Home / ಕವನ / ಕವಿತೆ / ಪ್ರಾರ್‍ಥನೆ

ಪ್ರಾರ್‍ಥನೆ

ನಾನು ಯಾವ ನೆಲದಲ್ಲಾದರೂ ನಡೆದಾಡಲಿ
ನನ್ನ ಮಾತೃಭೂಮಿಯ ಮಣ್ಣವಾಸನೆಯೇ ಸೂಸಿಬರಲಿ
ನಾನು ಕಾಶ್ಮೀರ ಕಣಿವೆಯ ಸುವಾಸನೆ ಮೂಸಿರುವೆನು.
ದ್ವೇಷದ ವಿಷಗಾಳಿ ವರ್‍ಜವಾಗಿದೆ ನನಗೆ
ಸ್ಫೋಟಕ ಮದ್ದಿನ ಘಮಟು ವಾಸನೆ ಒಗ್ಗಲಾರದು
ನನಗೆ ಹಿಮಚ್ಛಾದಿತ ಹಿಮಾಲಯವೇ ಅಚ್ಚು ಮೆಚ್ಚು
ಆದರೂ ಅವರೇಕೆ ಹೇಳುತ್ತಿದ್ದಾರೆ?
ನನಗೆ ರಾಸ ಪರ್‍ವತವೇ ಪ್ರಿಯವೆಂದು.

ನಾನು ಹಜ್ ಯಾತ್ರೆ ಕೈಕೊಂಡರೂ
ಮದೀನಾದ ನೆಲದಲ್ಲಿ ಪ್ರಾರ್‍ಥಿಸಿದರೂ
ಭಾರತದ ಏಳೆಗಾಗಿಯೇ ಪ್ರಾರ್‍ಥಿಸುವೆನು.
ನನ್ನ ದೇಶದ ಸುಖ ಸಮೃದ್ಧಿಯನೇ ಬಯಸುವೆನು
ನನಗೆ ಆಡಲು ಮಡಿಲು ನೀಡಿದ
ನೀರು, ಆಹಾರ, ಗಾಳಿ ಕೊಟ್ಟು ಪೋಷಿಸಿದ
ಮಾತೃ ಭೂಮಿಯ ಶ್ರೇಯಸ್ಸು ಬಯಸುವೆ.
ನನ್ನ ದೇಹದ ಹನಿ ಹನಿ ರಕ್ತದಲ್ಲೂ
ಭಾರತದ ಹೆಸರೇ ಪ್ರತಿಧ್ವನಿಸುತ್ತಿರುತ್ತದೆ.
ಆದರೂ ಅವರೇಕೆ ಹೇಳುತ್ತಿದ್ದಾರೆ
ನಾನು ಗಡಿಯಾಚೆಯವಳೆಂದು?.

ನನ್ನ ದೇಶದಲ್ಲಿ ನಿರಂತರ ಹರಿಯುತ್ತಿವೆ
ಗಂಗೆ, ಯಮುನೆ, ಕೃಷ್ಣ, ಕಾವೇರಿಯರು
ಪ್ರೀತಿಯ ತಾಜಮಹಲು ನನ್ನ ದೇಶದಲ್ಲಿಯೇ ಇದೆ.
ಚಾರ್‌ಮಿನಾರ್, ಕುತುಬ್‌ ಮೀನಾರ್‌ಗಳು.
ಬದುಕಿರುವೆನು ನಾನು ಕಾಶೀ, ಮಥುರಾ
ಅಜ್ಮೀರ್‌ಬಾಬಾನ ಸೌಹಾರ್‍ದ ನೆಲೆಗಳಲ್ಲಿ
ಸೌಹಾರ್‍ದ ತಾಣ ಸುಂದರ ಹೂಬನ
ಪೋಷಿಸಿದವಳು ನಾನು.
ಆದರೂ ಅವರೇಕೆ ಹೇಳುತ್ತಿದ್ದಾರೆ
ನಾನು ಕೋಮಲ ಹೂಗಳ ದ್ವೇಷಿಯೆಂದು?

ನಾನು ಲೋಕದ ಯಾವ
ಮೂಲೆಯಲ್ಲಾದರೂ ಕೊನೆಯುಸಿರೆಳೆಯಲಿ
ದೂರದಿಂದಲಾದರೂ ನನ್ನ ಭಾರತದ
ಗಡಿ ಕಾಣುತ್ತಿರಲಿ ಎಂದು ಬಯಸುವೆನು.
ಯಾವ ದೇಶದ ನೀರೇ ಕುಡಿಯಲಿ
ಪವಿತ್ರ ಝಂಝಂ ಸೇವಿಸಿದರೂ ಸಹ
ಅದರಲ್ಲಿ ಗಂಗೆಯ ಸ್ವಾದ ಹುಡುಕುವೆನು.
ಪ್ರಾರ್‍ಥನೆಗೆ ಕೈ ಎತ್ತಿದ ಪ್ರತಿ ಬಾರಿಯೂ
ನನ್ನ ದೇಶದ ಎಳ್ಗೆಯನೇ ಬಯಸುವೆನು.
ಆದರೂ ಅವರೇಕೆ ಹೇಳುತ್ತಿದ್ದಾರೆ
ನಿನ್ನ ಬದ್ಧತೆಯನ್ನು ಸಾಬೀತು ಪಡಿಸು ಎಂದು?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