Home / ಕವನ / ಕವಿತೆ / ಭರತನಿದ್ದ ಬಾಹುಬಲಿಯಿದ್ದ

ಭರತನಿದ್ದ ಬಾಹುಬಲಿಯಿದ್ದ

ಭರತನಿದ್ದ ಬಾಹುಬಲಿಯಿದ್ದ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ

ಭರತ ಬಾಹುಬಲಿಯ ಮಧ್ಯೆ
ಯುದ್ಧ ನಡೆದಿತ್ತು ಅಣ್ಣತಮ್ಮನ ನಡುವೆ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ

ಗಧಾಯುದ್ಧ ಖಡ್ಗ ಯುದ್ಧ
ಸಕಲಾಸ್ತ್ರ ಯುದ್ಧ ನಡೆದಿತ್ತು ಸಹಸ್ರವರ್‍ಷ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ

ಸಕಲ ಸಮಬಲ ಯುದ್ಧ
ಕೊನೆಗೊಂದೆ ಯುದ್ಧ ಅದು ದೃಷ್ಟಿ ಯುದ್ಧ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ

ದೃಷ್ಟಿ ಯುದ್ಧದಲಿ ಬಾಹುಬಲಿ ಗೆದ್ದ
ಯುದ್ಧ ಗೆದ್ದವನೆ ಎಲ್ಲ ರಾಜ್ಯವ ಗೆದ್ದ
ಗೊಮ್ಮಟನಿರಲಿಲ್ಲ
ಜಿನನಿರಲಿಲ್ಲ

ಆಗಲೇ ಅವನು ಎಲ್ಲ ಬಿಟ್ಟದ್ದು
ಬಿಟ್ಟಾಗಲೇ ಅವನು ನಿಜವಾಗಿ ಗೆದ್ದುದು
ಆಗಲೇ ಅವನು ಗೊಮ್ಮಟನಾದುದು
ಜಿನನು ಆದುದು

ರಾಜ್ಯ ಕೋಶಗಳ ಬಿಟ್ಟ
ಗೆದ್ದುದೆಲ್ಲವ ಬಿಟ್ಟ
ಗೆಲ್ಲಬೇಕೆಂಬುದನೆ ಬಿಟ್ಟ
ಅಹಂ ಬಿಟ್ಟ
ಅಹಂಕಾರವ ಬಿಟ್ಟ
ಉಟ್ಟ ಬಟ್ಟೆಯನೆ ಬಿಟ್ಟೆದ್ದು ನಿಂತ
ಆಕಾಶದೆತ್ತರಕೆ ಬೆಳೆದವನೆ ಗೊಮ್ಮಟ
ನಿನ್ನೆ ಇಂದು ನಾಳೆಗೂ
ಅವನಿಗವನೆ ಸದೃಶ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...