Home / ಕವನ / ಕವಿತೆ / ಬಡವರ ಕಾಮಧೇನು

ಬಡವರ ಕಾಮಧೇನು

ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಬಾಲ್ಯದಲಿ ಪಶುಗಳನು ಸಲಹುತ್ತ ಬೆಳೆದೆ
ಬಳಿಕೆಯಾಗಿಹ ಪ್ರಾಣಿಒಳಗಂಗಳರಿದೆ
ವನಮೃಗಖಗಂಗಳನು ನೋಡುತ್ತ ನಲಿದೆ
ಜನಪದಂಗಳನೆಲ್ಲ ಬಳಸುತ್ತ ತಿಳಿದೆ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತ್ತಿದೆ ಯಾಕಂದು ಕಾಣೆ
ಬೇಡಾದ ವಸ್ತುಗಳ ಮೆಲುತಿರುವ ಪ್ರಾಣಿ
ಬೇಕಾದ ಗೆಯ್ಮೆಗಳ ಗೆಯ್ಯುತಿಹ ತ್ರಾಣಿ
ಕಡಿದಾದ ಗುಡ್ಡದಲಿ ನಿಡಿದಾಗಿ ನಡೆವ
ಬಿರುಸಾದ ಮರಳಲ್ಲಿ ಸುಖವಾಗಿ ಸುಳಿವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಇರುಕಾದ ಸರುವಿನೊಳು ಸರಸಾಗಿ ಸಾಗಿ
ಎರೆಯಂಗೆ ತೋಷವನು ಬೀರುತ್ತ ಸಾರಿ
ಪರಿಚರ್ಯೆಕೈಕೊಂಬ ಪರಿಯನ್ನು ಕಳೆದು
ನಿಷ್ಕಾಮ ಕರ್ಮವನು ಮನದಿಂದ ಮಾಳ್ಪ
ನಾ ಕ೦ದ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಹೊರೆಯನ್ನು ಹೇರಿರುವ ಪರಿಯನ್ನು ತಿಳಿದು
ಕೊರಗುತ್ತ ಕರಗದಲೆ ಮನವನ್ನು ಬಿಗಿದು
ಎರೆಯಂಗೆ ಎರೆಯಳಿಗೆ ಹರುಷವನು ತರುವ
ಕಷ್ಟದಿಂ ಕಾಯವನು ನೂಕುತ್ತ ನಡೆವ
ನಾ ಕಂಡ ಜೀವಿಯನ್ನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕಂದು ಕಾಣೆ
ಕಲ್ಲನ್ನು ಕಾಳನ್ನು ಕಟ್ಟಿಗೆಯ ಹೊರೆಯ
ಮಣ್ಣನ್ನು ಮುಂತಾಗಿ ಒಯ್ಯುತಿಹ ಪರಿಯ
ಕಾಸನ್ನು ಕಳೆಯದಲೆ ಸಾಕುತಿಹ ಬಗೆಯ
ಪಶುಜೀವ ಕೋಟಿಯಲಿ ಬಡಜನರ ಸಿರಿಯ
ನಾ ಕ೦ಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಗುಜರಾತ ನಾಡಿನಲಿ ಜನರಾಡಿಕೊಳುವ
“ರಾವಣನ ಗಡಿಯಾಳ” ಬಿರುದಾಗಿ ಮೆರೆವ
ಪ್ರತಿ ಮೂರು ತಾಸಿನಲಿ ಪರಮನನು ಸ್ಮರಿಸಿ
ಧರೆಗೊಂದು ಗಡಿಯಾಳ ತೆರನಾಗಿ ಮೆರೆವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
ಸ್ವರವನ್ನು ಕರ್ಕಶದ ಕಣಿಯೆಂದು ಬಗೆವ
ಮರವೆಯನು ಬಡಪಾಯಿ ಮತಿಯಂದು ತಿಳಿವ
ಗುರುತರದ್ರೋಹವನ್ನೆಸಗುತ್ತ ನರರು
ಮನಬಂದ ತೆರದಲ್ಲಿ ದೂರುತ್ತಲಿರುವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆ೦ದು ನುಡಿಯುತಿದೆ ಯಾಕೆಂದು ಕಾಣೆ
ಆರಯ್ಯೆ ಹಾಲುಂಡಪರಿಯಿಂದ ತಿಳಿದು
ಮೀರಿರ್ದ ಬಾಲಗ್ರಹಂಗಳನು ತರಿದು
ಸೇರಿರ್ದ ಕಾಲನುರು ಸಂಕಲೆಯ ಕಡಿದು
ಸೆಟೆದಿರ್ದ ಶಿಶುವನ್ನು ಸುಖವಾಗಿ ನಗೆಪ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆ೦ದು ಕಾಣೆ
ಕಿವಿನೆಟ್ಟಗಿಟ್ಟಿರುವ ಮುಖವನ್ನು ನೋಡಿ
ಬೆರಗಾಗಿ ಮನದಲ್ಲಿ ಮುದದಿಂದ ಕೂಡಿ
ಮೂಡಿರ್ದ ಬಾಳೆಗಳ ಗೊನೆಯಂತೆ ಕಾ೦ಬ
ತುಂಬಿರ್ದ ಸರಳತೆಯು ತುಳುಕುತ್ತಲಿರುವ
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆ೦ದು ಕಾಣೆ
೧೦
ಮಹಾತ್ಮಾ ಯೇಸುವನು ಹೊರೆಯಾಗಿಹೊತ್ತ
ಪಿರಿದಾದ ಸೈರಣೆಗೆ ನೆಲೆಯಾಗಿ ನಿಂತ
ಗಂಗಾತರಂಗಗಳ ತಟಗಳಲಿ ಮಿಂದು
ಕಂಗೊಳಿಪ ಹಿಮಗಿರಿಯ ದರಿಗಳಲಿ ನಿಂದು
ನಾ ಕಂಡ ಜೀವಿಯನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
೧೧
ತಿಪ್ಪೆಯುಪ್ಪರಿಗೆಗಳ ಹೊಲಬನ್ನು ತಿಳಿದು
ಬಡವಂಗೆ ನೆರೆಕಾಮಧೇನುವಾಗಿರುವ
ನಿಷ್ಕಾಮ ಕರ್ಮವನು ಕಲಿಸುತಿಹ ಋಷಿಯ
ಸತ್ಕಾರ್ಯ ಮಹಿಮೆಯನು ಸಾರುತಿಹ ಸಿರಿಯ
ನಾ ಕಂಡ ಜೀವಿಯನ್ನು ಭೂಖಂಡವೆಲ್ಲ
ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ
*****
Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...