Home / ಕವನ / ಕವಿತೆ / ಪುಣ್ಯ ಭೂಮಿಯ ಮೇಲೆ

ಪುಣ್ಯ ಭೂಮಿಯ ಮೇಲೆ

ಒಂದರ ಹಿಂದೊಂದು ಸರಣಿ ಸ್ಫೋಟ
ಜನಸಂದಣಿ, ಸಂತೆ, ಆಸ್ಪತ್ರೆಗಳಲ್ಲಿ
ಉಗ್ರನೊ, ವ್ಯಾಗ್ರನೊ ಕಾಣದ ಕೈ
ಅನ್ಯ ಧರ್ಮ ಸಹಿಸದ ಸಿನಿಕ
ದ್ವೇಷ ರಾಜಕೀಯದ ಕೈಗೊಂಬೆ
ಕೊಲ್ಲುತ್ತ ಅಮಾಯಕರ
ನೆರೆಮನೆಗೆ ಬೆಂಕಿಯಿಡುವವನ
ಮನೆ ಹೇಗೆ ತಾನೆ ಸುರಕ್ಷಿತ?
ಆ ಮನೆಯ ಬೆಂಕಿ ತಗುಲಿದಾಗ
ಉಳಿಸಲು ಯಾರೂ ಉಳಿಯುವರು
ಈ ಪುಣ್ಯ ಭೂಮಿಯ ಮೇಲೆ.

ಓಟು ಸಿಕ್ಕಾವು ಅವರಿಗಿಷ್ಟು ಇವರಿಗಿಷ್ಟು.
ಭೂತ ಪ್ರೇತಗಳದೇ ಸಾಮ್ರಾಜ್ಯವಿಲ್ಲಿ
ಆಸ್ಪತ್ರೆಯಲಿ ಅರೆಬೆಂದ ಶವಯಾತ್ರೆ
ಮುಗಿಲು ಮುಟ್ಟಿದೆ ಆಕ್ರಂದನ
ಎಲ್ಲಿ ಹುಡುಕಲಿ ನಾನು ಮಾನವನ?
ಮನುಕುಲದ ಶತ್ರು ನೀನು.

ನೆಮ್ಮದಿಯ ಸಾವು ನಿನಗೂ ದಕ್ಕದು
ರಾಜಕೀಯದ ಬೆಂಕಿಯಿದೆ ಅಲ್ಲಿ
ನಾಳೆ ಇಲ್ಲಿಯೂ ತಗಲುತ್ತದೆ
ಸುಂದರ ಕನಸುಗಳ ಭಸ್ಮ ಹೊತ್ತು
ಸುಭದ್ರ ತಾಣ ಎಲ್ಲಿ ಹುಡುಕುವೆ?
ಧರೆಯೇ ಹತ್ತಿ ಉರಿಯುತ್ತಿರುವಾಗ
ಬದುಕು ಎಲ್ಲಿ ಅರಸುವೆ?

ಜೀವ ಹೆಕ್ಕುವ ರಕ್ಕಸ
ಸ್ವಲ್ಪ ಸ್ವಲ್ಪವೇ ಸಾಯುವಾಗ
ಮನುಷ್ಯ ಮುಗುಳ್ನಗುತ್ತಾನೆ
ಭೂಮಿಯ ಮೇಲೆ ಮತ್ತೇ
ಜೀವರಾಶಿ ಸಂಚಲಿಸುತ್ತದೆ.
ವಿನಾಶದಂಚಿನಿಂದ ಹೊರಬಂದ
ಜೀವಕೋಶಗಳು ಮತ್ತೇ ಉಸಿರಾಡುತ್ತವೆ.
ಕೊಲ್ಲುವ ಕೈ ಕೆಲವಾದರೆ
ಬದುಕಿಸುವ ಕೈಗಳು ಸಾವಿರಾರು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...