ್ಟ. ಈ ಮೂರು ಸೂತ್ರ ಪಾಲಿಸಿದರೆ ೧೪ ಲೋಕಂಗಳ ಗೆಲ್ಲಬಹುದು…’ ಎಂದರು.

ಶಿಷ್ಯರೆಲ್ಲ.. ಗುರುಗಳಿಗೆ ಅಡ್ಡ ಬಿದ್ದರು. ಮಹರ್ಷಿಗಳು ಹರ್ಷದಿ ಆಶೀರ್‍ವಾದಿಸಿದರು.

ಅಲ್ಲಿಗೆ ಅಂದಿನ ಉಪದೇಶಾಮೃತ ಮುಕ್ತಾಯಗೊಂಡಿತು. ಗುರುಗಳು ಧ್ಯಾನಸಕ್ತರಾದರು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...