Home / ಕವನ / ಕೋಲಾಟ / ಈ ಹೂವಿನ ಕೋಲೇ

ಈ ಹೂವಿನ ಕೋಲೇ

ಕೋಲು ಕೋಲನ ಕೋಲಿನಾ ಈ ಹೂವಿನಾ ಕೋಲೇ
ಕೋಲೂ ಕೋಲೂ ಕೋಲನಾ | ಈ ಹೂವಿನಾ ಕೋಲೇ
ತಾತಾಯೆಂಬೋದು ತಂದಿ
ಚಿನ್ನಾಯೆಂಬೋದು ತಾಯಿ
ತಾಯಿ ತಂದಿ ಸತ್ತಮ್ಯಾಲೆ ತಬಲೀ ಕಾಣೋ ಮಾವಾಯ್ಯಾ
ಕೋಲೂ ಕೋಲನ ಕೋಲೋ | ಈ ಹೂವಿನಾ ಕೋಲು ||
ಹಳ್ಳಿವಳಗೀ ಜನ
ಹಳ್ಳೆಯ ಹೊಯ್ದಕೊಂಡು
ಕೊಳ್ಳಗೆ ಬೆಳಕಿನೊಳಗೇ
ತಿನ್ನತಾರೋ ಮಾವಯ್ಯಾ
ಕೋಲು ಕೋಲನ್ನ ಕೋಲಿನಾ | ಈ ಹೂವಿನ ಕೋಲೇ
ಕಾರಗೆಣಿಸು ಹೊಲವಾ
ಕಾವಲತ್ತು ಜಾಣಾ
ಹೋಗಿ ಹೊಲವಾ ಹೊಕ್ಯುವಲ್ಲೊ ಸಿವನೇ
ಹೊಲದಾವಾ ಮಡಿಕಾರು ಬಂಡಿ ಓಡಿ ಬಂದಾ
ಓಡಿ ಓಡಿ ಬಂದಾ ಹುಡ್ಗನ ಗೋಣಾ ಕೊಯ್ದಾ
ಆ ಪಾಪ ನಾನೇ ನೋಡಬಾರದು
ಹುಡ್ಗನ ತಾಯಿ-ತಂದೆ ಓಡಿ ಓಡಿ ಬಂದು
ಹಿಡೀ ಮಣ್ಣ ಕೊಟ್ಟೋ
ಅತ್ತು ಕರದೂ ಮಾಡಿ
ಹುಡ್ಗನ ಗುಡ್ಡಿ ಮ್ಯಾಲ ಬೀಳಿ ಸಸಿ ಹುಟ್ಟಿ
ಆಟಾತ್ ಈಟಾತ್ ಆಳ ದೊಡ್ಡದಾತೂ
ಆದ ಗಿಡವಾ ಕಡಸೀ ಬಂಡೀಸಾಲೀ ಮಾಡ್ಸಿ
ನಾಡ ನಡುವೇ ಕಡಸೀ ಅಚ್ಚವೇ ಮಾಡ್ಸೀ
ಹರೀಗಳ ಕಡಸೀ ಕೋಲಗಳ ಮಾಡೀ
ಅವು ಕೋಲ ಗೋಳಾ ಬಂಡೀ ಮ್ಯಾಲೆ ಹೇರಿ
ಸ್ವಾಮ್ಯಾ ಶಿವನಾ ಅನ್ನೋ ಯತ್ತನ್ನ ಕಟ್ಟಿ
ಚಹಾ ಅಂದ್ರ ಬಂಡೀ ಸಾಗಿನಲ್ಲ ದೋಶವೇ
ಯಾವ ಬೂಮಿ ತಾಯೀ ಬಂಡೀ ತರ
ನನ್ಗೆ ವಂದೆ ಹಬ್ಬಾ || ಹೇಳಿಕೊಡೊಚೆನ್ನಾ ||
ನಿನ್ಗೆ ವಂದ್ ಹಬ್ಬಾ ಶೀಗಿ ಹಣವೇ ಹಬ್ಬಾ
ಚಹಾ ಅಂದ ಬಂಡೀ ಸಾಗಿತಲ್ಲೋ ಸಿವನೇ ||
ಹತ್ತಂಬಾಳ ಹಲಗೇ ಬಡ್ಡಿ (ಅಣೀ)
ಇವತ ಚವಿರಾ ಚವರಾ ಬೀಸಿ
ನಮ್ಮನ್ನ ಹಿಂಡ್ತಿ ನೀರೀಗೆ ಹೋಗೀ
ಇನ್ನೂ ಬರಲಿಲ್ಲಾ ಇನ್ನೂ ಬರಲಿಲ್ಲಾ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...