Home / ಕವನ / ಅನುವಾದ / ಟ್ರಾಫಿಕ್ ಕಂಟ್ರೋಲ್

ಟ್ರಾಫಿಕ್ ಕಂಟ್ರೋಲ್

ಮೂಲ: ಸಮರೇಂದ್ರಸೇನ್ ಗುಪ್ತ

ಬದಿಗೆ ನಿಲ್ಲಿ ಅಂತ ಪೋಲೀಸು ಹೇಳಿದ,
ನಿಂತೆ ಬದಿಯಲ್ಲಿ.
ಪ್ರಮುಖ ವ್ಯಕ್ತಿ ಯಾರೋ
ಹೋಗಲಿರುವಂತಿತ್ತು ರಸ್ತೆಯಲ್ಲಿ;
ಬಸ್ಸು ಕಾರುಗಳನ್ನು ರಿಕ್ಷಾ ಸ್ಕೂಟರ್‌ಗಳನ್ನು
ತಡೆಯಲಾಗಿತ್ತು.
ನಾನು ಇದ್ದದ್ದೊ ಆ ರಸ್ತೆ ಬದಿಯಲ್ಲಿ,
ಆದರೇನಂತೆ?
ದೊಡ್ಡ ವ್ಯಕ್ತಿ ಹೀಗೆ ಹೋಗುತ್ತಾರೆಂದರೆ
ರಸ್ತೆ ಮಾತ್ರವೆ ಏನು, ರಸ್ತೆ ಬದಿ ಕೂಡ
ಖಾಲಿಯಾಗಲೆಬೇಕು.

ಆದರೆ ಆ ಮರಗಳು
ಮುಂಚೆ ಎಲ್ಲಿದ್ದುವೋ ಅಲ್ಲೇ ನಿಂತಿದ್ದುವು.
ಅವಕ್ಕೆ ಆಳದ ಬೇರು,
ಋತು ಋತುಗೆ ತಪ್ಪದೆ
ಎಲೆ ಚಿಗುರಿ ಹೂ ತುಂಬಿ
ಯಾರೇ ಆದರೂ ಏನು
ಬಳಿ ನಿಂತವರ ಮೇಲೆ ನೆರಳು ಹಾಸುವ ಗೀಳು.
ನನಗೆ ಬೇರುಗಳಿಲ್ಲ, ಒರಟು ತೊಗಟೆಯೂ ಇಲ್ಲ,
ಮನುಷ್ಯನಲ್ಲವೆ ಹೇಳಿ?
ನಡತೆ ಸಂಸ್ಕೃತಿ ನೀತಿ ಗಾಂಭೀರ್ಯ ಇರುವವ.
ಯಾರೋ ಪ್ರಮುಖ ವ್ಯಕ್ತಿ
ರಸ್ತೆ ಮೂಲಕ ಹಾದು ಹೋಗುತ್ತಾರೆಂದರೆ
ಸಕಲ ವಿಧೇಯತೆಯಲ್ಲಿ ಬದಿ ಸರಿದು ನಿಲ್ಲುವುದು
ನನಗೆ ಧರ್ಮ.
ರಸ್ತೆ ಹಿಂದೆಂದೂ ಹೀಗೆ ಖಾಲಿಯಾಗಿರಲಿಲ್ಲ.
ದೇವರ ಉತ್ಸವ ಬಂದ ಹೊತ್ತಿನಲ್ಲೂ ಕೂಡ.
ಯೋಚಿಸುತ್ತಿರುವಂತೆ ರಕ್ತ ಬಿಸಿಯಾಯಿತು
ಆದರೂ ತೆಪ್ಪಗೆ
ದಾರಿ ಬದಿ ಬಿಟ್ಟು ಆಚೆ ಕಡೆ ನಡೆದೆ
ತಮ್ಮ ವಿಧೇಯ ಎಂದು ರುಜು ಮಾಡಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...