Home / ಕವನ / ಕೋಲಾಟ / ಕೋಲೆಂಬೂ ಗೀಜಗನೇ

ಕೋಲೆಂಬೂ ಗೀಜಗನೇ

ಶೆಟ್ಟೀ ಬೆಟ್ಟದ ಮೇನೇ
ಹುಟ್ಟಿದೊಂದು ಬಿದುರಾ
ಕೋಲೇ ಕೋಲೆಂಬೂ ಗೀಜಗನೇ || ೧ ||

ಹುಟ್ಟಿತೊಂದು ಬಿದ್ರ ಕೋಲು
ಜಾಡಕಾರ ಕತ್ಯೋ
ಜಾಡಕಾರ ಕತ್ತಿಗೇ
ಲಾಗಿತ್ತೊಂದು ಗೊಡ್ ಮೊರಾ ಕೋಲೂ || ೨ ||

ಆಗಿತ್ತೊಂದು ಗೂಡ್ ಮೊರಕೇ
ಖಂಡ್ಗ ಖಂಡ್ಗ ಬತ್ತ
ಚಿನ್ಮಾಯಂತಾ ಯೇಲಿಯೋ
ಚಿನ್ಮಯಂತಾ ಯೆಲಿ ಗೇ
ರಾವ್ ಗಣ್ ಬೆಕ್ಕೋ || ಕೋಲೂ || ೩ ||

ರಾವ್ ಗಣ್ ಬೆಕ್ಕಿಗೇ
ಜಾಲ್ ಮಾವ್ ಕುನ್ಯೋ
ಜಾಲ್ ಮಾವ್ ಕುನ್ನಿಗೇ
ಗೇರ್ ಕಾರ್‍ಯ ಪಟ್ಟಿ ಹುಲಿಯೋ
ಗೇರ್ ಕಾರ್‍ಯ ಪಟ್ಟಿ ಹುಲಿಗೇ
ಬೆಳ್ಳಿ ಕಟ್ನ ಕೋವ್ಯೋ ಕೋಲೂ || ೪ ||

ಬೆಳ್ಳಿ ಕಟ್ನ ಕೋವಿಗೆ
ಇಜ್ಜಾ ನಾಗರ ಮದ್ದೋ
ಇಜ್ಜಾ ನಾಗರ ಮದ್ದೀಗೇ
ಬಂಕಾಪೂರ್ ದ ಬೆಂಕ್ಯೋ || ಕೋಲೂ || ೫ ||

ಬಂಕಾಪೂರದ ಬೆಂಕಿಗೆ
ಹರ್‌ವಾ ಜಲದಿ ನೀರೋ || ಕೊಲೂ
ಹರ್‌ವಾ ಜಲದಿ ನೀರಿಗೇ
ವಕ್ರ ಕಾಲ್ ಯೆಮ್ಯೋ
ವಕ್ರ ಕಾಲ್ ಯೆಮ್ಮಿಗೇ || ಕೋಲೂ || ೬ ||

ಪಾವ್ ಶೇರ್ ಹಾಲೋ
ಪಾವ್ ಶೇರ್ ಹಾಲಿಗೇ
ಬೆಳ್ಗಲ್ಲಂತಾ ಬೆಣ್ಣ್ಯೋ
ಪಾವ್ ಶೇರ್ ಬೆಣ್ಣಿಗೇ
ತಾಗಿದೊಂದು ಹಣವೋ || ಕೋಲೂ || ೭ ||

ತಾಗಿದೊಂದು ಹಣವಕ್ಕೇ
ಇಪ್ಪತ ಮೊಳ್ನ ಸಾಲ್ಯೋ
ಇಪ್ಪತ ಮೊಳ್ನ ಸಾಲಿಗೇ
ಹದ್ನಾರೆ ವರ್‍ಸನ ಹುಡಗ್ಯೋ || ಕೋಲೂ || ೮ ||

ಹದ್ನಾರೆ ವರ್‍ಸನ ಹುಡ್ಗಿಗೇ
ಹದ್ನೆಂಟ್ ವರ್‍ಸನ ಹುಡ್ಗನೋ || ೯ ||
*****
ಹೇಳಿದವರು: ಶಿವಿ ಜೆಟ್ಟಿ ಮುಕ್ರಿ, ಹೊಲನಗದ್ದೆ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...