Home / ಲೇಖನ / ವ್ಯಕ್ತಿ / ಶಿವ ಶರಣೆ ಡಾ|| ಜಯದೇವಿ ತಾಯಿ ಲಿಗಾಡೆ

ಶಿವ ಶರಣೆ ಡಾ|| ಜಯದೇವಿ ತಾಯಿ ಲಿಗಾಡೆ

ನಾನು ಸೊಲ್ಲಾಪುರವನ್ನು ನೋಡಿದ್ದು ೧೯೯೨ ರಲ್ಲಿ, ಅಲ್ಲಿನ ನಗರಸಭೆಯ ಕಛೇರಿಯ ಕಂಡು ಬೆಚ್ಚಿ ಬಿದ್ದದ್ದು! ಅದರ ಕತೆ ತಿಳಿದುಕೊಂಡಿದ್ದು.

ಆ ನಂತರ ನಾನು ಬಸವ ಕಲ್ಯಾಣವನ್ನು ಕಂಡಿದ್ದು ೧೯೯೨ ರಲ್ಲಿ, ಅಲ್ಲಿ ಶಿವಶರಣಿ ಡಾ|| ಜಯದೇವಿ ತಾಯಿ ಲಿಗಾಡೆಯವರ ಮನೆ ಕಂಡು ಪುನೀತನಾದದ್ದು.

ಅವರ ಹಿನ್ನಲೆ ತಿಳಿದು ಪ್ರಭಾವಿತನಾಗಿದ್ದು….

ನಾನು ೧೯೯೨ ರಿಂದ ೧೯೯೫ ರವರೆಗೆ ಬಸವ ಕಲ್ಯಾಣದಲ್ಲಿದ್ದಾಗ ಅವರ ಸಾಹಿತ್ಯದ ಕೃತಿಗಳಾದ… ಬಂದೇವ ಕಲ್ಯಾಣಕ, ಬಸವ ದರ್ಶನ, ಅಣ್ಣ ಬಸವಣ್ಣ, ಶೂನ್ಯ ಸಂಪಾದನೆ, ಸಿದ್ಧವಾಣಿ, ಸಮೃದ್ಧ ಕರ್ನಾಟಕಾಂಚಿ ರೂಪರೇಷಾ, ಸಿದ್ಧರಾಮಾಂಚೀ ತ್ರಿವಿಧ… ಶ್ರೀ ಸಿದ್ಧರಾಮೇಶ್ವರ ಪುರಾಣ, ತಾರಕ ತಂಬೂರಿ, ವೀರಶೈವ ಪರಂಪರೆಯ ಸಿದ್ಧರಾಮ ಪುರಾಣ, ಸಾವಿರದ ಪದಗಳು, ಸಿದ್ಧರಾಮ, ಮಹಾಯೋಗಿನಿ, ಬಸವ ವಚನಾಮೃತ, ಸಿದ್ಧ ಲಿಂಗವಾಣಿ, ತಾಯಿ ಪದಗಳು, ಜಯಗೀತ… ಕಂಡಿದ್ದು !

ಹೀಗೆ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ, ಮರಾಠಿ, ಹಿಂದಿ ಮೂರು ಭಾಷೆಗಳಲ್ಲಿ ಖ್ಯಾತ ನಾಮರಾಗಿರುವರು.

ಡಾ|| ಜಯದೇವಿ ತಾಯಿ ಲಿಗಾಡೆಯವರು ಹುಟ್ಟಿದ್ದು ! ದಿನಾಂಕ ೨೩-೦೬-೧೯೧೨ ರಲ್ಲಿ. ಸೊಲ್ಲಾಪುರದ ಇಂದ್ರಭವನದಲ್ಲಿ, ತಂದೆ- ಚೆನ್ನಬಸಪ್ಪ ಮಡಕಿ, ತಾಯಿ ಸಂಗಮ್ಮ ಮಡಕಿ. ಸಂಗಮ್ಮ ಮಡಕಿಯವರ ಅಜ್ಜ ವಾರದ ಮಲ್ಲಪ್ಪ ಭಾರೀ ಶ್ರೀಮಂತರಲ್ಲಿ ಒಬ್ಬರು ! ಇವರ ಇಂದ್ರಭವನ ವಾಡೆ ಇಂದು ನಗರ ಸಭೆಯ ಕಛೇರಿಯಾಗಿದೆ ! ಒಮ್ಮೆ ನೋಡಿ ಸಂಭ್ರಮಿಸಿ….

