ಗಳಿಗೆ

ಕಾನನದ ನೀರವತೆಯ ಮೌನದಲ್ಲೂ
ಕಂಡ ಪ್ರಭುವಿನ ಚೈತನ್ಯ ಧಾಮ
ಅಂತಃಕರಣದ ಕರಳು ಬಿರಿಯಿತು
ಕಾತರಿಸಿತು ತನುವಿನ ರೋಮ ರೋಮ

ನಿಮ್ಮ ಪಾದಾರವಿಂದದಲಿ ನಾನು
ಸುರಿಯುವೆ ಆರಳುವ ಮೊಗ್ಗು
ಮತ್ತೆ ಮತ್ತೆ ನಾನು ರೋದಿಸುವೆ
ಮನದಲಿ ಪುಟವುದು ಹಿಗ್ಗು ಹಿಗ್ಗು

ಯಾವ ಕ್ಷಣಗಳು ನುಸುಳಿ ಬರುವವೊ
ಕಾತರಿಸುವೆ ನಾನು ನಿತ್ಯ
ನಿಮ್ಮ ದರುಶನ ಭಾಗ್ಯಕ್ಕೆ ನಾನೆ
ಹಗಲಿರುಳು ಕೊನರುವೆ ಕಾಣಲು ಸತ್ಯ

ಬರಹದ ಅಕ್ಕರ ಅಕ್ಕರಗಳಲ್ಲೂ
ಕಾಣುವ ನಿಮ್ಮಯ ಪರಿಛಾಯೆ
ಎತ್ತೆತ್ತ ನಾನು ಇಣಕಿ ನೋಡಲು
ಕಾಣುವೆ ನಿಮ್ಮ ಲೀಲೆ ಮಾಯೆ

ಬರಬಾರದೆ ನೀನೊಮ್ಮೆ ಇಳೆಗೆ
ಉದ್ಧರಿಸಲು ಈ ಭವದ ಜೀವಿಗಳಿಗೆ
ನಿನ್ನ ಕೃಪೆಯೊಂದೇ ಸಲಹುದು
ಮಾಣಿಕ್ಯ ವಿಠಲ ಬಾಳಿಗೆ ಆಗಳಿಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೫೨
Next post ಮಲ್ಲಿ – ೩೦

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…