Home / ಕವನ / ಕವಿತೆ / ನಂದಿಯ ಬೆಟ್ಟದ ಮೇಲುಗಡೆ

ನಂದಿಯ ಬೆಟ್ಟದ ಮೇಲುಗಡೆ

ಬೇಡದೆ ಬಿಸುಡಿದ ವಸ್ತುವೊಲಾಯ್ತಿಳೆ
ಕೆಳ ಕೆಳಗಾಳದ ಕಣಿವೆಯೊಳು;
ಕಪ್ಪೆಯ ಗೂಡೋ, ಹುತ್ತವೊ ಇದು ಎನೆ
ನಗೆಗೇಡಾಯಿತು ನೆರೆಹೊಳಲು;
ಕೆರೆಯೋ ಕೊಚ್ಚೆಯೊ, ಪೈರೋ ಪಾಚೆಯೊ,
ಹಳುವೋ ಹುಲ್ಗಾವಲ ಹರಹೋ?
ಎನ್ನುತ ಭ್ರಮಿಸುವ ತೆರವಿಂದಾಯಿತು
ನಂದಿಯ ಬೆಟ್ಟದ ಮೇಲುಗಡೆ.

ಐರಾವತವೆನೆ ಬಿಳಿಮುಗಿಲಾನೆಯ
ಸದರದಿ ಮುಟ್ಟುತ ನೇವರಿಸಿ,
ಕುಸುಮಾವಳಿಯೆನೆ ಬಾನಿನ ನೀಲವ
ಟೊಂಗೆಯ ತುದಿಯೊಳು ದೋಲಯಿಸಿ,
ಚಿರ ಯೌವನವೆನೆ ಹಸುರನು ಮೆರೆಯಿಸಿ,
ಜುಮ್ಮೆನೆ ಸುರಭಿಯ ನಿಃಶ್ವಸಿಸಿ,
ದನಿಯೊಳು ನೆಳಲೊಳು ಚೋದ್ಯಂಗೊಳಿಸುವ
ಬನವಿದಿಗೋ ಮಲೆ ಮೇಲುಗಡೆ!

ಕಿರುದೆರೆಕುದುರೆಯ ರವಿರಾವುತರನು
ಕೊಳದಂಗಣದೊಳಗೋಡಿಸುತ,
ಚಣಕೂ ಚೆದರುವ ಮೋಡದ ಮಂದೆಗೆ
ಬಾನಿನ ಬಯಲೊಳಗೂಳಿಡುತ,
ತಲೆ ಕೆದರುತ, ಮೈ ಕುಣಿಸುತ ತರುಗಳ
ಹುಡುಗಾಟಕೆ ಹುಯಿಲಿಡಿಸುತ್ತ,
ತಿಣ್ಣನೆ ಮಂದಿಯ ತುಡುಕುತ, ಜಡತೆಯ
ಕಸಿಯುವೆಲರ್ ಮಲೆ ಮೇಲುಗಡೆ.

ಪಗಲಿರುಳಾಗಿಸಿ ದೆಸೆಯೊಗ್ಗೂಡಿಸಿ
ಲೋಕವ ಮೋಹಿಸುತುರವಣಿಸಿ,
ಘುಡು ಘುಡಿಸುತಸುತಲಾರ್ಭಟಿಸುತ ಫಳ್ಳನೆ
ಪಲ್ಕಿಯುತ ಭೀಕರನೆನಿಸಿ,
ಬುದ್ಧನ ಮಾರನೊಲಚಲವ ತಾಗುತ
ಹಮ್ಮುಳಿದೋಡಲು ಕಾರ್ಮುಗಿಲು,
ನಗುತಿಹ ದೇವರ ದಿವ್ಯಸ್ಮಿತವೆನೆ
ಮಳೆಬಿಸಿಲಿದೂ ಮಲೆ ಮೇಲುಗಡೆ.

ಸೊದೆಯಂತಸುವನು ಬಿಸಿಲುದ್ದೀಪಿಸೆ
ನಲಿದುಲಿದಾಡುವೆ-ಸುರನವೊಲು;
ಕೈಯೆಡೆ ಕೋಡೊಳು ರೆಕ್ಕೆಯಗೊಳ್ಳಲು
ಮುಗಿಲುತ್ಸುಕಿಸುವೆ-ಯಕ್ಷನೊಲು;
ಗಿರಿಶನೊಲದ್ರಿಯ ನಡೆವ ಮಹಾತ್ಮನ
ಹಿಂಬಾಲಿಸುವೆನು- ಗಣರವೊಲು;
ಅಮರ್ತ್ಯಚೇತನರನೇಕಭಾವಗ-
ಳಿಂತೆನಗಹುದೈ ಮೇಲುಗಡೆ.

ಮೆಲ್ಲನೆ ಮೆಲ್ಲನೆ ಬೆಳುದೆಸೆ ದಳಗಳ
ತಿರೆ ಹೂ ಮುಚ್ಚಲು, ಇರುಳಿಳಿಯೆ,
ಶಾಂತನ ತೇಜಸ್ವಿಯ ಸಾನ್ನಿಧ್ಯದಿ
ತಮ್ಮೊಳಬೆಳಕೊಳು ಜನವೆಸೆಯೆ,
ಶ್ರುತಿ ನುಡಿಯಲು, ನುತಿಯೊಗೆಯಲು, ಕರಣಗ-
ಳಮಿತಾಚರಣೆಯ ಸುತನವೊಲು
ದಣಿದಾತ್ಮದ ಬಳಿಗೈತರ-ಅಹ ಏ-
ನುತ್ಸವವೋ ಮಲೆ ಮೇಲುಗಡೆ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...