Home / ಕವನ / ಕವಿತೆ / ಉಧೋ ಮನಸೆ ಉಧೋ

ಉಧೋ ಮನಸೆ ಉಧೋ

ಉಧೋ ಮನಸೆ ಉಧೋ
ಉಧೋ ಉಧೋ ಮನಸೇ

ಬ್ರಹ್ಮಾಂಡದ ಕನಸೇ
ವಿಶ್ವಾತ್ಮನ ನೆನಸೇ
ಜನ್ಮಾಂತರ ಜೀವವೇ
ಅಂತರತಮ ಭಾವವೇ
ಓ ಮನಸೇ
ಉಧೋ ಉಧೋ ಮನಸೇ

ಸಿದ್ಧವಾಗಿರು ನೀನೆಲ್ಲ
ಸಾಧ್ಯತೆಗು
ಬದ್ಧವಾಗಿರು ನೀನೆಲ್ಲ
ಬಾಧ್ಯತೆಗು
ಸದಾ ಜಾಗೃತವಾಗಿರು ಮನಸೇ
ಸದಾ ಕರ್‍ತೃವಾಗಿರು ಕವಿಯಾಗಿರು ಮನಸೇ
ಓ ಮನಸೇ
ಉಧೋ ಉಧೋ ಮನಸೇ

ಧ್ವನಿಯೊಂದು ಮನಸೇ
ಪದ ಪದಾರ್‍ಥ ಮನಸೇ
ವಾಕ್ಯ ವ್ಯಾಕರಣ ಮನಸೇ
ಜ್ಞಾನವಿಜ್ಞಾನ ಮನಸೇ
ಮಹಾ ಕಲ್ಪನಾವಿಲಾಸ ಮನಸೇ
ಓ ಮನಸೇ
ಉಧೋ ಉಧೋ ಮನಸೇ

ಕೃತಿ ಸಂಸ್ಕೃತಿ
ಕತೆ ನಾಗರಿಕತೆ
ಅಕ್ಷಯ ಅಕ್ಷರಗಳ
ಅಗಣಿತ ನಕ್ಷತ್ರಗಳ ಮನಸೇ
ಓ ಮನಸೇ
ಉಧೋ ಉಧೋ ಮನಸೇ

ಅತಿ ಮಾನಸ ಮನಸೇ
ಇತಿ ಮಾನಸ ಮನಸೇ
ಏನು ನೀನು ಏನು ನಾನು
ಓ ಮನಸೇ
ಉಧೋ ಉಧೋ ಮನಸೆ

ನೀನಿರುವುದೆ ಸರೋವರ
ನೀನಿರುವುದೆ ಅಚ್ಛೋದ
ನೀನಿರುವುದೆ ಕಳಹಂಸ
ನೀನಿರುವುದೆ ಅಲ್ಲೋಲ
ನೀನಿರುವುದೆ ಶಾಂತಿ
ಓ ಮನಸೇ
ಉಧೋ ಉಧೋ ಮನಸೇ
ಓ ಶಾಂತಿಃ ಶಾಂತಿಃ ಶಾಂತಿಃ
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...