ಡಾ|| ಜಯದೇವಿ ತಾಯಿ ಲಿಗಾಡೆಯವರು ಅಲ್ಲಿನ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಆರನೆಯ ತರಗತಿವರೆಗೆ ಕಲಿತರು. ತಮ್ಮ ೧೪ ನೆಯ ವಯಸ್ಸಿಗೇ ಅಲ್ಲಿ ಲಿಗಾಡೆ ಮನೆತನದ ಚೆನ್ನಮಲ್ಲಪ್ಪ ಎಂಬ ೧೬ ವರ್ಷದ ಹುಡುಗನೊಂದಿಗೆ ೧೯೨೬ ರಲ್ಲಿ ಮದುವೆಯಾದರು. ಮೂರು ಗಂಡು ಎರಡು ಹೆಣ್ಣು ಮಕ್ಕಳು ತಾಯಿಯಾದರು. ತಮ್ಮ ೩೪ ನೆಯ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ಶಿವ ಶರಣೆಯಾದಳು. ಮಹಾಶರಣೆ ಕಲಿಯುಗದ ಅಕ್ಕ ಮಹಾದೇವಿಯಾದಳು. ತನ್ನನ್ನು ತಾನು ಅರಿಯಲು ಮರೆಯಲು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡು ಉತ್ತಮ ಬೆಳೆ ತೆಗೆದಳು. ಹೆಸರು ಮಾಡಿದಳು.

ಜೀವನದ ಕೊನೆಯ ದಿನಗಳನ್ನು ಅಣ್ಣ ಬಸವಣ್ಣನವರ ಕರ್ಮ ಭೂಮಿ, ತಪೋ ಭೂಮಿ, ವೀರಭೂಮಿ ಬಸವಕಲ್ಯಾಣಕ್ಕೆ ಬಂದರು. ಅಲ್ಲಿ ಸುಖ ಶಾಂತಿ ನೆಮ್ಮದಿಯ ಬೋಧಿಸುತ್ತಾ… ೭೪ ವರ್ಷ ಬಾಳಿದರು. ದಿನಾಂಕ ೨೪-೦೭-೧೯೮೬ ರಲ್ಲಿ ಲಿಂಗೈಕ್ಯರಾದರು. ಕನ್ನಡ ಸಾಹಿತ್ಯ ಬಡವಾಯಿತು.

ಹುಟ್ಟು ಹೋರಾಟಗಾರ್ತಿ, ಅಪ್ಪಟ ಶಿವಶರಣೆ, ಕನ್ನಡ ನಾಡಿನ ವೀರ ಪುತ್ರಿ ಸಾಹಿತ್ಯ ದಿಗ್ಗಜೆಗೆ ಹಲವಾರು ಪ್ರಶಸ್ತಿ ಸನ್ಮಾನಗಳು ಲಭಿಸಿದ್ದವು…..

೧೯೫೧ ರಲ್ಲಿ – ಮುಂಬಯಿ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾಗೋಷ್ಠಿಯ ಅಧ್ಯಕ್ಷತೆ.

೧೯೬೮ ರಲ್ಲಿ- ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

೧೯೭೨ ರಲ್ಲಿ – “ಜಯದೇವಿ” ಎಂಬ ಅಭಿನಂದನಾ ಗ್ರಂಥದ ಗೌರವ.

೧೯೭೪ ರಲ್ಲಿ – ಮಂಡ್ಯದಲ್ಲಿ ಜರುಗಿದ ೪೮ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಧಾರವಾಡದ ಕ.ವಿ.ವಿದ್ಯಾಲಯದ ಗೌರವ ಡಾಕ್ಟರೇಟ್. ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಸಮ್ಮೇಳನದ ಅಧ್ಯಕ್ಷತೆ, ಕ.ವಿ.ವಿ. ಸೆನೆಟ್ ಸದಸ್ಯತ್ವ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯತ್ವ ಹುಬ್ಬಳ್ಳಿ, ತುಮಕೂರುಗಳಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಮಹಾಪರಿಷತ್ತಿನ ಸಮ್ಮೇಳನಗಳ ಅಧ್ಯಕ್ಷತೆ, ಉಡುಪಿಯಲ್ಲಿ ಜರುಗಿದ ವಿಶ್ವ ಹಿಂದೂ ಪರಿಷತ್ತಿನ ಮಹಾಗೋಷ್ಠಿಯ ಅಧ್ಯಕ್ಷತೆ.

-ಹೀಗೆ ನೂರಾರು ಪುರಸ್ಕಾರಗಳು ಅವರನ್ನು ಹರಸಿ ಬಂದಿವೆ. ಇಂದಿಗೂ ಇವರು ಸ್ಫೂರ್ತಿಯ ಸೆಲೆಯಾಗಿ ಸಾಹಿತ್ಯದ ಅಲೆಯಾಗಿ ನಮ್ಮ ಮಧ್ಯೆ ಜೀವಂತವಿರುವರು, ಜೀವನವೆಂದರೆ… ಇದಲ್ಲವೇ ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...