Home / ಕವನ / ಕವಿತೆ / ವಸಂತ ಲಕ್ಷ್ಮಿ

ವಸಂತ ಲಕ್ಷ್ಮಿ

ಇಳೆಗೆ ಬಂದಳದೋ ಲಕ್ಷ್ಮಿ
ಮಧುಮಾಸದ ಅಮೃತ ರಶ್ಮಿ!

ಮಿಂದು ಬಂತು ನೆಲಜಲ
ಸ್ವಾಗತಿಸಿತು ಭೂತಲ
ದಿಸೆ ದಿಸೆಯೂ ಹೊಳೆವ ಹವಳ
ಸ್ವಸ್ತಿ ಲಿಖಿತ ಹೊಸ್ತಿಲ!

ಗಗನ ಕರದ ನೀಲಕಮಲ
ಅರ್ಘ್ಯವೀಯೆ ಕಿರಣ ಸುಜಲ
ಕೈ ಮುಗಿಯಿತು ಜೀವಕುಲ
ಭಾವ ಪಕ್ವ ಫಲವಲ!

ಪುರೂರವನ ಎದುರು ನಿಂತ
ಇವಳಪ್ಸರೆ ಊರ್ವಶಿ!
ಬಾನ್ನೆಲದಲಿ ಬೆಳದನಂತ
ಮತ್ತಧವಳ ಸುಖಶಶಿ!

ಜನ ಬನಗಳ ಅಂತರಂಗ
ಮಥಿಸಿ ಬಂತು ಹೃತ್ತರಂಗ
ವಿಶ್ವವಾಯ್ತು ನೃತ್ಯರಂಗ
ಈ ವಸಂತ ಲಕ್ಷ್ಮಿಗೆ!

ಹಸುರಿನ ಕೊನೆ ಕೆಂಪೊಡೆಯಿತು
ಎಡೆಯೆಡೆಯಲಿ ಕಂಪಡರಿತು
ಹಸಿದೆದೆಯಲಿ ಕಂಡರಸಿತು
ಕನಸಿನ ಕಮನೀಯತೆ!

ಸುಳಿದಾಡಿತು ಗಂಧಪವನ
ಸ್ಫೂರ್ತಿಸಿರಲು ಪ್ರೇಮ ಕವನ
ತುಂಬಿತುಟಿಯು ನುಡಿಸಿಯದನ
ಬನ ಬನವನು ಕುಣಿಸಿತು!

ಅದೊ ಕೋಕಿಲ ಮತ್ತಗೀತ
ವನಮೋದದಿ ರೋಮಾಂಚಿತ
ಹೆಣ್ಣುಗಂಡು ಕಾಮವ್ಯಥಿತ
ಸುಖ ಝೇಂಕೃತ ಭಾವವು!

ವೈರಾಗ್ಯದ ಬಗೆ ಚೆದರಿತು
ಅನುರಾಗದ ತಪ ಕೊನರಿತು
ನಂಜುಂಡನ ತುಟಿ ಅದುರಿತು
ಅಶುಭದ ವಿಷ ನೆಕ್ಕಿತು!

ಯುಗ ಯುಗಗಳ ಸೃಜನಗೀತ
ಹೊಮ್ಮಿ ಬರಲು, ವಿಶ್ವ ಪ್ರೀತ
ಈ ಲೋಕವು ಪುಣ್ಯ ತೀರ್ಥ
ಹೃನ್ನದಿಗಳು ಬೆರೆಯಲು!

ಸಂಸಾರದ ಕಟು ಬಂಧನ-
ವಾಯ್ತು ಇಂದು ನವನಂದನ
ಎದೆಯೆದೆಯಲಿ ಮಧು ನರ್ತನ
ನಗೆ ಕೊನರಿತಕಾರಣ!

ಬಾರೆ ಬಾರೆ ಭಾಗ್ಯಲಕ್ಷ್ಮಿ
ನಾಕ ತೊರೆದ ಪುಣ್ಯರಶ್ಮಿ
ಜಗ ಕೋರಿದೆ ಸುಸ್ವಾಗತ
ಬಾರೊಲವಿನ ಅಭ್ಯಾಗತ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...