Home / ಕಥೆ / ಕಿರು ಕಥೆ / ಸನ್ಮತಿ

ಸನ್ಮತಿ

ಒಂದು ಕೊಳ. ಅದರ ಬದಿ ಒಂದು ಪುಟ್ಟ ಗುಡಿಸಲು. ಅದರಲ್ಲಿ ಬಾತು ಕೋಳಿಗಳನ್ನು ನೋಡಿಕೊಳ್ಳುತ್ತಾ, ಒಬ್ಬ ಹಳ್ಳಿಯ ವೃದ್ದ ವಾಸವಾಗಿದ್ದ. ಅವನಿಗೆ ಸಂಸಾರದಲ್ಲಿ ಸಾವಿರಾರು ತಾಪತ್ರಯಗಳು, ಮನದಲ್ಲಿ ಸಾವಿರಾರು ಬಗೆಯ ತೀರದ ಪ್ರಶ್ನೆಗಳು ತುಂಬಿಕೊಂಡಿತ್ತು.

ಬಾತು ಕೋಳಿಗಳು ಕೊಳದಲ್ಲಿ ಹಾಯಾಗಿ ಈಜುತ್ತಾ ಕ್ವಾಕ್, ಕ್ವಾಕ್, ಎಂದು ಕೊಂಡು ಉತ್ತರ ಕೊಡುತ್ತಾ ಹಾಯಾಗಿ ಸಾಗುತ್ತಿದ್ದವು.

ವೃದ್ದ ಒಮ್ಮೆ ಈ ಬಾತು ಕೋಳಿಯನ್ನು ದಿಟ್ಟಿಸಿ ನೋಡಿದ. ಕೊಕ್ಕಿನಿಂದ ಕತ್ತಿನ ಭಾಗದವರೆಗೆ ಪ್ರಶ್ನಾರ್ಥ ಚಿಟ್ಟೆಯನ್ನು ಹೊತ್ತ ಈ ಬಾತು ಕೋಳಿ, ಇಷ್ಟು ಹಾಯಾಗಿ ಜೀವನ ನಡೆಸ ಬೇಕಾದರೆ ಇದರ ಹೊಟ್ಟೆಯಲ್ಲಿ ಜೀವನದ ಪ್ರಶ್ನೆಗಳಿಗೆ ಉತ್ತರ ಅಡಿಗಿರ ಬೇಕೆಂದು ಯೋಚಿಸಿದ.

ಒಂದು ಕತ್ತಿಯನ್ನು ಮಸೆದು ಬಾತು ಕೋಳಿಯ ಹೊಟ್ಟೆಯಿಂದ ಉತ್ತರ ಪಡಿಯಲು ಯೋಚಿಸಿದ. ಕತ್ತಿಮಸಿಯುವಾಗ, ಅಲ್ಲಿಗೆ ಒಬ್ಬ ಸನ್ಯಾಸಿ ಬಂದರು.

ಎಲಾ, ವೃದ್ದಾ! “ಏಕೆ ಕತ್ತಿಮಸಿಸುಯುತ್ತಿರುವೆ?” ಎಂದರು.

“ನನ್ನ ಬಾಳಿನ ಪ್ರಶ್ನೆಗಳಿಗೆ ಬಾತುಕೋಳಿ ಹೊಟ್ಟೆಯಲ್ಲಿ ಉತ್ತರವಿದೆ. ಅದನ್ನು ಕೊಚ್ಚಿ ತೆಗೆಯುತ್ತಿದ್ದೆನೆ.” ಎಂದ.

ಎಲಾ, ವೃದ್ಧ! “ಬಾತು ಕೋಳಿ ಹೊಟ್ಟೆ ಬಗೆದು ಕೊಚ್ಚಿದರೆ ನಿನಗೆ ನಿನ್ನ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಸನ್ಮತಿಯ ಮಚ್ಚಿನಲ್ಲಿ ಬಾಳಿನ ಪ್ರಶ್ನೆಗಳನ್ನು ಕೊಚ್ಚಿ ಉತ್ತರ ಕಡೆ”, ಎಂದಾಗ ವೃದ್ಧನ ಮತಿ ಎಚ್ಚೆತ್ತಿತು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...