Home / ಕವನ / ಕವಿತೆ / ಟಿಸಿ ಮದ್ದು

ಟಿಸಿ ಮದ್ದು

ನೀವು ಆಡಾಡ್ತಾ ಅಡವಿ ಬೀಳ್ತೀರೇನೋ
ದೊಡ್ಡ ಆಟಂಬಾಂಬ ಪಟಾಕಿ ಹಾರುತ್ತದೆಂದು
ಬೆಂಕಿ ಹಚ್ಚಿದಾಗ ನೀವು, ಕಿವಿ ಮುಚ್ಚಿಗೊಳ್ಳಲು ಜನ
ಅದು ಸುರು ಸುರು ಎಂದು ಮೊದಲು ಬುಸುಗುಟ್ಟಿ
ನಂತರ ಮದ್ದು ಮುಟ್ಟುವುದರೊಳಗೇ ಟಿಸ್ಸೆನ್ನುವುದೇನೋ!

ತಳದೊಳಗಿಂದೇಳದೆ
ಒಳತಂತು ಮಿಡಿಯದೆ ಸಹಜರಾಗ
ಆ ಕೂಗು ಈ ಕೂಗು ಸೇರಿ ಜಾತ್ರೆಯಬ್ಬರದೊಳಗೆ
ನಾಲ್ವರಂತೆ ನಾರಾಯಣ ಎನ್ನುತ್ತ ಬೊಗಳುವ ನಾಯಿಗಳೊಡನೆ
ನಮ್ಮದೂ ಇರಲೆಂದು ಸೇರಿಸಿದ ಬೊಗಳಾಗಿಬಿಡುವುದೇನೋ
ಗುರಿಯಿಟ್ಟವನನ್ನು ಪಲ್ಲಕ್ಕಿಯಲ್ಲಿಟ್ಟು ಮೆರೆಸಿ ಒಣ ಒಣ
ನೀವು ನಿಮ್ಮ ನಿಮ್ಮ ಬಣ್ಣ ಬಯಲುಗೊಳಿಸಿಕೊಳ್ಳಲು
ಮೆರೆದಾಟದ ನಿಮ್ಮ ತಿಂಡಿಯನ್ನಿಷ್ಟು ತೀರಿಸಿಕೊಂಡು
ಪಲ್ಲಕ್ಕಿಯನ್ನು ಸುಡುಗಾಡಿನಲ್ಲಿಟ್ಟು
ನೀವು ಕೈ ಒರೆಸಿಕೊಂಡು ಹೋಗಿ ಬಿಡುವಿರೇನೋ!

ಚಲಿಸಲಾಗದ ಬೆಟ್ಟದ ಮುಂದೆ ನಿಂತು ಕೂಗುವ ಕೂಗಾಗುವುದೇನೋ
ಅಥವ ಹೊರಲು ಹೋಗಿ ಗೂದೆ ಹಾದು ಅರಚಿದ
ರಾವಣನ ರೋದನವಾಗುವುದೇನೋ?
ಮಾತಿನ ಮಂತ್ರದಿಂದ ಮಾವಿನಕಾಯಿಯನುದುರಿಸುವಿರೇನೋ?
ಹರೆಯದ ಹರವಿಗೊಂದು ಕಾಲುವೆ ತೋಡಿಕೊಂಡು
ಹರಿಸಿಕೊಂಡು ಕಾವಳಿದು ಉಕ್ಕಿಳಿದು ಸೆಲೆಬತ್ತಿದಾಗ
ನಿಮ್ಮ ಹರಿದಾಟವೂ ಸತ್ತು ಬಿಡುವುದೇನೋ
ಕಾವ್ಯಗರತಿಯನ್ನು ರಾಜಕಾರಣ ವಿಟನಿಗೆ ಮಾರಿ
ಹೊಟ್ಟೆ ತುಂಬಿಕೊಳ್ಳುವ ಹೇಸಿತನವಾಗುವುದೇನೋ?
ಬೇರನ್ನೆಲ್ಲ ಬೈದು ಭೇದಿಸಿ ಅತಂತ್ರ ಜೋತಾಡುವ
ಕಾಗದ ಹೂವಾಗುವಿರೇನೋ?
ಅಥವಾ ಮೇಲಂಟಿಸಿಕೊಂಡ ಮೀಸೆಯಾಗಿಬಿಡುವಿರೇನೋ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...