Home / ಕವನ / ಕವಿತೆ / ಸೃಷ್ಟಿ

ಸೃಷ್ಟಿ

ಸೆರೆನಿಶೆಯ ಗುಂಗಿನ ಗುಳ್ಳೆಗಳ ಹೂಟ್ಟೆಯುಬ್ಬರತನವಲ್ಲ ಇದು
ಈ ಕೈಯಿಂದಾ ಕೈಗೆ ಮಾಯವಾಗಿ ಬರುವ ಪೈಶಾಚೀ ಪೇಚಲ್ಲ
ಯಾರದೋ ಜೇಬು ಖಾಲಿಯಾಗಿ ಯಾರದೋ ಬೊಜ್ಜು ಭರ್ತಿಯಾಗಿ
ಒಮ್ಮೆಲೇ ಮೇಲೆದ್ದ ಅರ್ ಸಿ ಸಿ ಮಹಲಲ್ಲ

ಕೋಳಿ ಕೆದರಿ, ಊರಹಂದಿ ಗೂರಿ
ಮೈಗಳ್ಳೆಮೈ ಗಮ್ಮೆಂಬ ಕೊಳಚೆ ಹೊಂಡದಲ್ಲಿ ಬಿದ್ದಲ್ಲಿ
ಹರಿದಾಡಿಯಾವು ಬರೀ ಹುಳ
ಮರ್ಯಾದೆ ಪಾಚಿಗಟ್ಟಿ ಹಾಕೀತು ಹೊಸ ಸೋಗು
ಹೊಟ್ಟೆಯಲ್ಲೇ ಕೈಕಾಲಾಡಿಸಿ ಭಂಡಗೆಟ್ಟ ಬಸಿರ ಹೊಸೆದರೆ ಬರೀ ನರಳಾಟ
ಬೆಳಕಿಗೆದೆತೆರೆಯುವ ಮನ ತಿಪ್ಪೆಯಲ್ಲಿ ಹೂಳಿಹೋಗಬಹುದಷ್ಟೆ

ಹೊಗೆಯುಗುಳುಗುಳಿ ಇಲ್ಲಣಗಟ್ಟಿದ ಗೂಡಿನಲ್ಲುಲಿಯದು ಪಾಡುವಕ್ಕಿ.
ಕದಡೆಲ್ಲ ಇಳಿದು ತಳಕೆ ಹದವಾಗಿ ತಿಳಿಹೊಳೆ ಹರಿಯ ಹತ್ತಿದರೆ
ಮೇಲೆ ಕೆಳಗೀಜಾಡಿಯಾವು ಮೀನು
ಬೀಜ ಮೊಳಕೆ ಚಿಗುರಾಗಿ ಕಸದಿಂದ ರಸವೊಸರಿ
ಹಸಿರೆತ್ತೀತು ಛತ್ತರಿತಲೆ ನಳ ನಳಿಸಿ ಚಿಮ್ಮಿ ಚೈತನ್ಯಚಿಲುಮೆ
ಸತ್ಯದ ಬೇರಿಂದ ಸತ್ವ ಹೀರಿ ನಿತ್ಯನೂತನ ಸೊಬಗು
ಮುಗಿಲ ಮಾತಾಡಿಸುತ್ತದೆ

ಸೃಷ್ಟಿಯೆಂದರೆ ಬೆವರ ಹನಿಹನಿ ಪೋಣಿಸಿ ಹೆಣೆದ ಹೂಮಾಲೆ
ಬಿಂದು ಸಿಂಧುವಾಗುವ ಕಣವು ಕೂಸಾಗುವ ಸಾಧನ
ಒಂದೊಂದೇ ಕಡ್ಡಿಕೂಡಿಸಿ ಜೋಡಿಸಿ ಹೆಣೆದ ಗುಬ್ಬಚ್ಚಿಗೂಡು
ಎಲೆ ಎಲೆ ಕಟ್ಟಿದ ಪರ್ಣಶಾಲೆ ಮಳೆ ಗಾಳಿ ಚಳಿಬಿಸಿಲುಗಳಲ್ಲಿ
ಸೃಷ್ಟಿಯೊಡನೆ ಸಂದಿಲ್ಲಿದೆ ಹೊಂದಿಕೊಂಡ ಸಹಜ ಕೃತಿಯಯ್ಯ ಸೃಷ್ಟಿ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...