Home / ಕವನ / ಅನುವಾದ / ಟ್ರಾಫಿಕ್ ಕಂಟ್ರೋಲ್

ಟ್ರಾಫಿಕ್ ಕಂಟ್ರೋಲ್

ಮೂಲ: ಸಮರೇಂದ್ರಸೇನ್ ಗುಪ್ತ

ಬದಿಗೆ ನಿಲ್ಲಿ ಅಂತ ಪೋಲೀಸು ಹೇಳಿದ,
ನಿಂತೆ ಬದಿಯಲ್ಲಿ.
ಪ್ರಮುಖ ವ್ಯಕ್ತಿ ಯಾರೋ
ಹೋಗಲಿರುವಂತಿತ್ತು ರಸ್ತೆಯಲ್ಲಿ;
ಬಸ್ಸು ಕಾರುಗಳನ್ನು ರಿಕ್ಷಾ ಸ್ಕೂಟರ್‌ಗಳನ್ನು
ತಡೆಯಲಾಗಿತ್ತು.
ನಾನು ಇದ್ದದ್ದೊ ಆ ರಸ್ತೆ ಬದಿಯಲ್ಲಿ,
ಆದರೇನಂತೆ?
ದೊಡ್ಡ ವ್ಯಕ್ತಿ ಹೀಗೆ ಹೋಗುತ್ತಾರೆಂದರೆ
ರಸ್ತೆ ಮಾತ್ರವೆ ಏನು, ರಸ್ತೆ ಬದಿ ಕೂಡ
ಖಾಲಿಯಾಗಲೆಬೇಕು.

ಆದರೆ ಆ ಮರಗಳು
ಮುಂಚೆ ಎಲ್ಲಿದ್ದುವೋ ಅಲ್ಲೇ ನಿಂತಿದ್ದುವು.
ಅವಕ್ಕೆ ಆಳದ ಬೇರು,
ಋತು ಋತುಗೆ ತಪ್ಪದೆ
ಎಲೆ ಚಿಗುರಿ ಹೂ ತುಂಬಿ
ಯಾರೇ ಆದರೂ ಏನು
ಬಳಿ ನಿಂತವರ ಮೇಲೆ ನೆರಳು ಹಾಸುವ ಗೀಳು.
ನನಗೆ ಬೇರುಗಳಿಲ್ಲ, ಒರಟು ತೊಗಟೆಯೂ ಇಲ್ಲ,
ಮನುಷ್ಯನಲ್ಲವೆ ಹೇಳಿ?
ನಡತೆ ಸಂಸ್ಕೃತಿ ನೀತಿ ಗಾಂಭೀರ್ಯ ಇರುವವ.
ಯಾರೋ ಪ್ರಮುಖ ವ್ಯಕ್ತಿ
ರಸ್ತೆ ಮೂಲಕ ಹಾದು ಹೋಗುತ್ತಾರೆಂದರೆ
ಸಕಲ ವಿಧೇಯತೆಯಲ್ಲಿ ಬದಿ ಸರಿದು ನಿಲ್ಲುವುದು
ನನಗೆ ಧರ್ಮ.
ರಸ್ತೆ ಹಿಂದೆಂದೂ ಹೀಗೆ ಖಾಲಿಯಾಗಿರಲಿಲ್ಲ.
ದೇವರ ಉತ್ಸವ ಬಂದ ಹೊತ್ತಿನಲ್ಲೂ ಕೂಡ.
ಯೋಚಿಸುತ್ತಿರುವಂತೆ ರಕ್ತ ಬಿಸಿಯಾಯಿತು
ಆದರೂ ತೆಪ್ಪಗೆ
ದಾರಿ ಬದಿ ಬಿಟ್ಟು ಆಚೆ ಕಡೆ ನಡೆದೆ
ತಮ್ಮ ವಿಧೇಯ ಎಂದು ರುಜು ಮಾಡಿದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...