Home / ಲೇಖನ / ಇತರೆ / ಹಳೆಯ ಪ್ರಶಸ್ತಿ ಗೊತ್ತೇ?

ಹಳೆಯ ಪ್ರಶಸ್ತಿ ಗೊತ್ತೇ?

ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ಆದ್ದರಿಂದ ಇಂದಿನ ಮಕ್ಕಳೆಲ್ಲ ವಿಜ್ಞಾನದತ್ತ ಒಲವು ತೋರಿಸಬೇಕು. ಅದರಲ್ಲೂ ಭೌತವಿಜ್ಞಾನವನ್ನು ಅಭ್ಯಸಿಸಬೇಕು. ಜ್ಞಾನ ವಿಜ್ಞಾನದ ಮುನ್ನಡೆ ದೇಶದ ಮುನ್ನೆಡೆಯಾಗಿದೆ.

ಪ್ರತಿವರ್‍ಷ ಲಂಡನ್‌ನ ರಾಯಲ್ ಸೊಸೈಟಿ ನೀಡುವ ವಿಶ್ವದ ತೀರಾ ಹಳೆಯದಾದ ವಿಜ್ಞಾನ ಪ್ರಶಸ್ತಿಯಾದ ‘ಕೋಪ್ಲೆ ಮೆಡಲ್’ ಗೆ ಭೌತವಿಜ್ಞಾನಿ ಪೀಟರ್ ಹಿಗ್ಸ್ ಅವರು ಇತ್ತೀಚೆಗೆ ಆಯ್ಕೆಯಾಗಿರುವರು. ಅವರ ‘ದೇವಕಣ’ ಶೋಧನೆಗಾಗಿ ಈ ಪ್ರಶಸ್ತಿ ನೀಡಿದೆ.

ಪೀಟರ್ ಹಿಗ್ಸ್ ದೇವಕಣ ಕುರಿತು ೧೯೬೪ ರಲ್ಲೇ ತಮ್ಮ ಸಿದ್ಧಾಂತವನ್ನು ಮಂಡಿಸಿದ್ದರು. ಇದೇ ವೇಳೆಯಲ್ಲೇ ಫ್ರಾಂಸ್ವಾ ಎನ್‌ಗ್ಲೆರ್‍ಟ್ ಇದೇ ಸಿದ್ಧಾಂತದ ಮೇಲೆ ಕೆಲಸ ಮಾಡಿದ್ದರು!

ಹೀಗಾಗಿ ಹಲವು ಪ್ರಯೋಗಗಳ ನಂತರ ೨೦೧೨ ರಲ್ಲಿ ಹಿಗ್ಸ್ ಅವರ ಸಿದ್ಧಾಂತಕ್ಕೆ ಮಾನ್ಯತೆ ನೀಡಿದೆ ಎಂದು ವರದಿಯಾಗಿದೆ. ಈ ಮಹತ್ವದ ಸಾಧನೆಗಾಗಿ ಪೀಟರ್ ಹೀಗ್ಸ್- ಎನ್‌ಗ್ಲೆರ್‍ಟ್ ಫ್ರಾಂಸ್ವಾ ಅವರಿಗೆ ೨೦೧೩ ರಲ್ಲಿ ಜೋಡಿಯಾಗಿ ೨೦೧೩ ರಲ್ಲಿ ನೊಬೆಲ್ ಬಹುಮಾನ ನೀಡಿ ಗೌರವಿಸಲಾಗಿತ್ತು!

ಜ್ಞಾನ ವಿಜ್ಞಾನ ಕಾರ್‍ಯಕ್ಷೇತ್ರದಲ್ಲಿನ ತೀರಾ ಮಹತ್ವದ ಸಾಧನೆ ಮಾಡಿದವರಿಗಾಗಿ ರಾಯಲ್ ಸೊಸೈಟಿಯು ಈ ಪುರಸ್ಕಾರವನ್ನು ನೀಡಿ ಗೌರವಿಸುವುದು.

ಈಗಾಗಲೇ ಸ್ಟೀಫನ್ ಹಾಂಕಿಂಗ್, ಅಲೆಸ್ ಜೆಫ್ರಿ, ಆಂಡ್ರೆ ಜೆಮ್ ಮೊದಲಾದ ವಿಜ್ಞಾನಿಗಳಿಗೆ ಈ ಗೌರವ ಸಂದಿರುವುದು.

ವಿಜ್ಞಾನ ಕ್ಷೇತ್ರದಲ್ಲಿ ತೀರಾ ಹಳೆಯ ಪ್ರಶಸ್ತಿಯಾದ ಕೋಪ್ಲೆ ಮೆಡಲ್ ಪಡೆದ ಚಾರ್ಲ್ಸ್ ಡಾರ್ವಿನ್- ಅಲ್ಬರ್ಟ್ ಐನ್‌ಸ್ಟೀನ್ ಅವರ ಸಾಲಿಗೆ ಪೀಟರ್ ಹೀಗ್ಸ್ ವಯಸ್ಸು ೮೬ ವರ್ಷ ಇವರೂ ಈಗ ಸೇರ್‍ಪಡೆಯಾಗಿರುವರು.

ಮೊತ್ತ ಮೊದಲ ನೊಬೆಲ್ ಬಹುಮಾನ ನೀಡುವುದಕ್ಕಿಂತ ಸುಮಾರು ೧೭೦ ವರ್ಷಗಳಿಗೆ ಮೊದಲು ಅಂದರೆ ೧೭೩೧ ರಲ್ಲಿ ರಾಯಲ್ ಸೊಸೈಟಿಯು ಕೋಪ್ಲೆ ಮೆಡಲ್ ಪ್ರಶಸ್ತಿ ನೀಡಲು ಮೊದಲಾಯಿತು. ಹೀಗಾಗಿ ಇದು ವಿಜ್ಞಾನ ಕ್ಷೇತ್ರದ ಹಳೆಯ ಪ್ರಶಸ್ತಿ ಎಂಬ ಹಿರಿಮೆಯನ್ನು ಹೊಂದಿದೆ.

ವಿಜ್ಞಾನ ಕ್ಷೇತ್ರದಲ್ಲಿ ಸಾಧಿಸಿದ ಸಾಧಕರಿಗೆ ಹೀಗೆ ಪ್ರಶಸ್ತಿಗಳ ಸುರಿಮಳೆ ವಿಶ್ವದಾದ್ಯಂತ ಇದೆಯೆಂಬುದನ್ನು ನಾವು ನೀವು ಮನಗಾಣಬೇಕಾಗಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...