Home / ಲೇಖನ / ಇತರೆ / ಹಚ್ಚೆ ಬಗ್ಗೆ ಹೆಚ್ಚಿನ ಮಾಹಿತಿ

ಹಚ್ಚೆ ಬಗ್ಗೆ ಹೆಚ್ಚಿನ ಮಾಹಿತಿ

೧೯೮೯ ರಿಂದಲೂ ನಾನು ಅಲೆಮಾರಿ, ಅರೆ ಅಲೆಮಾರಿ, ಜನಾಂಗವಾದ ದೊಕ್ಕಲು ಮಕ್ಕಳ ಕುರಿತು ಅಧ್ಯಯನ ಮಾಡುತ್ತಲೇ ಇದ್ದೇನೆ. ಅವರ ಹಚ್ಚೆ ಕಲೆಯ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಕ್ಷೇತ್ರ ಕಾರ್ಯದಲ್ಲಿದ್ದೇನೆ…

“ಹಚ್ಚೆ ಮೊದಲೋ ಜನ ಮೊದಲೋ..?” ಎಂದು ನನ್ನನ್ನು ಪ್ರಶ್ನಿಸುವ ಮೂಲಕ ಹಚ್ಚೆಯ ಮಹತ್ವವನ್ನು ಆ ಜನರು ವಿವರಿಸುತ್ತಾ ಹೋದರು.

ಹರಪ್ಪಾ ಮಹೊಂಜಾದಾರೋ ಸಂಸ್ಕೃತಿಯ ಕಾಲದಲ್ಲಿ ಕೂಡಾ ಹಚ್ಚೆ ಕಲೆ ಇತ್ತು ! ಗಂಡಸರು ಹೆಂಗಸರು ಮಕ್ಕಳು ಅಷ್ಟೇ ಏಕೆ ಗೋಡೆ ಮಣ್ಣಿನ ಪಾತ್ರೆ ಪಡುಗ ಗಡಿಗೆಗಳ ಮೇಲೆ ಹಚ್ಚೆ ಕಲೆಯಿತ್ತು.

ಹಚ್ಚೆ ಕಲೆಯು ಮೂಲ ನಿವಾಸಿಗಳ ಬುಡ್ಡಕಟ್ಟು ಜನರ ಕಲೆ. ಆರಂಭದಲ್ಲಿ ಬುಡಕಟ್ಟಿನ ನಾಯಕ-ನಾಯಕಿ ಮಾತ್ರ ಹಚ್ಚೆ ಹಾಕಿಸಿ ಕೊಳ್ಳುತ್ತಿದ್ದರು. ನಂತರ ಗುಂಪು ಗುಂಪು ಹಚ್ಚೆ ಹಾಕಿಸಿಕೊಳ್ಳಲು ಮುಂದಾಯಿತು. ಇದು ಅಧಿಕಾರದ ಗುಲಾಮಗಿರಿಯ ಅಪರಾಧಿಗಳ ಪತ್ತೆಗಾಗಿ ಹಚ್ಚೆ ಬಳಕೆಯಲ್ಲಿತ್ತು.

ಸಮಾಜ ಶಾಸ್ತ್ರಜ್ಞರ ಪ್ರಕಾರ ಸುಮಾರು ಹತ್ತು ಸಾವಿರ ವರ್ಷಗಳ ಇತಿಹಾಸವಿದೆಯೆಂದೂ ಕ್ರಿ.ಪೂ.ದಲ್ಲಿ ಮಮ್ಮಿಯೊಂದರಲ್ಲಿ ದಕ್ಷಿಣ ಅಮೆರಿಕಾದಲ್ಲಿ ಪತ್ತೆ ಹಚ್ಚಿರುವರು.

ಜೂಲಿಯಸ್ ಸೀಸರ್ ಕ್ರಿ.ಪೂ. ೫೪ ರಲ್ಲಿ ಬರೆದಿರುವ ಟೆಂಪೆಸ್ಟ್, ಮ್ಯಾಕ್‌ಬತ್ ಕೃತಿಗಳಲ್ಲಿ ಹಚ್ಚೆಯ ಕುರುಹುಗಳಿವೆ.

ಜೇಮ್ಸ್ ಕುಕ್ ಎಂಬ ನಾವಿಕ ಯುರೋಪ್‌ಗೆ ಮೊತ್ತ ಮೊದಲು ಹಚ್ಚೆಯನ್ನು ಪರಿಚಯಿಸಿದ.

೧೯೭೧ರಲ್ಲಿ ಹವಾಯಿ ದ್ವೀಪದಿಂದ ಮರಳಿದ್ದ ಈತ !

ಹಿಟ್ಲರ್ -ಕೈದಿಗಳಿಗೆ ಹಚ್ಚೆ ಹಾಕಿಸುತ್ತಿದ್ದನೆಂದು ಇತಿಹಾಸ ಹೇಳುವುದು.

ಕ್ರೈಸ್ತ ಮಿಷನರಿಗಳು ಹಚ್ಚೆ ಕಲೆಗೆ ವಿರೋಧವಿದ್ದವು. ೧೮-೧೯ ನೆಯ ಶತಮಾನದಲ್ಲಿ ಉನ್ನತ ಜನರೂ ಹಚ್ಚೆಗೆ ಒಲವು ತೋರಿದ್ದು ಇತಿಹಾಸ ಸಾರುವುದು. ೧೯೬೦ ರಲ್ಲಿ ಹಚ್ಚೆ ಜನಪ್ರಿಯವಾಗಿತ್ತು !

ಗೋರಂಟಿ – ಮೆಹೆಂದಿಯು ಹಚ್ಚೆಯ ರೂಪವೆಂಬುದನ್ನು ಹೇಳುವರು.

ಹಚ್ಚೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ಇದೆ. ಸಂಗ್ರಹಿಸಬೇಕಾಗಿದೆ. ಕಾದೂ ನೋಡೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...