Home / ಲೇಖನ / ವ್ಯಕ್ತಿ / ನರಸಿಂಹರಾಜು

ನರಸಿಂಹರಾಜು

ನಾನು ಮೊತ್ತ ಮೊದಲು ಹಾಸ್ಯ ನಟ ವರನಟ ಅಪ್ಪಟ ಕಲಾವಿದ ನರಸಿಂಹರಾಜು ಅವರನ್ನು ಕಂಡಿದ್ದು ನನ್ನಳ್ಳಿಯ ಟೆಂಟಿನಲ್ಲಿ. ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಹುಚ್ಚು. ಹೊಟ್ಟೆಗೆ ಇಲ್ಲದಿದ್ದರೂ ಕನ್ನಡ-ತೆಲುಗು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದ ಆ ಕಾಲದಲ್ಲಿ ನಮ್ಮೂರು ಟೆಂಟಿಗೆ ಸತ್ಯ ಹರಿಶ್ಚಂದ್ರ-ರತ್ನಗಿರಿ ರಹಸ್ಯ ಸಿನಿಮಾದಲ್ಲಿ ನರಸಿಂಹರಾಜು ಕಾಣಿಸಿಕೊಂಡರೆ ಸಾಕು ಭಲೇ ಖುಷಿ ಪಡುತ್ತಿದ್ದ ಕಾಲವದು !

ಡಾ|| ರಾಜಕುಮಾರ್‌ ನರಸಿಂಹರಾಜು ಅವರ ಜೋಡಿಯಂತೂ ಸೂಪರ್ ಆಗಿತ್ತು.

ನರಸಿಂಹರಾಜು ಅವರನ್ನು ಕಂಡವರು ನಗದವರಿದ್ದರೆ ಹೇಳಿ ? ಅವರ ಹಾವಭಾವ ಭಂಗಿ ಸಪೂರ ಶರೀರ ಹಾಸ್ಯ ಉಕ್ಕುವ ನಟನೆ ಮಾತು ಮುಖಭಾವ ನಿಲ್ಲುವ ಶೈಲಿ. ಇವೆಲ್ಲ ನಮ್ಮನ್ನು ನಗೆಯ ಲೋಕಕ್ಕೆ ಕೊಂಡೊಯ್ಯುತ್ತಿದ್ದವು. ಅವರಿದ್ದರೆ ಸಿನಿಮಾ ಬಲು ಪ್ರಿಯವಾಗುತ್ತಿತ್ತು.

ದಿನಾಂಕ ೨೪-೦೭-೧೯೨೩ ರಲ್ಲಿ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಹುಟ್ಟಿದರು.

ತಂದೆ – ರಾಮರಾಜು

ತಾಯಿ- ವೆಂಕಟಲಕ್ಷ್ಮೀ.

ತಂದೆ- ಪೋಲೀಸ್, ಮನೆಯಲ್ಲಿ ನರಸಿಂಹರಾಜು ಹಿರಿಯರು, ಬಹಳ ಸೋಜಿಗದ ಸಂಗತಿಯೆಂದರೆ ಇವರು ಓದಲೇ ಇಲ್ಲ.

ಈ ವೇಳೆಯಲ್ಲೇ ತಂದೆಯ ತಮ್ಮ ಚಿಕ್ಕಪ್ಪ ಲಕ್ಷ್ಮೀಪತಿರಾಜು ತನ್ನಣ್ಣ ತನ್ನತ್ತಿಗೆಯನ್ನು ಕೇಳಿ ಇವರೇ ಸಾಕಿದ್ದಲ್ಲ… ರಂಗ ಕಲಾವಿದನನ್ನಾಗಿ ಮಾಡಲು ಶ್ರಮಿಸಿದರು.

ಸಣ್ಣ ಹುಡುಗನಿಗೆ ಬಣ್ಣ ಹಚ್ಚಿ ನಾಟಕದಲ್ಲಿ ಬಾಲ ಕಲಾವಿದನಾಗಿ ನೋಡಿದರು.

ಮಲ್ಲಪ್ಪನವರ ಶ್ರೀ ಚಂದ್ರ ಮೌಳೇಶ್ವರ ನಾಟಕ ಕಂಪನಿಯಲ್ಲಿ ಎಡ ತೊರೆಯ ಕಂಪನಿ ಹಿರಣ್ಣಯ್ಯನವರ ಮಿತ್ರ ಮಂಡಲಿ, ಭಾರತ ಲಲಿತ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪನಿ, ಗುಬ್ಬಿಯ ಚನ್ನಬಸವೇಶ್ವರ ನಾಟಕ ಕಂಪನಿ… ಗಳಲ್ಲಿ ಸುಮಾರು ಮೂರು ದಶಕಗಳವರೆಗೆ ಕಲಾವಿದರಾಗಿ ಪಳಗಿದರು.

ನರಸಿಂಹ ರಾಜು ಅವರು ನಟಿಸಿದ ಬೇಡರ ಕಣ್ಣಪ್ಪ ನಾಟಕವಂತೂ ಸಾವಿರಾರು ಪ್ರದರ್ಶನ ಕಂಡಿತು. ಅವರ ಕಾಶಿಪಾತ್ರವಾಗಲಿ ನಕ್ಷತ್ರಿಕನಾಗಿ ನಟಿಸಿದ ಸತ್ಯ ಹರಿಶ್ಚಂದ್ರವಾಗಲಿ ನಾವಿನ್ನೂ ಮರೆತಿಲ್ಲ. ನಾಯಕ ನಟರಾಗಿ ಪ್ರೊಫೆಸರ್ ಹುಚ್ಚುರಾಯ… ಹೀಗೆ ಒಂದಲ್ಲ ಎರಡಲ್ಲ ೨೫೫ ಚಿತ್ರಗಳಲ್ಲಿ ನಟಿಸಿ ಸೈಸೈ ಜೈಜೈ ಎನಿಸಿಕೊಂಡ ಮೇರು ನಟರಾಗಿದ್ದರು. ಅವರು ತೀರಿದರೆಂದರೆ ಯಾರು ನಂಬರು…

ಸುಮಾರು ಮೂರು ದಶಕಗಳವರೆಗೆ ರಜತ ಪರದೆಯನ್ನು ಆಳಿದರು. ಜನರನ್ನು ನಕ್ಕು ನಗಿಸಿದರು. ಈಗಲೂ ನಮ್ಮ ಮಧ್ಯೆ ಇರುವರು. ಆಗಿನ ಜನರೂ ಹಾಗಿದ್ದರೂ! ನರಸಿಂಹರಾಜುರವರೂ ಹಾಗಿದ್ದರು. ಕಲೆಗೆ ಬೆಲೆಯಿತ್ತು. ಕಲಾವಿದರನ್ನು ಬೆನ್ನು ತಟ್ಟಿ ಜೀವಿಸುತ್ತಿದ್ದರು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...