Home / ಕವನ / ಕವಿತೆ / ವಸಂತ ಲಕ್ಷ್ಮಿ

ವಸಂತ ಲಕ್ಷ್ಮಿ

ಇಳೆಗೆ ಬಂದಳದೋ ಲಕ್ಷ್ಮಿ
ಮಧುಮಾಸದ ಅಮೃತ ರಶ್ಮಿ!

ಮಿಂದು ಬಂತು ನೆಲಜಲ
ಸ್ವಾಗತಿಸಿತು ಭೂತಲ
ದಿಸೆ ದಿಸೆಯೂ ಹೊಳೆವ ಹವಳ
ಸ್ವಸ್ತಿ ಲಿಖಿತ ಹೊಸ್ತಿಲ!

ಗಗನ ಕರದ ನೀಲಕಮಲ
ಅರ್ಘ್ಯವೀಯೆ ಕಿರಣ ಸುಜಲ
ಕೈ ಮುಗಿಯಿತು ಜೀವಕುಲ
ಭಾವ ಪಕ್ವ ಫಲವಲ!

ಪುರೂರವನ ಎದುರು ನಿಂತ
ಇವಳಪ್ಸರೆ ಊರ್ವಶಿ!
ಬಾನ್ನೆಲದಲಿ ಬೆಳದನಂತ
ಮತ್ತಧವಳ ಸುಖಶಶಿ!

ಜನ ಬನಗಳ ಅಂತರಂಗ
ಮಥಿಸಿ ಬಂತು ಹೃತ್ತರಂಗ
ವಿಶ್ವವಾಯ್ತು ನೃತ್ಯರಂಗ
ಈ ವಸಂತ ಲಕ್ಷ್ಮಿಗೆ!

ಹಸುರಿನ ಕೊನೆ ಕೆಂಪೊಡೆಯಿತು
ಎಡೆಯೆಡೆಯಲಿ ಕಂಪಡರಿತು
ಹಸಿದೆದೆಯಲಿ ಕಂಡರಸಿತು
ಕನಸಿನ ಕಮನೀಯತೆ!

ಸುಳಿದಾಡಿತು ಗಂಧಪವನ
ಸ್ಫೂರ್ತಿಸಿರಲು ಪ್ರೇಮ ಕವನ
ತುಂಬಿತುಟಿಯು ನುಡಿಸಿಯದನ
ಬನ ಬನವನು ಕುಣಿಸಿತು!

ಅದೊ ಕೋಕಿಲ ಮತ್ತಗೀತ
ವನಮೋದದಿ ರೋಮಾಂಚಿತ
ಹೆಣ್ಣುಗಂಡು ಕಾಮವ್ಯಥಿತ
ಸುಖ ಝೇಂಕೃತ ಭಾವವು!

ವೈರಾಗ್ಯದ ಬಗೆ ಚೆದರಿತು
ಅನುರಾಗದ ತಪ ಕೊನರಿತು
ನಂಜುಂಡನ ತುಟಿ ಅದುರಿತು
ಅಶುಭದ ವಿಷ ನೆಕ್ಕಿತು!

ಯುಗ ಯುಗಗಳ ಸೃಜನಗೀತ
ಹೊಮ್ಮಿ ಬರಲು, ವಿಶ್ವ ಪ್ರೀತ
ಈ ಲೋಕವು ಪುಣ್ಯ ತೀರ್ಥ
ಹೃನ್ನದಿಗಳು ಬೆರೆಯಲು!

ಸಂಸಾರದ ಕಟು ಬಂಧನ-
ವಾಯ್ತು ಇಂದು ನವನಂದನ
ಎದೆಯೆದೆಯಲಿ ಮಧು ನರ್ತನ
ನಗೆ ಕೊನರಿತಕಾರಣ!

ಬಾರೆ ಬಾರೆ ಭಾಗ್ಯಲಕ್ಷ್ಮಿ
ನಾಕ ತೊರೆದ ಪುಣ್ಯರಶ್ಮಿ
ಜಗ ಕೋರಿದೆ ಸುಸ್ವಾಗತ
ಬಾರೊಲವಿನ ಅಭ್ಯಾಗತ!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...