Home / ಕಥೆ / ಕಿರು ಕಥೆ / ದೃಷ್ಟಿ ಇರೆ ದಾರಿ

ದೃಷ್ಟಿ ಇರೆ ದಾರಿ

ಸಂಚಾರದಲ್ಲಿದ್ದ ಒಬ್ಬ ಗುರು ಒಂದು ದೇವಾಲಯದಲ್ಲಿ ತಂಗಿದ್ದರು. ಅಲ್ಲಿಗೆ ಕೆಲವು ಶಿಷ್ಯರು ಬಂದರು.

“ಗುರುವೆ! ನಮಗೆ ದಾರಿ ತೋರಿಸಬೇಕೆಂದು” ಒಬ್ಬ ಶಿಷ್ಯ ಕೇಳಿದ.
“ನಿನ್ನ ಮುಂದಿರುವ ವೃಕ್ಷವೇ ನಿನ್ನ ದಾರಿ” ಎಂದರು ಗುರುಗಳು.
“ಅರ್ಥವಾಗಲಿಲ್ಲ ಗುರುಗಳೇ” ಎಂದು ಶಿಷ್ಯ ಪೆಚ್ಚು ಮೋರೆ ಹಾಕಿದ.
“ವೃಕ್ಷವನ್ನು ಸುತ್ತುವಾಗ ನಿನಗೆ ಸವೆಯದ ದಾರಿ ಇದೆ. ಮೇಲೆ ಶಾಕೆಗಳ ಅನೇಕ ಕವಲುಗಳ ದಾರಿಯಲ್ಲಿ ಹೂ, ಕಾಯಿ ಫಲ ದೊರೆಯದೆ ಇರದು” ಎಂದರು ಗುರುಗಳು.

ಅಂತರಾರ್‍ಥದ ಮರ್‍ಮವನ್ನು ಅರಿತ ಶಿಷ್ಯ ‘ಧನ್ಯೂಸ್ಮಿ’ ಎಂದ.

“ಅವನಿಗೆ ವೃಕ್ಷವು ದಾರಿಯಾದರೆ ನನಗೆ ಯಾವುದು ದಾರಿ?” ಎಂದ ಮತ್ತೊರ್‍ವ ಶಿಷ್ಯ.

“ನಿನ್ನ ಮುಂದಿರುವ ಸಾಗರವೇ ನಿನಗೆ ದಾರಿ, ನಡೆದು ಹೋಗು” ಎಂದರು ಗುರುಗಳು.

“ಸಾಗರದಲ್ಲಿ ದಾರಿ ಎಲ್ಲಿ? ಮುಳುಗಿಹೋಗುವೆನಲ್ಲ, ಗುರುಗಳೇ?” ಎಂದ ಎರಡನೇಯ ಶಿಷ್ಯ.

“ನಿನ್ನ ಹೃದಯ ಸಾಗರದಲ್ಲಿ ಮನವೆಂಬ ಹಡಗು ಅಲೆಗಳ ಆರ್‍ಭಟವ ಸಹಿಸಿ ತೇಲುತ್ತ ಹೋದರೆ ದಡದಲ್ಲಿ ಕಾಣದೇ ನಿನ್ನ ದಾರಿ?” ಎಂದರು ಗುರುಗಳು. ಶಿಷ್ಯ ತೃಪ್ತನಾಗಿ ಧ್ಯೇಯದತ್ತ ದಾರಿ ಹಿಡಿದು ಸಾಗಿದ.

ಮೂರನೆಯ ಶಿಷ್ಯ ಮತ್ತೆ ಮುಂದೆ ಬಂದು “ನನಗೇನು ದಾರಿ ಹೇಳಿಗುರುಗಳೆ?” ಎಂದಾಗ.

“ಅಯ್ಯೋ! ಮೂರ್‍ಖಾ, ದಾರಿ ನಮ್ಮ ಕಣ್ಣಿಗೆ ಕಾಣಬೇಕು, ದೃಷ್ಟಿಯಲ್ಲಿ ದಾರಿಯಲ್ಲವೆ? ನಮ್ಮ ಕಾಲು ನಡೆದರೆ, ದಾರಿ ಓಡಿ ಬರುತ್ತದೆ. ಎಲ್ಲರಿಗೂ ಒಂದೊಂದು ದಾರಿ ಕಾದಿರುತ್ತದೆ. ಅದು ಕಂಡು ಕೊಳ್ಳುವುದು ಬಾಳಿನ ಗುಟ್ಟು” ಎಂದಾಗ ಶಿಷ್ಯರ ಗುಂಪಿಗೆ ಸತ್ಯವು ಮನದಟ್ಟಾಯಿತು.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...